ಕನ್ನಡ ಪರ ಸಂಘಟನೆಗಳು ಒಂದಾಗಿ ಕಣಕ್ಕೆ

ಶಾಸಕರ ಭವನದಲ್ಲಿ ಭಾನುವಾರ ನಡೆದ ಅಖಿಲ ಕರ್ನಾಟಕ ಗಡಿ ರಕ್ಷಣಾ ಸಮಿತಿಯ ಸಮಾಲೋಚನೆ ಸಭೆಯಲ್ಲಿ ಮಾತನಾಡಿ, 'ಲೋಕಸಭೆಯಲ್ಲಿ ಕನ್ನಡಮತ್ತು ಕರ್ನಾಟಕ ಪರವಾಗಿ ದನಿ ಎತ್ತಲು ಚುನಾವಣೆಯಲ್ಲಿ ಸ್ಪರ್ಧಿಸಲು ನಾನಾ ಕನ್ನಡಪರ ಸಂಘಟನೆಗಳ ಮುಖಂಡರು ನಿರ್ಧರಿಸಿದ್ದಾರೆ. ಸದ್ಯಕ್ಕೆ ಆರು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಆಲೋಚನೆ ನಮ್ಮದು' ಎಂದು ಅವರು ವಿವರಿಸಿದರು.
ರಾಷ್ಟ್ರೀಯ ಪಕ್ಷಗಳ ಪ್ರತಿನಿಧಿಗಳಿಂದ ಕನ್ನಡಕ್ಕೆ ಮತ್ತು ಕನ್ನಡಿಗರಿಗೆ ಅನ್ಯಾಯ ಆಗುತ್ತಿದೆ. ಹೀಗಾಗಿ ಅಖಾಡಕ್ಕೆ ಇಳಿಯುವುದು ಅನಿವಾರ್ಯ' ಎಂದ ವಾಟಾಳ್, ಕನ್ನಡದ ಹೆಸರಿನಲ್ಲಿ ಸಮಾನ ವೇದಿಕೆ ಸೃಷ್ಟಿಸಿ ಚುನಾವಣೆ ಎದುರಿಸಲು ತೀರ್ಮಾನಿಸಲಾಗಿದೆ' ಎಂದರು.
ಜನರಿಂದಲೇ ಹಣ ಸಂಗ್ರಹ
ಚುನಾವಣೆ ಎದುರಿಸಲು ಜನರಿಂದಲೇ ಸಂಗ್ರಹಿಸುತ್ತೇವೆ. ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ಬಣ್ಣ ಬಯಲು ಮಾಡುತ್ತೇವೆ. ಪ್ರಣಾಳಿಕೆಯನ್ನು ಶೀಘ್ರ ದಲ್ಲೇ ಬಿಡುಗಡೆ ಮಾಡಲಾಗುವುದು. ಈ ಪ್ರಯೋಗಕ್ಕೆ ರಾಜ್ಯದ ಎಲ್ಲ ಕನ್ನಡ ಸಂಘಟನೆಗಳ ಬೆಂಬಲ ಪಡೆಯಲು ಮಾತುಕತೆ ಆರಂಭಿಸಿದ್ದೇವೆ ಎಂದೂ ಹೇಳಿದರು.
ಬಿಜೆಪಿಯ ಅಪರೇಷನ್ ಕಮಲವನ್ನು ಮಟ್ಟ ಹಾಕಬೇಕಿದೆ. ಜಾತ್ಯಾತೀತ ಸರ್ಕಾರಕ್ಕೆ ಕನ್ನಡ ಪರ ಸಂಘಟನೆಗಳ ಬೆಂಬಲವಿರುತ್ತದೆ. ದೇವೇಗೌಡ, ಬಂಗಾರಪ್ಪ , ಧರ್ಮಸಿಂಗ್ ಮುಂತಾದ ನಾಯಕರುಗಳ ಕ್ಷೇತ್ರಗಳಲ್ಲಿ ಅವರಿಗೆ ಬೆಂಬಲ ನೀಡುವ ಬಗ್ಗೆ ಕೂಡ ಚಿಂತನೆ ನಡೆದಿದೆ ಎಂದು ವಾಟಾಳ್ ಹೇಳಿದರು.
ರಾಜ್ಯದಲ್ಲಿನ ಅನೈತಿಕ ಪಕ್ಷಾಂತರವು ದೇಶದ ಯಾವ ಭಾಗದಲ್ಲೂ ನಡೆಯುತ್ತಿಲ್ಲ. ಬಿಜೆಪಿಯಂತೂ ಪಕ್ಷಾಂತರಿಗಳಿಗೆ ಅಂಗಡಿಗೆಯನ್ನೇ ತೆರೆದು ಕೂತಿದೆ ಎಂದು ಆರೋಪಿಸಿದರು. 'ಆರು ಕ್ಷೇತ್ರಗಳ ಬದಲು ಒಂದೇ ಕ್ಷೇತ್ರದಲ್ಲಿ ಅಭ್ಯರ್ಥಿ ನಿಲ್ಲಿಸಿ ಅವರ ಗೆಲುವಿಗೆ ಎಲ್ಲ ಕನ್ನಡಪರ ಸಂಘಟನೆಗಳೂ ಶ್ರಮಿಸಬೇಕು' ಎಂದು ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಕಿವಿಮಾತು ಹೇಳಿದರು. ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಮಾಜಿ ಶಾಸಕ ಪ್ರಭಾಕರ ರೆಡ್ಡಿ, ಕನ್ನಡ ಹೋರಾಟಗಾರರಾದ ಸಿದ್ದಯ್ಯ, ಸಾ.ರಾ.ಗೋವಿಂದು, ಕೆ.ಆರ್.ಕುಮಾರ್, ಜಗನ್ನಾಥ ರೆಡ್ಡಿ, ರಫಾಯಿಲ್ ರಾಜ್ ಮತ್ತಿತರರು ಪಾಲ್ಗೊಂಡಿದ್ದರು.
(ದಟ್ಸ್ ಕನ್ನಡವಾರ್ತೆ)
ಜನರ ನಂಬಿಕೆಗೆ ದ್ರೋಹ ಬಗೆಯುವುದಿಲ್ಲ: ಬಿಎಸ್ ವೈ












Click it and Unblock the Notifications