ಪ್ರೇಮಿಗಳ ಮೇಲೆ ಭಜರಂಗದಳದ ದಾಳಿ
ಮಡಿಕೇರಿ, ಮಾ, 25 : ಕುಶಾಲನಗರದ ಅನ್ಯಕೋಮಿನ ಯುವಕನೊಬ್ಬ ಹಿಂದೂ ಯುವತಿಯನ್ನು ಪ್ರೀತಿಸುತ್ತಿರುವ ಆರೋಪದ ಮೇಲೆ ಭಜರಂಗದಳದ ಕಾರ್ಯಕರ್ತರು ಯುವಕನ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ ಘಟನೆ ಮಡಿಕೇರಿಯಿಂದ ವರದಿಯಾಗಿದೆ. ಯುವಕನ ತಲೆಗೆ ತೀವ್ರ ಪೆಟ್ಟಾಗಿದ್ದು ನಗರದ ಖಾಸಗಿ ಆಸ್ಪತ್ರೆಗೆ ದಾಲಿಸಲಾಗಿದೆ.
ನಗರದ ಕಾಲೇಜ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಯುವಕನ ಪರಿಚಿತ ವಿದ್ಯಾರ್ಥಿಯೊಬ್ಬ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದಾಗ ಆತನ ಮೇಲೂ ಕಾರ್ಯಕರ್ತರು ಪ್ರಹಾರ ನಡೆಸಿದ್ದಾರೆ. ಬೇರೆ ಬೇರೆ ಕೋಮಿನವರಾದ ನಾವು ಒಬ್ಬರನ್ನೊಬ್ಬರನ್ನು ಆರು ವರ್ಷದಿಂದ ಪ್ರೀತಿಸುತ್ತಿದ್ದೇವೆ. ವಿವಾಹಕ್ಕೆ ನಮ್ಮ ಮನೆಯಲ್ಲಿ ವಿರೋಧ ವ್ಯಕ್ತವಾಗುತ್ತಿದೆ ಎಂದು ದಾಳಿಯ ಸಮಯದಲ್ಲಿ ಪ್ರೇಮಿಗಳು ಹೇಳಿದ್ದಾರೆ.
ಮಡಿಕೇರಿ ನಗರ ಸಬ್ ಇನ್ಸ್ ಪೆಕ್ಟರ್ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಧಾವಿಸಿ ಭಜರಂಗದಳದ ಕಾರ್ಯಕರ್ತರನ್ನು ಸಮಾಧಾನಗೊಳಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಪೊಲೀಸರು ಪ್ರೇಮಿಗಳ ಪೋಷಕರನ್ನು ಕರೆಸಿ ಸಮಾಲೋಚನೆಯ ನಂತರ ಇಬ್ಬರನ್ನೂ ಅವರವರ ಮನೆಗೆ ಕಳುಹಿಸಿ ಕೊಟ್ಟಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications