ದರೋಡೆಕೋರರು ಕಂಡರೆ ಗುಂಡು ಹಾರಿಸಿ!

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಇದೊಂದು ಆತಂಕಕಾರಿ ಬೆಳವಣಿಗೆಯಾಗಿದ್ದು ಸ್ವಯಂ ರಕ್ಷಣೆ ಸಂದರ್ಭ ಬಂದಾಗ ಪರವಾನಗಿ ಪಡೆದ ಪಿಸ್ತೂಲು, ಬಂದೂಕು ಇದ್ದರೆ ಬಳಸಬಹುದು ಎಂದು ಅವರು ಸಲಹೆ ನೀಡಿದರು. ಬ್ಯಾಂಕ್ ನಿಂದ ಹಣ ತರುವಾಗ, ಕಂಪನಿ, ಕಾರ್ಖಾನೆಗಳು ವೇತನ ನೀಡಲು ಸಾಗಿಸುವ ಹಣ ಮತ್ತು ಆಭರಣದ ದರೋಡೆ ಪ್ರಕರಣಗಳು ನಗರದಲ್ಲಿ ಮಿತಿಮೀರುತ್ತಿವೆ. ಈ ದುಷ್ಕೃತ್ಯಗಳನ್ನು ಹದ್ದುಬಸ್ತಿಗೆ ತರಲು ಪೊಲೀಸರೊಂದಿಗೆ ಸಾರ್ವಜನಿಕರು ಸಹಕರಿಸಬೇಕು ಎಂದರು.
ಒಂದು ವೇಳೆ ನೀವು ಭಾರಿ ಮೊತ್ತದ ಹಣ, ಒಡವೆ, ವೇತನವನ್ನು ಕಾರಿನಲ್ಲಿ ಸಾಗಿಸುವಂತಿದ್ದರೆ ಸ್ಥಳೀಯ ಪೊಲೀಸರಿಗೆ ಒಂದು ದಿನ ಮುಂಚಿತವಾಗಿ ಮಾಹಿತಿ ನೀಡಿ. ಯಾವುದೇ ಶುಲ್ಕ ವಿಧಿಸದೆ ಬಂದೂಕು ಹೊಂದಿದ ಪೇದೆಯನ್ನು ನಿಮ್ಮ ಜತೆ ಕಳುಹಿಸಲಾಗುವುದು ಎಂದು ಬಿದರಿ ತಿಳಿಸಿದರು. ಆದಷ್ಟು ನಗದು ರೂಪದ ಹಣವನ್ನು ತರದೆ ಡಿಡಿ, ಚೆಕ್ ಗಳ ರೂಪದಲ್ಲಿ ವ್ಯವಹಾರ ಮಾಡಿ. ಕಾರಿನಲ್ಲಿ, ದ್ವಿಚಕ್ರ ವಾಹನಗಳಲ್ಲಿ ಹೋಗುವಾಗ ಹಿಂಬಾಲಿಸುವ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ನಿಗಾ ವಹಿಸಿ. ಖಾಸಗಿ ಪತ್ತೆದಾರಿ ಸಂಸ್ಥೆಗಳು ಮತ್ತು ಅಪರಾಧ ಪತ್ತೆ ದಳಗಳ ನೆರವಿನೊಂದಿಗೆ ಪ್ರಕರಣಗಳನ್ನು ಭೇದಿಸಲಾಗುತ್ತಿದೆ ಎಂದು ವಿವರ ನೀಡಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications