ಲಾಹೋರ್ ದಾಳಿ, ಮುಂಬೈ ದಾಳಿಗೂ ಸಾಮತ್ಯೆಯಿಲ್ಲ: ಚಿದು
ಲಾಹೋರ್ , ಮಾ. 30 : ಲಾಹೋರ್ ಉಗ್ರರದಾಳಿಯನ್ನು ಖಂಡಿಸಿರುವ ಭಾರತದ ಗೃಹ ಸಚಿವ ಪಿ ಚಿದಂಬರಂ, ಮುಂಬೈ ಭಯೋತ್ಪಾದನಾ ದಾಳಿಗೂ ಲಾಹೋರ್ ದಾಳಿಗೂ ಹೋಲಿಕೆ ಸರಿಯಿಲ್ಲ. ಇದು ಅಲ್ಲಿನ ಆಂತರಿಕ ಸಮಸ್ಯೆ. ಉಗ್ರರನ್ನು ಬೆಳೆಸುತ್ತಿರುವ ಪಾಕ್ , ತನ್ನ ಬುಡಕ್ಕೆ ತಾನೇ ಕೊಡಲಿ ಪೆಟ್ಟು ಕೊಟ್ಟುಕೊಳ್ಳುತ್ತಿದೆ ಎಂದಿದ್ದಾರೆ.
ಪೊಲೀಸ್ ತರಬೇತಿ ಕೇಂದ್ರದ ಮೇಲೆ ಉಗ್ರರು ನಡೆಸಿದ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಪಾಕ್ ಪ್ರಧಾನಿ ಯುಸೂಫ್ ರಾಜಾ ಗಿಲಾನಿ, ಇತ್ತೀಚೆಗೆ ಶ್ರೀಲಂಕಾ ಆಟಗಾರರ ಮೇಲೆ ನಡೆದ ದಾಳಿಗೂ ಈ ದಾಳಿಗೂ ಸಾಮ್ಯತೆಯಿದೆ ಎಂದಿದ್ದಾರೆ. ಪಾಕ್ ಸೈನಿಕರು ಹಾಗೂ ಉಗ್ರರ ನಡುವೆ ಹೋರಾಟ ಮುಂದುವರೆದಿದ್ದು, ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಒಬ್ಬನನ್ನು ಸೆರೆಹಿಡಿಯಲಾಗಿದೆ.
ತರಬೇತಿ ಕೇಂದ್ರದಲ್ಲಿರುವ ಸುಮಾರು 800 ಪೊಲೀಸರನ್ನು ಒತ್ತೆಯಲ್ಲಿಟ್ಟುಕೊಂಡಿರುವ ಉಗ್ರರು, ಈಗಾಗಲೆ 30ಕ್ಕೂ ಹೆಚ್ಚು ಜನರನ್ನು ಕೊಂದು, 210 ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿದ್ದಾರೆ. ತರಬೇತಿ ಕೇಂದ್ರದ ಸುತ್ತ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಉಗ್ರರ ಸಂಖ್ಯೆ ಹೆಚ್ಚಿರುವ ಸಾಧ್ಯತೆಯಿದೆ ಎಂದು ಪೊಲೀಸ್ ಅಧಿಕಾರಿ ಇರ್ಫಾನ್ ಹೇಳಿದ್ದಾರೆ.
(ಏಜೆನ್ಸೀಸ್)
ಪಾಕಿಸ್ತಾನ
ಪೊಲೀಸ್
ಕೇಂದ್ರದ
ಮೇಲೆ
ಉಗ್ರರ
ದಾಳಿ