ರಾಮನಗರ ಕಾಂಗ್ರೆಸ್ ನಾಯಕನ ಪುತ್ರ ಕೊಲೆ
ಬೆಂಗಳೂರು, ಮಾ. 12 : ಕೊಲೆಗಳ ಸರಣಿ ನಗರದಲ್ಲಿ ಮುಂದುವರೆದಿದ್ದು, ರಾಮನಗರದ ಕಾಂಗ್ರೆಸ್ ಮುಖಂಡರೊಬ್ಬರ ಪುತ್ರನನ್ನು ಹಾಡುಹಗಲೇ ಕೊಲೆ ಮಾಡಿರುವ ಘಟನೆ ಗುರುವಾರ ಮಧ್ಯಾಹ್ನ ನಗರದ ಪರಪ್ಪನ ಅಗ್ರಹಾರದ ಬಳಿ ನಡೆದಿದೆ.
ಲೋಹಿತ್ ಮೃತಪಟ್ಟ ದುರ್ದೈವಿಯಾಗಿದ್ದು, ಮೃತಯುವಕ ರಾಮನಗರದ ಕಾಂಗ್ರೆಸ್ ನಾಯಕರ ಪುತ್ರ ಎನ್ನಲಾಗಿದೆ. ನಾಗರಭಾವಿಯಲ್ಲಿ ಈತನು ವಾಸವಾಗಿದ್ದು, ಘಟನೆಗೆ ಕಾರಣ ತಿಳಿದು ಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications