ರಾಮಚಂದ್ರಪುರ ಮಠದ ವಿರುದ್ಧ ಬಂಗಾರಪ್ಪ ವಾಗ್ಧಾಳಿ

S Bangarappa
ಬೆಂಗಳೂರು, ಮಾ. 9 : ಎರಡು ಗೊಡ್ಡೆಮ್ಮೆ, ಎರಡು ಆಕಳು ಇಟ್ಟುಕೊಂಡು ಫೋಟೋ ತೆಗೆಸಿಕೊಳ್ಳೋ ಸ್ವಾಮಿಯ ಬಳಿ ವೋಟೂ ಇಲ್ಲ, ಏನೂ ಇಲ್ಲ. ಈ ಮಠದ ಬಳಿ ಜನರೇ ಹೋಗೋಲ್ಲ. ಇಂಥ ಬಿಜೆಪಿ ಸ್ವಾಮಿಗೆ ಯಡಿಯೂರಪ್ಪ ಯಾರಪ್ಪನ ಮನೆಯ ಹಡಬೆ ದುಡ್ಡು ಎಂದು ಕೋಟಿಗಟ್ಟಲೆ ನೀಡಿದ್ದಾರೆ ? ಹೀಗೆ ಓತಪ್ರೋತವಾಗಿ ಹೊಸನಗರದ ರಾಮಚಂದ್ರಾಪುರ ಮಠದ ಶ್ರೀಗಳನ್ನು ಬಾಯ್ತುಂಬ ಬೈಯ್ದವರು ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ.

ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಬಹುತೇಕ ಸಮಯವನ್ನು ಶ್ರೀ ರಾಮಚಂದ್ರಪುರಮಠ ಮತ್ತು ಯಡಿಯೂರಪ್ಪನವರು ಮಠಗಳಿಗೆ ನೀಡಿದ ಹಣದ ಕುರಿತೇ ಮಾತನಾಡಿದರು. ಈ ಮಠ ಇದೇ ಎಂದು ನನಗೆ ಗೊತ್ತಿರಲಿಲ್ಲ. ಎರಡು ವರ್ಷಗಳ ಹಿಂದೆ ಸ್ವಾಮೀಜಿ ಆರೆಸ್ಸಸ್ ನಾಯಕ ಸುದರ್ಶನ್ ಅವರನ್ನು ಕರೆದು ದನಗಳ ಪ್ರದರ್ಶನ ಮಾಡಿದಾಗ ಇವರು ಬಿಜೆಪಿ ಸ್ವಾಮಿ ಎಂದು ಗೊತ್ತಾಯಿತು. ಯಾರೂ ಈ ಮಠಕ್ಕೆ ಹೋಗುವುದಿಲ್ಲ. ಇವರ ಹತ್ತಿರ ಯಾವ ವೋಟೂ ಇಲ್ಲ, ಪಾಟೂ ಇಲ್ಲ. ಇದಾದರೂ ಇದ್ದಿದ್ದರೆ ನಮಸ್ಕಾರ ಎನ್ನಬಹುದಿತ್ತು. ಇವರ ಮಾತನ್ನು ಕೂಡ ಯಾರೂ ಕೇಳಲ್ಲ ಎಂದರು. ಇಂಥ ಮಠಕ್ಕೆ ಮುಜರಾಯಿ ದೇವಸ್ಥಾನವಾದ ಗೋಕರ್ಣ ದೇವಸ್ಥಾನವನ್ನು ಯಡಿಯೂರಪ್ಪ ಈ ಮಠಕ್ಕೆ ಕೊಟ್ಟಿದ್ದಲ್ಲದೆ, ಒಟ್ಟು ನಾಲ್ಕು ಕೋಟಿ ಹಣ ನೀಡಿದ್ದಾರೆ. ಇದು ಯಾರಪ್ಪನ ಮನೆಯ ಹಡಬೆ ದುಡ್ಡು. ಇದಕ್ಕೆ ತೆರಿಗೆ ಇದೆಯಾ ಎಂದು ಅವರು ಕಟುಕಿದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+