ರಾಮಚಂದ್ರಪುರ ಮಠದ ವಿರುದ್ಧ ಬಂಗಾರಪ್ಪ ವಾಗ್ಧಾಳಿ
ಬೆಂಗಳೂರು,
ಮಾ. 9 : ಎರಡು ಗೊಡ್ಡೆಮ್ಮೆ, ಎರಡು ಆಕಳು ಇಟ್ಟುಕೊಂಡು ಫೋಟೋ ತೆಗೆಸಿಕೊಳ್ಳೋ ಸ್ವಾಮಿಯ ಬಳಿ ವೋಟೂ ಇಲ್ಲ, ಏನೂ ಇಲ್ಲ. ಈ ಮಠದ ಬಳಿ ಜನರೇ ಹೋಗೋಲ್ಲ. ಇಂಥ ಬಿಜೆಪಿ ಸ್ವಾಮಿಗೆ ಯಡಿಯೂರಪ್ಪ ಯಾರಪ್ಪನ ಮನೆಯ ಹಡಬೆ ದುಡ್ಡು ಎಂದು ಕೋಟಿಗಟ್ಟಲೆ ನೀಡಿದ್ದಾರೆ ? ಹೀಗೆ ಓತಪ್ರೋತವಾಗಿ ಹೊಸನಗರದ ರಾಮಚಂದ್ರಾಪುರ ಮಠದ ಶ್ರೀಗಳನ್ನು ಬಾಯ್ತುಂಬ ಬೈಯ್ದವರು ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ. id="toptextpromo">ಕಾಂಗ್ರೆಸ್
ಮುಖಂಡರ ಸಭೆಯಲ್ಲಿ ಬಹುತೇಕ ಸಮಯವನ್ನು ಶ್ರೀ ರಾಮಚಂದ್ರಪುರಮಠ ಮತ್ತು ಯಡಿಯೂರಪ್ಪನವರು ಮಠಗಳಿಗೆ ನೀಡಿದ ಹಣದ ಕುರಿತೇ ಮಾತನಾಡಿದರು. ಈ ಮಠ ಇದೇ ಎಂದು ನನಗೆ ಗೊತ್ತಿರಲಿಲ್ಲ. ಎರಡು ವರ್ಷಗಳ ಹಿಂದೆ ಸ್ವಾಮೀಜಿ ಆರೆಸ್ಸಸ್ ನಾಯಕ ಸುದರ್ಶನ್ ಅವರನ್ನು ಕರೆದು ದನಗಳ ಪ್ರದರ್ಶನ ಮಾಡಿದಾಗ ಇವರು ಬಿಜೆಪಿ ಸ್ವಾಮಿ ಎಂದು ಗೊತ್ತಾಯಿತು. ಯಾರೂ ಈ ಮಠಕ್ಕೆ ಹೋಗುವುದಿಲ್ಲ. ಇವರ ಹತ್ತಿರ ಯಾವ ವೋಟೂ ಇಲ್ಲ, ಪಾಟೂ ಇಲ್ಲ. ಇದಾದರೂ ಇದ್ದಿದ್ದರೆ ನಮಸ್ಕಾರ ಎನ್ನಬಹುದಿತ್ತು. ಇವರ ಮಾತನ್ನು ಕೂಡ ಯಾರೂ ಕೇಳಲ್ಲ ಎಂದರು. ಇಂಥ ಮಠಕ್ಕೆ ಮುಜರಾಯಿ ದೇವಸ್ಥಾನವಾದ ಗೋಕರ್ಣ ದೇವಸ್ಥಾನವನ್ನು ಯಡಿಯೂರಪ್ಪ ಈ ಮಠಕ್ಕೆ ಕೊಟ್ಟಿದ್ದಲ್ಲದೆ, ಒಟ್ಟು ನಾಲ್ಕು ಕೋಟಿ ಹಣ ನೀಡಿದ್ದಾರೆ. ಇದು ಯಾರಪ್ಪನ ಮನೆಯ ಹಡಬೆ ದುಡ್ಡು. ಇದಕ್ಕೆ ತೆರಿಗೆ ಇದೆಯಾ ಎಂದು ಅವರು ಕಟುಕಿದರು. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications