ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಆರ್ಎ ಗೆ ಜಾಮೀನುರಹಿತ ವಾರಂಟ್

By Staff
|
Google Oneindia Kannada News

URA gets a warrant
ಬೆಂಗಳೂರು ಮಾ 28: ಮುಧೋಳದಲ್ಲಿ 2004ರಲ್ಲಿ ಯು. ಆರ್. ಅನಂತಮೂರ್ತಿ ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು. ಈ ಸಮಾರಂಭಕ್ಕೂ ಮುಂಚೆ ಅನಂತಮೂರ್ತಿ ಇಟಲಿ ದೇಶದ ಕಂಪನಿಯೊಂದು ಒಳ ಉಡುಪುಗಳ ಮೇಲೆ ಹಿಂದೂ ದೇವರ ಚಿತ್ರ ಮುದ್ರಿಸಿರುವುದನ್ನು ಸಮರ್ಥಿಸಿ ಹೇಳಿಕೆ ನೀಡಿದ್ದರು. ಇದರಿಂದ ಉದ್ರಿಕ್ತಗೊಂಡ ಭಜರಂಗದಳದ ಕಾರ್ಯಕರ್ತರು ನೀಲಕಂಠ ಕಂದಗಲ್ ಅವರ ನೇತೃತ್ವದಲ್ಲಿ ಈ ಸಮಾರಂಭಕ್ಕೆ ಅಡ್ಡಿಪಡಿಸಿ ಅನಂತಮೂರ್ತಿಯವರನ್ನು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದರು.

ಪೊಲೀಸರು ನೀಲಕಂಠ ಅವರ ವಿರುದ್ದ ಪ್ರಕರಣ ದಾಖಲಿಸಿಕೊಂಡು ಅನಂತಮೂರ್ತಿಯವರನ್ನು ಪ್ರಮುಖ ಸಾಕ್ಷಿಯನ್ನಾಗಿಸಿದ್ದರು. ನಂತರ ನಡೆದ ಎರಡು ವಿಚಾರಣೆಗಳಿಗೆ ಅನಂತಮೂರ್ತಿ ಹಾಜರಾಗಿರಲಿಲ್ಲ. ಗುರುವಾರ ನಡೆದ ಮೂರನೆಯ ವಿಚಾರಣೆಗೂ ಅನಂತಮೂರ್ತಿ ಹಾಜರಾಗದ ಹಿನ್ನೆಲೆಯಲ್ಲಿ ಮುಧೋಳ ಕೋರ್ಟ್ ಅವರಿಗೆ ಜಾಮೀನು ರಹಿತ ವಾರಂಟ್ ಆದೇಶ ಹೊರಡಿಸಿದೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X