ಬಿಎಸ್ ವೈ ಸರ್ಕಾರಕ್ಕೆ ನಾನಾ ಕಷ್ಟಗಳು: ಕೋಡಿ ಮಠ

Kodimath pontiff
ಹಾಸನ, ಮಾ. 12 : ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರದ ಪಾಲಿಗೆ ಕಂಟಕ ತಪ್ಪಿದ್ದಲ್ಲ. ಮುಂದೆಯೂ ನಾನಾ ಸಮಸ್ಯೆಗಳಲ್ಲಿ ಸಿಲುಕಿ ಅವರು ತೊಳಲಾಡಲಿದ್ದಾರೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಮುತ್ತಿನ ರಾಶಿ ಮೂರು ಭಾಗವಾಗುತ್ತದೆ, ಕೇಂದ್ರದಲ್ಲಿ ಮೂರು ಪಕ್ಷಗಳು ಸೇರಿ ಅಧಿಕಾರ ಹಿಡಿದರೂ, ಸ್ಥಿರ ಸರಕಾರ ರಚನೆ ಅಸಾಧ್ಯ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಮತ್ತು ಮಹಿಳೆಯರು ಇರುತ್ತಾರೆ, ಅಲ್ಲದೆ ಅಧಿಕಾರ ಪಡೆಯುವುದರಲ್ಲೂ ಯಶಸ್ವಿಯಾಗುತ್ತಾರೆ ಎಂದು ಶ್ರೀಗಳು ಹೇಳಿದರು.

2009 ನೇ ಸಾಲಿನಲ್ಲಿ ಸಮುದ್ರದ ದಿಕ್ಕಿನಲ್ಲಿ ಭಾರಿ ಆಪತ್ತು ಕಾದಿದೆ. ಜಲಪ್ರಳಯವಾಗಲಿದ್ದು ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಒಟ್ಟಾರೆ ಈ ವರ್ಷ ದೇಶದ ಭವಿಷ್ಯ ಚೆನ್ನಾಗಿಲ್ಲ. ಕೋಡಿಮಠಕ್ಕೂ ರಾಜಕೀಯಕ್ಕೂ ಸಂಬಂಧವಿಲ್ಲ. ದೇಶದ ಸುಭದ್ರತೆ ದೃಷ್ಟಿಯಿಂದ ಆಡಳಿತ ಯಂತ್ರಕ್ಕೆ ಆಗಾಗ ಮಾರ್ಗದರ್ಶನ ನೀಡುತ್ತೇವೆ ಎಂದು ಶ್ರೀಗಳು ಪುನರುಚ್ಚರಿಸಿದರು. ಅರಸೀಕೆರೆ ತಾಲೂಕಿನ ಕೋಡಿಮಠದಲ್ಲಿ ನಿನ್ನೆ ಸ್ವಾಮೀಜಿಯವರ ಪಟ್ಟಾಧಿಕಾರದ ರಜತ ಮಹೋತ್ಸವ ಕಾರ್ಯಕ್ರಮಕ್ಕೂ ಮೊದಲು ಶ್ರೀಗಳು ಈ ಭವಿಷ್ಯ ನುಡಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಬಿಜೆಪಿ ಸರ್ಕಾರಕ್ಕೆ ಅಲ್ಪಾವಧಿ : ಕೋಡಿಮಠಶ್ರೀ ಭವಿಷ್ಯ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+