ಜಮೀರ್, ಷರೀಫ್ ಅವರಿಂದ ಹೋಮ ಹವನ !!

ಇತ್ತ, ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಜನತಾದಳ ಅಭ್ಯರ್ಥಿ ಜಮೀರ್ ಅಹ್ಮದ್ ಖಾನ್ ಹಿಂದೂ ಸಂಪ್ರದಾಯದ ಧಾರ್ಮಿಕ ವಿಧಿವಿಧಾನಗಳ ಮೂಲಕ ತಮ್ಮ ಗೆಲುವಿಗೆ ವಿಶೇಷ ಹೋಮ ನಡೆಸಿದರು. ಪಕ್ಷದ ಕಾರ್ಯಕರ್ತರೊಬ್ಬರ ಮನೆಯಲ್ಲಿ ಸುದರ್ಶನ ಮತ್ತು ಕಾರ್ಯಸಿದ್ಧಿ ಹೋಮ ನಡೆಸಿದ ಜಮೀರ್, ಪೂಜಾ ಕಾರ್ಯಗಳಲ್ಲಿ ಖುದ್ದು ಪಾಲ್ಗೊಂಡು ಹೋಮದ ಪೂರ್ಣಾಹುತಿ ಸಲ್ಲಿಸಿದರು. ಹಿಂದಿನಿಂದಲೂ ಹಿಂದೂ ಸಂಪ್ರದಾಯ, ವಿಧಿವಿಧಾನಗಳಲ್ಲಿ ನನಗೆ ನಂಬಿಕೆ ಎಂದು ಜಮೀರ್ ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications