ಲಾಲು, ರಾಬ್ಡಿ ಮಂದಿರ ನಿರ್ಮಾಣಕ್ಕೆ ಪೋಲೀಸರ ತಡೆ

Laloo
ಪಟ್ನಾ, ಮಾ. 18 : ತಮಿಳುನಾಡಿನಲ್ಲಿ ಸಿನಿಮಾ ನಟಿಯರಿಗೆ ದೇವಾಲಯ ಕಟ್ಟಿಸುವ ವಿಷಯ ಹಲವು ಬಾರಿ ಕೇಳಿದ್ದೆವು. ಆದರೆ, ಅದೀಗ ವರ್ಣರಂಜಿತ ರಾಜಕಾರಣಿ ಎಂದೇ ಪ್ರಖ್ಯಾತಿಯಾಗಿರುವ ಕೇಂದ್ರ ರೈಲ್ವೆ ಮಂತ್ರಿ ಲಾಲು ಪ್ರಸಾದ್ ಯಾದವ್ ಅವರಿಗೊಂದು ದೇವಾಲಯ ನಿರ್ಮಾಣಕ್ಕೆ ಅಭಿಮಾನಿಗಳ ಮುಂದಾಗಿದ್ದಾರೆ.

ರಾಷ್ಟ್ರೀಯ ಜನತಾದಳದ ಕಾರ್ಯಕರ್ತರು ತಮ್ಮ ಆರಾಧ್ಯದೈವ 'ಪತ್ನಿ ರಾಬ್ಡಿ ದೇವಿ ಸಮೇತ ಲಾಲು ಪ್ರಸಾದ್' ದೇವಾಲಯ ನಿರ್ಮಾಣಕ್ಕೆ ರೋಹ್ತಾಸ್ ಜಿಲ್ಲೆಯಲ್ಲಿ ಮುಂದಾಗಿದ್ದರು. ಆದರೆ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಪೋಲಿಸರಿಂದ ಬಂಧನಕ್ಕೆ ಒಳಗಾಗಿದ್ದಾರೆ.

ಚುನಾವಣಾ ನೀತಿಸಂಹಿತೆ ಅಂದರೆ ಏನು? ನಾವು ಲಾಲು ಅವರ ಅಭಿಮಾನಿ, ಅವರನ್ನೇ ದೇವರೆಂದು ಪೂಜಿಸುವವರು. ಚುನಾವಣಾ ದೃಷ್ಟಿಯಿಂದ ನಾವು ಈ ಕೆಲಸಕ್ಕೆ ಮುಂದಾಗಿಲ್ಲ. ಅವರಿಗಾಗಿ ನಾವು ನೇಣು ಹಾಕಿಕೊಳ್ಳಲು ಸಿದ್ದ ಎನ್ನುತ್ತಾರೆ ಲಾಲು ಅಭಿಮಾನಿ ರಾಜೇಶ್ವರ್ ಯಾದವ್. ಎರಡು ದಿನದ ಹಿಂದೆಯಷ್ಟೆ ದೇವಾಲಯಕ್ಕಾಗಿ ಭಾರಿ ಅಭಿಮಾನಿಗಳ ಸಮ್ಮುಖದಲ್ಲಿ ಗುದ್ದಲಿ ಪೂಜೆ ಮತ್ತು ಹೋಮಹವನ ನೆರವೇರಿಸಲಾಗಿತ್ತು.

ಮಂಗಳವಾರ ಮತ್ತೆ ಈ ದೇವಾಲಯದ ಕಾಮಗಾರಿಗೆ ಮುಂದಾದಾಗ ಜಿಲ್ಲಾ ಆಡಳಿತ ಎಲ್ಲಾ ಕಾರ್ಯಕರ್ತರನ್ನು ಬಂಧಿಸಿದೆ ಮತ್ತು ಆರ್ ಜೆ ಡಿ ಗೆ ರಾಜ್ಯ ಸರಕಾರ ನೋಟೀಸ್ ಕಳುಹಿಸಿದೆ.

(ದಟ್ಸ್ ಕನ್ನಡ ವಾರ್ತೆ)
ಬಿಹಾರದಲ್ಲಿ ಆರ್ ಜೆಡಿ-ಎಲ್ ಜೆಪಿ ಮೈತ್ರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+