Get Updates
Get notified of breaking news, exclusive insights, and must-see stories!

ಮುಂಡಗೋಡದಲ್ಲಿ ಕಲ್ಲು ತೂರಾಟ, ಪರಿಸ್ಥಿತಿ ಉದ್ವಿಗ್ನ

Mundagod is tense
ಮುಂಡಗೋಡ, ಮಾ. 16 : ಹೋಳಿ ಹಬ್ಬದ ಮೆರವಣಿಗೆ ಮೇಲೆ ಕೆಲವು ಕಿಡಿಗೇಡಿಗಳು ಭಾನುವಾರ ಕಲ್ಲು ಮತ್ತು ಚಪ್ಪಲಿ ತೂರಾಟ ನಡೆಸಿದ್ದರಿಂದ ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಘಟನೆಯಲ್ಲಿ ಎಸ್ಪಿ ಸೇರಿ 15 ಮಂದಿ ಗಾಯಗೊಂಡಿದ್ದಾರೆ. 3 ಪೊಲೀಸ್ ಜೀಪ್ ಗಳು, ಹಲವು ರಿಕ್ಷಾಗಳು, ದ್ವಿಚಕ್ರ ವಾಹನ ಜಖಂಗೊಂಡಿವೆ. ಗೂಡಂಗಡಿಗಳನ್ನು ಧ್ವಂಸಗೊಳಿಸಲಾಗಿದೆ.

ಹೋಳಿ ಅಂಗವಾಗಿ ಹಳ್ಳೂರಿನಿಂದ ಕಾಮನ ಮೆರವಣಿಗೆ ಸಾಗುತ್ತಿತ್ತು. ಮೆರವಣಿಗೆ ಯಲ್ಲಾಪುರ ರಸ್ತೆಯ ಬಸ್ತಿಕಟ್ಟೆ ಬಳಿ ಬಂದಾಗ ಪ್ರಾರ್ಥನಾ ಮಂದಿರದಿಂದ ಕೆಲವರು ಚಪ್ಪಲಿ ತೂರಿದರು. ಇದರ ಹಿಂದೆಯೇ ಮೆರವಣಿಗೆ ಮೇಲೆ ನೂರಾರು ಕಲ್ಲುಗಳು ತೂರಿಬಂದವು. ಕಲ್ಲು ತೂರಾಟದಲ್ಲಿ ಕಾಮಣ್ಣನ ಮೂರ್ತಿ ಭಗ್ನಗೊಂಡಿತು. ಮೆರವಣಿಗೆಯಲ್ಲಿ ಸಾಗುತ್ತಿದ್ದವರು ಕೆರಳಿ ಪ್ರತಿಕಾರವಾಗಿ ಪ್ರಾರ್ಥನಾ ಮಂದಿರದ ಮೇಲೆ ಕಲ್ಲು ತೂರಾಟ ಆರಂಭಿಸಿದರು.

ಸುದ್ದಿ ತಿಳಿದ ತಕ್ಷಣ ಎರಡು ಕೋಮಿನ ಸಾವಿರಾರು ಮಂದಿ ಕೋಲು, ದೊಣ್ಣೆ ಹಿಡಿದು ಹಿಂಸಾಚಾರಕ್ಕಿಳಿದರು. ಗಲಭೆಯಲ್ಲಿ ಕೆಲವು ಗೂಡಂಗಡಿಗಳು ವಾಹನಗಳು ಧ್ವಂಸಗೊಂಡವು. ಪ್ರಾರ್ಥನಾ ಮಂದಿರದ ಗಾಜುಗಳು ಪುಡಿಪುಡಿಯಾದವು. ಬಸ್ ನಿಲ್ದಾಣದ ಬಳಿ ಬಸ್ಸೊಂದಕ್ಕೆ ಕೆಲವರು ಬೆಂಕಿ ಹಚ್ಚಲು ಮುಂದಾದಾಗ ಪೊಲೀಸರು ವಿಫಲಗೊಳಿಸಿದರು. ಕೆಲವೇ ಗಂಟೆಗಳಲ್ಲಿ ಗಲಭೆ ಇಡೀ ಪಟ್ಟಣಕ್ಕೆ ವ್ಯಾಪಿಸಿತು. ಘಟನೆ ಖಂಡಿಸಿ ಹಿಂದೂ ಸಂಘಟನೆಗಳು ಇಂದು ಮುಂಡಗೋಡ ಬಂದ್ ಗೆ ಕೆರೆ ನೀಡಿವೆ.

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ
ಹಿಂದೂಗಳು ಭಯೋತ್ಪಾದಕರು, ಫಾದರ್
ಹೋಳಿ ಆಚರಿಸೋಣು, ಓಕುಳಿ ಎರಚೋಣು ಬರ್ರಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+