ತೃತೀಯ ರಂಗದ ಸಮಾವೇಶಕ್ಕೆ ದೇವೇಗೌಡ ಚಾಲನೆ

Devegowda inaugurates Third Front rally
ದಾಬಸ್ ಪೇಟೆ, ಮಾ. 12 : ಜ್ಯೋತಿಷಿಗಳ ನೀಡಿರುವ ಶುಭ ಮಹೂರ್ತ 11.48 ಗಂಟೆಗೆ ದಾಬಸ್ ಪೇಟೆ ಬಿಪಿಎಲ್ ಮೈದಾನದಲ್ಲಿ ಆಯೋಜಿಸಲಾಗಿರುವ ತೃತೀಯ ರಂಗದ ಬೃಹತ್ ಸಮಾವೇಶವನ್ನು ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡ ಜ್ಯೋತಿ ಬೆಳಗಿಸುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು. ಆದರೆ, ತೃತೀಯ ರಂಗ ಪ್ರಮುಖ ಮುಖಂಡರು ಸಮಾವೇಶ ಉದ್ಘಾಟನೆ ವೇಳೆಯಲ್ಲಿ ಯಾರೂ ವೇದಿಕೆ ಮೇಲೆ ಇಲ್ಲದಿರುವುದು ಅನೇಕ ಗುಮಾನಿಗಳಿಗೆ ಕಾರಣವಾಗಿತ್ತು. ನಂತರ ಕಾರ್ಯಕ್ರಮ ಆಯೋಜಕರು ಶೀಘ್ರದಲ್ಲಿ ತೃತೀಯ ರಂದ ಪ್ರಮುಖರು ವೇದಿಕೆ ಆಗಮಿಸಲಿದ್ದಾರೆ ಎಂದು ಹೇಳಿದ ನಂತರ ನೆರೆದವರು ನಿಟ್ಟುಸಿರುಬಿಟ್ಟರು.

ಇಂದಿನ ದಿನದಲ್ಲಿ ಯಾವ ಪಕ್ಷ ಯಾರ ಜೊತೆಗೆ ಮೈತ್ರಿ ಮಾಡಿಕೊಳ್ಳತ್ತವೆ, ಯಾವಾಗ ಮೈತ್ರಿ ಮುರಿದು ಬೀಳುತ್ತವೆಯೋ ಗೊತ್ತಿಲ್ಲ. ನಿನ್ನೆಯವರೆಗೂ ತೃತೀಯ ರಂಗ ಪ್ರಮುಖರು ಪಾಲ್ಗೊಳ್ಳುತ್ತಾರೆ ಎಂದು ಬೊಬ್ಬ ಹಾಕುತ್ತಿದ್ದವರು, ಏಕಾಏಕಿ ದೇವೇಗೌಡ ಮಾತ್ರ ಸಮಾವೇಶ ಉದ್ಘಾಟನೆ ಮಾಡಿರುವುದು ತೀವ್ರ ಕುತೂಹಲಕ್ಕೂ ಕಾರಣವಾಗಿತ್ತು.

ಹೋಮ-ಹವನ, ಭವಿಷ್ಯ, ಜ್ಯೋತಷಿಗಳ ಸಲಹೆಯನ್ನು ಚಾಚು ತಪ್ಪದೆ ನಡೆಸಿಕೊಂಡು ಬಂದಿರುವ ದೇವೇಗೌಡ, ಇಂದು ಕೂಡಾ ಅದನ್ನು ಮುಂದುವರೆಸಿದರು, 11.48ಕ್ಕೆ ಶುಭ ಮಹೂರ್ತವಿದ್ದರಿಂದ ಸಮಾವೇಶವನ್ನು ಉದ್ಘಾಟಿಸಿದರು. ಆದರೆ, ತೃತೀಯ ರಂಗದಲ್ಲಿರುವ ಎಡಪಕ್ಷಗಳ ಮುಖಂಡರು ಪಕ್ಕ ನಾಸ್ತಿಕ ಮಂದಿ, ಇಂತವರೊಂದಿಗೆ ಮೈತ್ರಿ ಮಾಡಿಕೊಂಡಿರುವ ದೇವೇಗೌಡ ಹೇಗೆ ಹೆಣಗುತ್ತಾರೋ ಕಾದು ನೋಡಬೇಕು.

(ದಟ್ಸ್ ಕನ್ನಡ ವಾರ್ತೆ)
ಜೆಡಿಎಸ್ ಸಾರಥ್ಯದಲ್ಲಿ ತೃತೀಯ ರಂಗಕ್ಕೆ ಚಾಲನೆ
ತೃತೀಯ ರಂಗ ಸೇರುವುದಿಲ್ಲ, ಬಿಜೆಡಿ ಸ್ಪಷ್ಟನೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+