ಶವವನ್ನು ಆಸ್ಪತ್ರೆಗೆ ಮಾರಿದ ಪೊಲೀಸರು!!
ಬೆಂಗಳೂರು ಮಾ 31: ಆಗಸ್ಟ್ 3, 2006ರಂದು ಮಡಿವಾಳ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಹೋಟೆಲೊಂದರ ಮಾಲೀಕರು ಅನಾಥ ಶವವೊಂದು ತಮ್ಮ ಹೋಟೆಲ್ ಹಿಂಬದಿಯ ಜಾಗದಲ್ಲಿ ಬಿದ್ದಿದೆ ಎಂದು ಮಡಿವಾಳ ಪೊಲೀಸರಿಗೆ ದೂರು ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಶವ ಪರೀಕ್ಷೆಯ ವರದಿ ನೀಡದೇ ಅಥವಾ ಶವದ ವಾರಸುದಾರರ ಪತ್ತೆ ಮಾಡದೆಯೇ, ಯಾವುದೇ ಪೂರ್ವಾನುಮತಿ ಇಲ್ಲದೆ ಶವವನ್ನು ಸೈಂಟ್ ಜಾನ್ಸ್ ವೈದ್ಯಕೀಯ ಆಸ್ಪತ್ರೆಗೆ ಮಾರಿದ ಘಟನೆ ತಡವಾಗಿ ತಿಳಿದು ಬಂದಿದೆ.
ಘಟನೆಯ ಮಾಹಿತಿ ತಿಳಿದ ನಂತರ ಮೃತಪಟ್ಟ ವ್ಯಕ್ತಿಕಾವೇರಪ್ಪ ಎನ್ನುವವರ ಮಗ , ನಗರ ಪೋಲಿಸ್ ಆಯುಕ್ತ ಶಂಕರ್ ಬಿದರಿ ಬಳಿ ದೂರು ನೀಡಿದರು. ದೂರಿನ ಬಗ್ಗೆ ಮಡಿವಾಳ ಪೋಲಿಸ್ ಇನ್ಸ್ ಪೆಕ್ಟರ್ ಗಳಾದಕಾಂತರಾಜು, ಎಸ್ ಐ ವಿಜಯ್ ಕುಮಾರ್, ಎ ಎಸ್ ಐ ನಂಜುಂಡಯ್ಯ ಮತ್ತು ಪೇದೆ ಆದಿರಾಜು ಅವರ ವಿಚಾರಣೆ ನಡೆಸಿದ ಬಿದರಿ, ಈ ನಾಲ್ಕೂ ಜನ ಪೊಲೀಸರನ್ನು ಕೆಲಸದಿಂದ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.
(ದಟ್ಸ್ ಕನ್ನಡವಾರ್ತೆ)
ನವರಂಗ್ ಬಳಿ ಸಿಕ್ಕ ಬಾಂಬ್ ನಿಷ್ಕ್ರಿಯ : ಪೊಲೀಸ್












Click it and Unblock the Notifications