ಸುಳ್ಳುಗಾರ ದೇವೇಗೌಡರಿಗೆ ಬುದ್ಧಿ ಕಲಿಸಿ, ರೆಡ್ಡಿ
ಬಳ್ಳಾರಿ, ಮಾ. 16 : ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡ ಬಹುದೊಡ್ಡ ನಾಟಕಕಕಾರ, ಮುಸ್ಲಿಮರ ಮತ ದೋಚುವ ಸಲುವಾಗಿ ನನಗೆ ಮುಂದಿನ ಜನ್ಮವೊಂದಿದ್ದರೆ ಮುಸ್ಲಿಂ ಆಗಿ ಹುಟ್ಟುವೆ ಎಂದು ಸುಳ್ಳು ಹೇಳುವ ಆ ಸಮುದಾಯಕ್ಕೆ ಭಾರಿ ಮೋಸ ಮಾಡಿದ್ದಾರೆ ಎಂದು ಗೌಡರ ಕುಟುಂಬದ ವೈರಿ ಎಂದೇ ಪರಿಗಣಿಸಲ್ಪಟ್ಟಿರುವ ಪ್ರವಾಸೋಧ್ಯಮ ಖಾತೆ ಸಚಿವ ಜಿ ಜನಾರ್ದನರೆಡ್ಡಿ ಆರೋಪಿಸಿದ್ದಾರೆ.
ಬಳ್ಳಾರಿಯಲ್ಲಿ ಚುನಾವಣೆ ಪ್ರಚಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇವೇಗೌಡ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಮತ ಗಳಿಸಲು ದೇವೇಗೌಡರು ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ ಎನ್ನುವುದಕ್ಕೆ ಅನೇಕ ಸಾಕ್ಷಿಗಳಿವೆ. ಮುಂದಿನ ಜನ್ಮ ಇದ್ದರೆ, ಮುಸ್ಲಿಮನಾಗಿ ಹುಟ್ಟುವೆ ಎಂದು ಹೇಳಿಕೆ ನೀಡಿ ಮತ ಗಿಟ್ಟಿಸಿಕೊಳ್ಳಬಹುದೇ, ವಿನಃ ಆ ಸಮುದಾಯಕ್ಕೆ ಕಿಂಚತ್ತೂ ಸಹಾಯ ಮಾಡಿಲ್ಲ. ಈ ಮೂಲಕ ಮುಸ್ಲಿಮರಿಗೆ ದೇವೇಗೌಡರಿಗೆ ದೊಡ್ಡ ವಂಚನೆ ಮಾಡಿದ್ದು ಸುಳ್ಳಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಳ್ಳಾರಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಸಚಿವ ಶ್ರೀರಾಮುಲು ಅವರ ಸಹೋದರಿ ಜೆ ಶಾಂತಿ ಸ್ಪರ್ಧಿಸಿದ್ದು, ಗೆಲುವು ನಮ್ಮದೆ, ಅತ್ಯಂತ ಬಹುಮತದಿಂದ ಶಾಂತಿ ಅವರನ್ನು ಆರಿಸಿ ತರೋಣ. ಅದಕ್ಕೆ ನಿಮ್ಮೆಲ್ಲರ ಬೆಂಬಲ ಅಗತ್ಯ ಎಂದು ರೆಡ್ಡಿ ಮನವಿ ಮಾಡಿಕೊಂಡರು.
(ದಟ್ಸ್ ಕನ್ನಡ ವಾರ್ತೆ)
ಅಲ್ಪಸಂಖ್ಯಾತರ ಜೀವನ ಭಯದಲ್ಲಿದೆ : ಯುಆರ್ ಎ
ತೆಲುಗು ಚಿತ್ರ ಅರ್ಪಿಸಿದ ಸಚಿವ ಜನಾರ್ದನರೆಡ್ಡಿ












Click it and Unblock the Notifications