ಡಿವಿಜಿ ಅವರ 122ನೇ ಜನ್ಮದಿನಾಚರಣೆ

ಡಿ.ವಿ. ಗುಂಡಪ್ಪನವರು ಬಾಳಿ ಬದುಕಿದ್ದು 19 ಮತ್ತು 20 ನೆಯ ಶತಮಾನಗಳಲ್ಲಿ. ಕನ್ನಡ ನೆಲದಲ್ಲಿ ಜನಿಸಿ ಸಾಹಿತ್ಯ, ವೃತ್ತಪತ್ರಿಕೆ, ರಾಜಕೀಯ, ಸಾಮಾಜಿಕ ಸಂಘಟನೆ, ಸಾರ್ವಜನಿಕ ಸೇವೆ ಮುಂತಾದ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದ ಗುಂಡಪ್ಪನವರು ವಿರಳರಲ್ಲಿ ವಿರಳರು. ಇಂತಹ ಮಹಾನ್ ವ್ಯಕ್ತಿ ಯಾವುದಾದರೂ ಮುಂದುವರಿದ ರಾಷ್ಟ್ರದಲ್ಲಿ ಜನಿಸಿದ್ದರೆ ಅಲ್ಲಿನ ಅತ್ಯುನ್ನತ ಪದವಿಯನ್ನು ಅಲಂಕರಿಸುತ್ತಿದ್ದರು ಎಂಬುದು ಅವರನ್ನು ಅಭ್ಯಸಿಸಿದ ಮತ್ತು ಹತ್ತಿರದಿಂದ ಕಂಡ ಗಣ್ಯ ವ್ಯಕ್ತಿಗಳ ಸ್ಪಷ್ಟವಾದ ಅಭಿಪ್ರಾಯವಾಗಿದೆ.
ಡಿವಿಜಿಯವರನ್ನು ಇಂದಿನ ಜನಾಂಗಕ್ಕೆ ಪರಿಚಯಿಸುವ ಸದುದ್ದೇಶದಿಂದ ಸಮಾಜ ಸೇವಕರ ಸಮಿತಿಯು ಕಿರುಚಿತ್ರವೊಂದನ್ನು ನಿರ್ಮಿಸುತ್ತಿದೆ. ಡಿವಿಜಿಯವರನ್ನು ಕಣ್ಣಾರೆ ಕಂಡಿದ್ದ, ಅವರ ಸಾಹಿತ್ಯ ಕಾರ್ಯದಲ್ಲಿ ಒಡನಾಟದಲ್ಲಿದ್ದ, ಅವರ ಶಿಷ್ಯತ್ವವನ್ನು ಸ್ವೀಕರಿಸಿದ್ದ, ಅವರ ಸಾಹಿತ್ಯವನ್ನು ಅಭ್ಯಸಿಸಿರುವ ಮಹನೀಯರು ಮತ್ತು ಡಿವಿಜಿ ಕುಟುಂಬಸ್ಥರನ್ನು ಸಂದರ್ಶನ ಮಾಡಿರುವ ದೃಶ್ಯಗಳು, ಇಂದಿನ ಡಿವಿಜಿ ರಸ್ತೆಯ ದೃಶ್ಯಗಳನ್ನು ಈ ಕಿರುಚಿತ್ರ ಒಳಗೊಂಡಿರುತ್ತದೆ. ಈ ಚಿತ್ರವನ್ನು ಮಾರ್ಚ್ 17ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರದರ್ಶಿಸುವ ಗುರಿಯನ್ನು ಹೊಂದಿದೆ, ಆ ಸಲುವಾಗಿಯೇ ಭರದಿಂದ ಕಾರ್ಯ ಸಾಗುತ್ತಿದೆ. ಈ ಕೆಲಸವನ್ನು ಅಂದುಕೊಂಡ ಸಮಯದಲ್ಲೇ ಸಾಧಿಸುವ ನಂಬಿಕೆಯನ್ನಿಟ್ಟುಕೊಂಡಿದೆ.
ಕಾರ್ಯಕ್ರಮ ವಿವರ:
ಡಿವಿಜಿಯವರ 122ನೆಯ ಜನ್ಮದಿನದ ಶೀರ್ಷಿಕೆಯಾಗಿ "ತಬ್ಬಿಕೊಳೊ ವಿಶ್ವವನು - ಮಂಕುತಿಮ್ಮ" ಎಂದಿಟ್ಟುಕೊಳ್ಳಲಾಗಿದೆ. ಡಿವಿಜಿಯವರಿಂದ ಸ್ಥಾಪಿತವಾದ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಎಸ್. ಆರ್. ರಾಮಸ್ವಾಮಿಯವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿರುತ್ತಾರೆ. ಖ್ಯಾತ ಶಿಕ್ಷಣ ತಜ್ಞ ಡಾ.ಗುರುರಾಜ ಕರಜಗಿಯವರು ಅಧ್ಯಕ್ಷ ಸ್ಥಾನವನ್ನು ಅಲಂಕರಿಸುತ್ತಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಡಿವಿಜಿಯವರ "ಮೈಸೂರಿನ ದಿವಾನರು" - ಜ್ಞಾಪಕ ಚಿತ್ರಶಾಲೆ ಮತ್ತು ಪ್ರಹಸನ ತ್ರಯೀ ನಾಟಕವನ್ನು ಆಧರಿಸಿದ "ತಲ್ಲಣಿಸುತಿದೆ ಜನಗಣಮನ..." ಎಂಬ ಕಿರುನಾಟಕವೊಂದನ್ನು ಪ್ರದರ್ಶಿಸಲಾಗುತ್ತಿದೆ. ಪರಿಕಲ್ಪನೆ, ರಚನೆ ಮತ್ತು ನಿರ್ದೇಶನದ ಹೊಣೆ ಹೊತ್ತಿರುವವರು ವೇದಪುಷ್ಪ. ಗಾಯನ ಡಾ. ರೋಹಿಣಿ ಮೋಹನ್ರವರದು. ಸಮಿತಿಯ ಸದಸ್ಯರು ಅಭಿನಯಿಸುತ್ತಿದ್ದಾರೆ.
ಕಾರ್ಯಕ್ರಮ ನಡೆಯುವ ಸ್ಥಳ ಮತ್ತು ಸಮಯ:
ಏ.ಡಿ.ಏ ರಂಗ ಮಂದಿರ, ಜೆ. ಸಿ. ರಸ್ತೆ, ಬೆಂಗಳೂರು
ದಿನಾಂಕ: ಮಾರ್ಚ್ 17, 2009, ಮಂಗಳವಾರ
ಸಮಯ: ಸಂಜೆ 5 ಗಂಟೆಗೆ
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ರಾಜ ಕುಮಾರ್ - 94481 71069
ನವೀನ - 98868 22119
ರಾಘವೇಂದ್ರ - 98866 83008
ಎಲ್ಲರಿಗೂ ಮುಕ್ತ ಹೃದಯದ ಸ್ವಾಗತವನ್ನು ಬಯಸುವವರು ಸಮಾಜ ಸೇವಕರ ಸಮಿತಿಯ ಸದಸ್ಯರು.
(ದಟ್ಸ್ ಕನ್ನಡ ಸಭೆ ಸಮಾರಂಭ)
ಪೂರಕ ಓದಿಗೆ
ಕನ್ನಡದ ಹೆಮ್ಮೆಯ ಸಾರುವ ಟೀ ಶರ್ಟ್ಗಳು
ಕನ್ನಡಿಗರ ಮನದಲ್ಲಿ ಆತ್ಮ ವಿಶ್ವಾಸ ತುಂಬುವ ಟೀ ಶರ್ಟ್!
ಒಂದೇ ಟಿ ಶರ್ಟಿನ ಎರಡು ಮುಖಗಳು
-
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು












Click it and Unblock the Notifications