ಕುಂದಾಪುರದ ಬಳಿ ಮಸೀದಿ ಮೇಲೆ ದಾಳಿ
ಬೈಂದೂರು, ಮಾ. 17 : ಕುಂದಾಪುರ ತಾಲ್ಲೂಕಿನ ಉಪ್ಪುಂದ ಬಳಿಯ ಮಡಿಕಲ್ ಜುಮ್ಮಾ ಮಸೀದಿಯ ಮೇಲೆ ಭಾನುವಾರ ರಾತ್ರಿ ದುಷ್ಕರ್ಮಿಗಳು ದಾಳಿ ಮಾಡಿದ್ದು, ಕೆಲ ಪಿಠೋಪಕರಣಗಳು ಸೇರಿದಂತೆ ಲೈಟ್ ಗಳು, ಫ್ಯಾನ್ ಗಳನ್ನು ಹಾನಿಗೊಳಿಸಲಾಗಿದೆ. ನೆಲಕ್ಕೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚುವ ವಿಫಲ ಪ್ರಯತ್ನ ಮಾಡಲಾಗಿದೆ.
ಸೋಮವಾರ ಬೆಳಗ್ಗೆ ದಾಳಿ ಪ್ರಕರಣ ಬೆಳಕಿಗೆ ಬಂದಿದ್ದು, ಘಟನೆಗೆ ಸಂಬಂಧಿಸಿದಂತೆ ಯಾರ ಬಗ್ಗೆಯೂ ಮಸೀದಿಯ ಆಡಳಿತ ಮಂಡಳಿ ಸಂಶಯ ವ್ಯಕ್ತಪಡಿಸಿಲ್ಲ. ಆದರೆ, ಕಾಕತಾಳೀಯವಾಗಿ ಮಂಗಳೂರಿನಲ್ಲಿ ಭಾನುವಾರ ನಡೆದ ಹಿಂದೂ ಸಮಾಜೋತ್ಸವ ಇದರೊಂದಿಗೆ ತಳಕು ಹಾಕಿಕೊಂಡಿದೆ. ಸಮಾಜೋತ್ಸವ ಮುಗಿಸಿ ಮಂಗಳೂರಿನಿಂದ ಉಡುಪಿಗೆ ಕಡೆಗೆ ತೆರಳುತ್ತಿದ್ದ ಹಿಂದೂ ಸಂಘಟನೆಗಳಿಗೆ ಸೇರಿದ ಕಾರ್ಯಕರ್ತರ ಮೇಲೆ ಉಡುಪು ತಾಲ್ಲೂಕಿನ ಮೂಳೂರು ಮಸೀದಿ ಬಳಿ ಕಲ್ಲು ತೂರಾಟ ನಡೆದಿತ್ತು. ಆ ಬಳಿಕವೇ ಮಡಿಕಲ್ ಬಳಿ ಮಸೀದಿಯ ಮೇಲೆ ದಾಳಿ ನಡೆದಿದೆ ಎನ್ನಲಾಗಿದೆ. ಇದು ಹಿಂದೂ ಸಂಘಟನೆಗಳ ಕಾರ್ಯಕರ್ತರ ಕೃತ್ಯ ಎನ್ನಲಾಗಿದೆ. ಚುನಾವಣೆಯಲ್ಲಿ ಲಾಭ ಪಡೆಯಲು ಕಿಡಿಗೇಡಿಗಳು ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
(ದಟ್ಸ್
ಕನ್ನಡ
ವಾರ್ತೆ)
ಕಾಪು,
ವಿಟ್ಲದಲ್ಲಿ
ಕಲ್ಲು
ತೂರಾಟ,
ಉದ್ವಿಗ್ನ