ದಾವಣಗೆರೆಯಿಂದ ಮಹಿಮಾ ಪಟೇಲ್ ಕಣಕ್ಕೆ

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಹಿಮಾ ಪಟೇಲ್, ದಾವಣಗೆರೆಯಿಂದ ಸ್ಪರ್ಧಿಸುವುದನ್ನು ಖಚಿತಪಡಿಸಿದ್ದಾರೆ. ಅಲ್ಲದೇ ತಮ್ಮ ಸಹೋದರ ತ್ರಿಶೂಲ್ ಪಾಣಿ ಪಟೇಲ್ ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದರು. ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡ ಜೆಡಿಎಸ್ ಪಕ್ಷಕ್ಕೆ ಮರಳುವಂತೆ ಮನವಿ ಮಾಡಿಕೊಂಡಿದ್ದರು.
ಆದರೆ, ನಾನು ಅವರ ಮನವಿಯನ್ನು ನಿರಾಕರಿಸಿರುವೆ ಎಂದರದಲ್ಲದೆ, ಯಾವ ಕಾರಣಕ್ಕೂ ಜೆಡಿಎಸ್ ಸೇರುವುದಿಲ್ಲ. ನಾನು ಪಕ್ಷೇತರನಾಗಿ ನಿಲ್ಲುವೆ, ನನಗೆ ಜೆಡಿಎಸ್ ಬೆಂಬಲ ಸೂಚಿಸಲಿ ಎಂದು ಕೇಳಿಕೊಳ್ಳಲಾಗಿದೆ ಎಂದು ಹೇಳಿದರು. ದಾವಣಗೆರೆಯಲ್ಲಿ ಎಡಪಕ್ಷಗಳು ಬಲಶಾಲಿಯಾಗಿದ್ದು, ತೃತೀಯ ರಂಗದ ಅಭ್ಯರ್ಥಿಯಾಗಿ ಕಣಕ್ಕಿಲಿಯುವೆ ಎಂದು ಮಹಿಮಾ ಸ್ಪಷ್ಟಪಡಿಸಿದರು. ಸರ್ವೋದಯ ಪಕ್ಷ, ರೈತ ಸಂಘಗಳು ನನಗೆ ಬೆಂಬಲ ನೀಡಲಿವೆ ಎಂದು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications