ಜಮೀರ್, ಷರೀಫ್ ಅವರಿಂದ ಹೋಮ ಹವನ !!
ಬೆಂಗಳೂರು,
ಮಾ.31: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿ ಕೆ ಜಾಫರ್ ಷರೀಫ್ ದೇಗುಲಗಳಲ್ಲಿ ಪೂಜೆ ಸಲ್ಲಿಸಲು ತಮಿಳುನಾಡಿಗೆ ತೆರಳಿದ್ದಾರೆ. ಮೊದಲಿಂದಲೂ ಈ ಪದ್ಧತಿ ಅನುಸರಿಸಿಕೊಂಡು ಬಂದಿರುವ ಅವರು ತಿರುನಲ್ಲಾರ್, ನಾಗೂರು ಸೇರಿದಂತೆ ನವಗ್ರಹ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲು ನಿನ್ನೆ ಸಂಜೆ ಪ್ರಯಾಣಿಸಿದ್ದಾರೆ. id="toptextpromo">ಇತ್ತ,
ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಜನತಾದಳ ಅಭ್ಯರ್ಥಿ ಜಮೀರ್ ಅಹ್ಮದ್ ಖಾನ್ ಹಿಂದೂ ಸಂಪ್ರದಾಯದ ಧಾರ್ಮಿಕ ವಿಧಿವಿಧಾನಗಳ ಮೂಲಕ ತಮ್ಮ ಗೆಲುವಿಗೆ ವಿಶೇಷ ಹೋಮ ನಡೆಸಿದರು. ಪಕ್ಷದ ಕಾರ್ಯಕರ್ತರೊಬ್ಬರ ಮನೆಯಲ್ಲಿ ಸುದರ್ಶನ ಮತ್ತು ಕಾರ್ಯಸಿದ್ಧಿ ಹೋಮ ನಡೆಸಿದ ಜಮೀರ್, ಪೂಜಾ ಕಾರ್ಯಗಳಲ್ಲಿ ಖುದ್ದು ಪಾಲ್ಗೊಂಡು ಹೋಮದ ಪೂರ್ಣಾಹುತಿ ಸಲ್ಲಿಸಿದರು. ಹಿಂದಿನಿಂದಲೂ ಹಿಂದೂ ಸಂಪ್ರದಾಯ, ವಿಧಿವಿಧಾನಗಳಲ್ಲಿ ನನಗೆ ನಂಬಿಕೆ ಎಂದು ಜಮೀರ್ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications