ವರುಣ್ ಸ್ಪರ್ಧಿಸುವಂತಿಲ್ಲ ಆಯೋಗ

Varun gulity; EC asks BJP not to field Varun
ನವದೆಹಲಿ, ಮಾ. 23 : ಉತ್ತರಪ್ರದೇಶದ ಫಿಲಿಬಿತ್ ನಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಬಗ್ಗೆ ಚುನಾವಣ ಆಯೋಗ ನೀಡಿದ್ದ ನೋಟೀಸ್ ಗೆ ಬಿಜೆಪಿ ನಾಯಕ ವರುಣ್ ಗಾಂಧಿ ನೀಡಿದ್ದ ಪ್ರತಿಕ್ರಿಯೆ ತೃಪ್ತಿಕರವಾಗಿರದ ಹಿನ್ನಲೆಯಲ್ಲಿ ಕೇಂದ್ರ ಚುನಾವಣ ಆಯೋಗ, ಇವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಅನರ್ಹರು ಎಂದು ತೀರ್ಮಾನಿಸಿ ಅವರನ್ನು ಕಣಕ್ಕಿಳಿಸದಂತೆ ಭಾರತೀಯ ಜನತಾ ಪಕ್ಷಕ್ಕೆ ಸಲಹೆ ನೀಡಿದೆ.

ಭಾಷಣದ ಸಿಡಿಯನ್ನು ತಿರುಚಲಾಗಿದೆ ಎನ್ನುವ ವರುಣ್ ವಾದ ನಂಬಲರ್ಹವಾಗಿಲ್ಲ. ವರುಣ್ ಪ್ರಚೋದನಕಾರಿ ಭಾಷಣ ಮಾಡಿದ್ದು ಸತ್ಯಕರವಾಗಿದೆ. ಇದು ಆಯೋಗದ ಸಲಹೆ ಮಾತ್ರ. ನಮ್ಮ ಅಭಿಮತವನ್ನು ಪರಿಶೀಲಿಸಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಆಯೋಗ ಸ್ಪಷ್ಟಪಡಿಸಿದೆ.

ಸಾರ್ವಜನಿಕ ಚುನಾವಣಾ ಸಭೆಯೊಂದರಲ್ಲಿ 'ಇದು ಕಮಲದ ಶಕ್ತಿ ಇರುವ ಕೈ. ಹಿಂದೂಗಳನ್ನು ಅವಹೇಳನ ಮಾಡುವವರ ತಲೆ ಕತ್ತರಿಸುವ ಶಕ್ತಿ ಈ ಕೈಗಿದೆ. ಯಾರಾದರು ಹಿಂದೂಗಳ ವಿರುದ್ದ ಕೈಯೆತ್ತಿದರೆ ಗೀತೆಯ ಮೇಲಾಣೆ ಅಂತವರ ಕೈಗಳನ್ನು ಕಡಿದು ಹಾಕುವೆ, ಜೈ ಶ್ರೀರಾಮ್" ಎಂದು ವರುಣ್ ಗಾಂಧಿ ಭಾಷಣ ಮಾಡಿದ್ದರು.

(ದಟ್ಸ್ ಕನ್ನಡ ವಾರ್ತೆ)
ನಿರೀಕ್ಷಣಾ ಜಾಮೀನು ಪಡೆದ ವರುಣ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+