ಬಿಎಸ್ ವೈ ಸರ್ಕಾರಕ್ಕೆ ನಾನಾ ಕಷ್ಟಗಳು: ಕೋಡಿ ಮಠ

ಮುತ್ತಿನ ರಾಶಿ ಮೂರು ಭಾಗವಾಗುತ್ತದೆ, ಕೇಂದ್ರದಲ್ಲಿ ಮೂರು ಪಕ್ಷಗಳು ಸೇರಿ ಅಧಿಕಾರ ಹಿಡಿದರೂ, ಸ್ಥಿರ ಸರಕಾರ ರಚನೆ ಅಸಾಧ್ಯ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಮತ್ತು ಮಹಿಳೆಯರು ಇರುತ್ತಾರೆ, ಅಲ್ಲದೆ ಅಧಿಕಾರ ಪಡೆಯುವುದರಲ್ಲೂ ಯಶಸ್ವಿಯಾಗುತ್ತಾರೆ ಎಂದು ಶ್ರೀಗಳು ಹೇಳಿದರು.
2009 ನೇ ಸಾಲಿನಲ್ಲಿ ಸಮುದ್ರದ ದಿಕ್ಕಿನಲ್ಲಿ ಭಾರಿ ಆಪತ್ತು ಕಾದಿದೆ. ಜಲಪ್ರಳಯವಾಗಲಿದ್ದು ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಒಟ್ಟಾರೆ ಈ ವರ್ಷ ದೇಶದ ಭವಿಷ್ಯ ಚೆನ್ನಾಗಿಲ್ಲ. ಕೋಡಿಮಠಕ್ಕೂ ರಾಜಕೀಯಕ್ಕೂ ಸಂಬಂಧವಿಲ್ಲ. ದೇಶದ ಸುಭದ್ರತೆ ದೃಷ್ಟಿಯಿಂದ ಆಡಳಿತ ಯಂತ್ರಕ್ಕೆ ಆಗಾಗ ಮಾರ್ಗದರ್ಶನ ನೀಡುತ್ತೇವೆ ಎಂದು ಶ್ರೀಗಳು ಪುನರುಚ್ಚರಿಸಿದರು. ಅರಸೀಕೆರೆ ತಾಲೂಕಿನ ಕೋಡಿಮಠದಲ್ಲಿ ನಿನ್ನೆ ಸ್ವಾಮೀಜಿಯವರ ಪಟ್ಟಾಧಿಕಾರದ ರಜತ ಮಹೋತ್ಸವ ಕಾರ್ಯಕ್ರಮಕ್ಕೂ ಮೊದಲು ಶ್ರೀಗಳು ಈ ಭವಿಷ್ಯ ನುಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಬಿಜೆಪಿ ಸರ್ಕಾರಕ್ಕೆ ಅಲ್ಪಾವಧಿ : ಕೋಡಿಮಠಶ್ರೀ ಭವಿಷ್ಯ












Click it and Unblock the Notifications