ತೃತೀಯ ರಂಗದ ಸಭೆ ವಿಫಲಕ್ಕೆ ಬಿಜೆಪಿ ಸಂಚು

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೊದಲು ಬಸ್ ಸೌಲಭ್ಯ ಒದಗಿಸುತ್ತೇವೆ ಎಂದು ಹೇಳಿ ಇದೀಗ ಮೀನಮೇಷ ಏಣಿಸುತ್ತಿರುವುದನ್ನು ನೋಡಿದರೆ, ಇದರಲ್ಲಿ ರಾಜಕೀಯ ಷಡ್ಯಂತ್ರ ಅಡಗಿದೆ ಎಂದು ದೂರಿದರು. ಈಗಾಗಲೇ ನಾವು ಸಮಾವೇಶಕ್ಕೆ ಸುಮಾರು 3000 ಸಾವಿರ ಬಸ್ ಗಳು ಬೇಕಿವೆ ಎಂದು ಮನವಿ ಮಾಡಿಕೊಂಡಿದ್ದೇವು. ಅದಕ್ಕೆ ಅಧಿಕಾರಿಗಳಿಂದ ಸಕಾರಾತ್ಮಕ ಉತ್ತರ ಬಂದಿತ್ತು. ಆದರೆ, ಸರ್ಕಾರದ ಕೆಲ ಸಚಿವರ ದುರುದ್ದೇಶದಿಂದ ಅಧಿಕಾರಿಗಳು ತಮ್ಮ ಮಾತನ್ನು ಬದಲಿಸುತ್ತಿದ್ದಾರೆ. ಇದಕ್ಕೆ ರಾಜಕೀಯ ತಂತ್ರಗಾರಿಕೆ ಕಾರಣ ಎಂದು ಕುಮಾರಸ್ವಾಮಿ ಟೀಕಿಸಿದರು.
ನನ್ನನ್ನು ಸಂಪರ್ಕಿಸಿಲ್ಲ, ಅಶೋಕ್
ಜೆಡಿಎಸ್ ನೇತೃತ್ವದ ತೃತೀಯರಂಗದ ಸಮಾವೇಶಕ್ಕೆ ಬೇಕಿರುವ ಕುರಿತು ನನ್ನನ್ನು ಈವರೆಗೂ ಯಾರೂ ಸಂಪರ್ಕಿಸಿಲ್ಲ. ದಾಬಸ್ ಪೇಟೆಯ ತೃತೀಯ ರಂಗದ ಸಮಾವೇಶವನ್ನು ವಿಫಲಗೊಳಿಸಲು ನಮ್ಮಂಥ ಸಣ್ಣ ಮನುಷ್ಯರಿಂದ ಸಾಧ್ಯವಿಲ್ಲ ಎಂದು ಸಾರಿಗೆ ಸಚಿವ ಆರ್ ಅಶೋಕ್ ಲೇವಡಿ ಮಾಡಿದ್ದಾರೆ. ಸರ್ಕಾರ ಸಮಾವೇಶಕ್ಕೆ ಬಸ್ ಸೌಲಭ್ಯ ಒದಗಿಸುತ್ತದೆ. ಆದರೆ, 3000 ಸಾವಿರ ಬಸ್ ಗಳನ್ನು ಒದಗಿಸಲು ಸಾಧ್ಯವಿಲ್ಲ. 1000 ಬಸ್ ಗಳನ್ನು ಒದಗಿಸಬಹುದು ಎಂದರು. ನಮಗೆ ಈಗಾಗಲೇ ಹೈಕೋರ್ಟ್ ನಿರ್ದೇಶನ ನೀಡಿದೆ. ಜನಸಾಮಾನ್ಯರಿಗೆ ತೊಂದರೆ ಆಗದಂತೆ ಹೆಚ್ಚುವರಿ ಬಸ್ ಗಳನ್ನು ಸಮಾವೇಶಕ್ಕೆ ನೀಡಲಾಗುವುದು ಅಶೋಕ್ ಸ್ಪಷ್ಟಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)
ಮಾ.12ಕ್ಕೆ ತೃತೀಯ ರಂಗಕ್ಕೆ ಚಾಲನೆ, ದೇವೇಗೌಡ












Click it and Unblock the Notifications