Get Updates
Get notified of breaking news, exclusive insights, and must-see stories!

ಕುಮಾರಣ್ಣನಿಗೆ ಗೌಡರ ಹಿತೋಪದೇಶ

ಬೆಂಗಳೂರು, ಮಾ. 23 : ಮಗನೇ, ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಎಚ್ಚರದಿಂದಿರು, ಒಳ್ಳೆ ನಡತೆಯಿಂದ ವರ್ತಿಸು. ಒಳ್ಳೆ ಬಟ್ಟೆ ಧರಿಸಿ ಜನರ ಮುಂದೆ ನಿಂತುಕೋ. ಪಾನಮತ್ತನಾಗಿ ಇನ್ನು ಮುಂದೆ ಮಾಧ್ಯಮದವರ ಮುಂದೆ ಕಾಣಿಸಿಕೊಂಡು ಹೇಳಿಕೆ ನೀಡಿದರೆ ಹುಷಾರ್ !! ಕುಮಾರಸ್ವಾಮಿಗೆ ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡ ನೀಡಿದ ಹಿತೋಪದೇಶ ಎನ್ನಲಾಗಿದೆ.

ಕಾಂಗ್ರೆಸ್ ನಲ್ಲಿ ಇದ್ದೂ ಇಲ್ಲದ ಹಾಗೆ ಇರುವ, ಬಿಜೆಪಿಯೋ ಅಥವಾ ಜನತಾದಳವೋ ಎಂದು ಇನ್ನೂ ನಿಶ್ಚಯಿಸದ ನಮ್ಮ ರೆಬೆಲ್ ಸ್ಟಾರ್ ಅಂಬರೀಶ್ ಅವರನ್ನು ಭೇಟಿ ಮಾಡಲು ಕುಮಾರಸ್ವಾಮಿ ಅವರ ಮನೆಗೆ ಹೋಗಿದ್ದರು. ಕುಮಾರಸ್ವಾಮಿ ಅವರ ಆಪ್ತ ಮೂಲದ ಪ್ರಕಾರ ಅಂಬರೀಶ್ ಅವರನ್ನು ಭೇಟಿ ಮಾಡುವ ಮುಂಚೆ ಮಾಗಡಿ ಶಾಸಕ ಬಾಲಕೃಷ್ಣ ಅವರ ಜೊತೆ ಬೆಸ್ಟ್ ಕ್ಲಬ್ ನಲ್ಲಿ ತಮ್ಮ ಆಪ್ತ ಗೆಳೆಯರ ಜೊತೆ ಸ್ವಚ್ಚಂದವಾಗಿ ಸ್ವಲ್ಪಹೊತ್ತು ಕಾಲಹರಣ ಮಾಡಿ ಕುಮಾರಸ್ವಾಮಿ ಅಲ್ಲಿಂದ ಸೀದಾ ಅಂಬರೀಶ್ ಮನೆಗೆ ಹೊರಟರು. ಅವರನ್ನು ಭೇಟಿ ಮಾಡಿ ನಂತರ ಪತ್ರಿಕೆಯವರ ಪ್ರಶ್ನೆಗಳಿಗೆ ಪಾನಮತ್ತರಾಗಿ ಉತ್ತರಿಸಿದ್ದದ್ದು ಗೌಡರ ಸಿಟ್ಟಿಗೆ ಕಾರಣವಾಗಿತ್ತು.

ವಿಷಯ ತಿಳಿದ ಗೌಡ್ರು ತಕ್ಷಣ ಕುಮಾರಸ್ವಾಮಿ ಅವರನ್ನು ಮನೆಗೆ ಕರೆಸಿಕೊಂಡು ಚೆನ್ನಾಗಿ ತರಾಟೆಗೆ ತೆಗೆದುಕೊಂಡರು ಎಂದು ಆಪ್ತಮೂಲಗಳು ತಿಳಿಸಿವೆ. ಗೌಡರ ಸಿಟ್ಟು ತಣ್ಣಗಾದ ನಂತರ ಚಿತ್ರನಟರು ಮತದಾರರನ್ನು ಓಲೈಸುತ್ತಾರೆ ಎನ್ನುವುದು ತಪ್ಪು. ಅಂಬರೀಶ್ ಈಗಾಗಲೇ ಒಂದು ಬಾರಿ ನಮ್ಮ ಕೈಬಿಟ್ಟಿದ್ದಾರೆ, ಅಂಬರೀಶ್ ಗೆ ಮುಂಚಿನ ತಾರಾವರ್ಚಸ್ಸು ಇಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶ್ರೀರಂಗಪಟ್ಟಣದಲ್ಲಿ ಪರಾಭವಗೊಂಡಿದ್ದು ಇದಕ್ಕೆ ಸಾಕ್ಷಿ. ಸುಮ್ಮನೆ ಅವರ ಹಿಂದೆ ಹೊರಟರು ಕಾಲಹರಣ ಮಾಡಬೇಡ. ಇನ್ನು ಮುಂದೆ ನನ್ನ ಅನುಮತಿಯಿಲ್ಲದೆ ಯಾವ ಚಿತ್ರನಟ, ನಟಿಯರನ್ನು ಚುನಾವಣೆಗೆ ಸಂಬಂಧಿಸಿದಂತೆ ಮಾತಾಡಕೂಡದು ಎಂದು ಬೈದು ಬುದ್ದಿ ಹೇಳಿ ಕಳುಹಿಸಿದ್ದಾರೆ ಎಂದು ಅವರ ಮೂಲಗಳ ಪ್ರಕಾರ ತಿಳಿದುಬಂದಿದೆ.

(ದಟ್ಸ್ ಕನ್ನಡ ವಾರ್ತೆ)
ಜಾತಿ ಮೋಹ ಬಿಡಿ ಲಿಂಗಾಯಿತರೆ, ಕುಮಾರಸ್ವಾಮಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+