ತೃತೀಯ ರಂಗದ ಸಮಾವೇಶಕ್ಕೆ ದೇವೇಗೌಡ ಚಾಲನೆ

ಇಂದಿನ ದಿನದಲ್ಲಿ ಯಾವ ಪಕ್ಷ ಯಾರ ಜೊತೆಗೆ ಮೈತ್ರಿ ಮಾಡಿಕೊಳ್ಳತ್ತವೆ, ಯಾವಾಗ ಮೈತ್ರಿ ಮುರಿದು ಬೀಳುತ್ತವೆಯೋ ಗೊತ್ತಿಲ್ಲ. ನಿನ್ನೆಯವರೆಗೂ ತೃತೀಯ ರಂಗ ಪ್ರಮುಖರು ಪಾಲ್ಗೊಳ್ಳುತ್ತಾರೆ ಎಂದು ಬೊಬ್ಬ ಹಾಕುತ್ತಿದ್ದವರು, ಏಕಾಏಕಿ ದೇವೇಗೌಡ ಮಾತ್ರ ಸಮಾವೇಶ ಉದ್ಘಾಟನೆ ಮಾಡಿರುವುದು ತೀವ್ರ ಕುತೂಹಲಕ್ಕೂ ಕಾರಣವಾಗಿತ್ತು.
ಹೋಮ-ಹವನ, ಭವಿಷ್ಯ, ಜ್ಯೋತಷಿಗಳ ಸಲಹೆಯನ್ನು ಚಾಚು ತಪ್ಪದೆ ನಡೆಸಿಕೊಂಡು ಬಂದಿರುವ ದೇವೇಗೌಡ, ಇಂದು ಕೂಡಾ ಅದನ್ನು ಮುಂದುವರೆಸಿದರು, 11.48ಕ್ಕೆ ಶುಭ ಮಹೂರ್ತವಿದ್ದರಿಂದ ಸಮಾವೇಶವನ್ನು ಉದ್ಘಾಟಿಸಿದರು. ಆದರೆ, ತೃತೀಯ ರಂಗದಲ್ಲಿರುವ ಎಡಪಕ್ಷಗಳ ಮುಖಂಡರು ಪಕ್ಕ ನಾಸ್ತಿಕ ಮಂದಿ, ಇಂತವರೊಂದಿಗೆ ಮೈತ್ರಿ ಮಾಡಿಕೊಂಡಿರುವ ದೇವೇಗೌಡ ಹೇಗೆ ಹೆಣಗುತ್ತಾರೋ ಕಾದು ನೋಡಬೇಕು.
(ದಟ್ಸ್ ಕನ್ನಡ ವಾರ್ತೆ)
ಜೆಡಿಎಸ್ ಸಾರಥ್ಯದಲ್ಲಿ ತೃತೀಯ ರಂಗಕ್ಕೆ ಚಾಲನೆ
ತೃತೀಯ ರಂಗ ಸೇರುವುದಿಲ್ಲ, ಬಿಜೆಡಿ ಸ್ಪಷ್ಟನೆ












Click it and Unblock the Notifications