ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಮಚಂದ್ರಪುರ ಮಠದ ವಿರುದ್ಧ ಬಂಗಾರಪ್ಪ ವಾಗ್ಧಾಳಿ
ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಬಹುತೇಕ ಸಮಯವನ್ನು ಶ್ರೀ ರಾಮಚಂದ್ರಪುರಮಠ ಮತ್ತು ಯಡಿಯೂರಪ್ಪನವರು ಮಠಗಳಿಗೆ ನೀಡಿದ ಹಣದ ಕುರಿತೇ ಮಾತನಾಡಿದರು. ಈ ಮಠ ಇದೇ ಎಂದು ನನಗೆ ಗೊತ್ತಿರಲಿಲ್ಲ. ಎರಡು ವರ್ಷಗಳ ಹಿಂದೆ ಸ್ವಾಮೀಜಿ ಆರೆಸ್ಸಸ್ ನಾಯಕ ಸುದರ್ಶನ್ ಅವರನ್ನು ಕರೆದು ದನಗಳ ಪ್ರದರ್ಶನ ಮಾಡಿದಾಗ ಇವರು ಬಿಜೆಪಿ ಸ್ವಾಮಿ ಎಂದು ಗೊತ್ತಾಯಿತು. ಯಾರೂ ಈ ಮಠಕ್ಕೆ ಹೋಗುವುದಿಲ್ಲ. ಇವರ ಹತ್ತಿರ ಯಾವ ವೋಟೂ ಇಲ್ಲ, ಪಾಟೂ ಇಲ್ಲ. ಇದಾದರೂ ಇದ್ದಿದ್ದರೆ ನಮಸ್ಕಾರ ಎನ್ನಬಹುದಿತ್ತು. ಇವರ ಮಾತನ್ನು ಕೂಡ ಯಾರೂ ಕೇಳಲ್ಲ ಎಂದರು. ಇಂಥ ಮಠಕ್ಕೆ ಮುಜರಾಯಿ ದೇವಸ್ಥಾನವಾದ ಗೋಕರ್ಣ ದೇವಸ್ಥಾನವನ್ನು ಯಡಿಯೂರಪ್ಪ ಈ ಮಠಕ್ಕೆ ಕೊಟ್ಟಿದ್ದಲ್ಲದೆ, ಒಟ್ಟು ನಾಲ್ಕು ಕೋಟಿ ಹಣ ನೀಡಿದ್ದಾರೆ. ಇದು ಯಾರಪ್ಪನ ಮನೆಯ ಹಡಬೆ ದುಡ್ಡು. ಇದಕ್ಕೆ ತೆರಿಗೆ ಇದೆಯಾ ಎಂದು ಅವರು ಕಟುಕಿದರು.
(ದಟ್ಸ್ ಕನ್ನಡ ವಾರ್ತೆ)
Story first published: Monday, March 9, 2009, 10:14 [IST]