ರಾಘವೇಂದ್ರ ಸ್ಪರ್ಧೆಯಲ್ಲಿ ತಪ್ಪಿಲ್ಲ, ಸುರೇಶ್ ಕುಮಾರ್
ಮೈಸೂರು, ಮಾ. 9 : ಪಕ್ಷದ ರಾಷ್ಟ್ರೀಯ ಚುನಾವಣೆ ಸಮಿತಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪುತ್ರ ಬಿವೈ ರಾಘವೇಂದ್ರನಿಗೆ ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಸಲು ತೀರ್ಮಾನಿಸಿದೆ. ಈ ನಿರ್ಧಾರದಲ್ಲಿ ಯಾವ ವ್ಯಕ್ತಿಗಳ ಪ್ರಭಾವವಾಗಲಿ, ವಸೂಲಿಬಾಜಿ ಇಲ್ಲ ನಡೆದಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಕುಮಾರ್ ಸಮರ್ಥಿಸಿಕೊಂಡಿದ್ದಾರೆ.
ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಆಯೋಜಿಸಿದ್ದ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯಾವ ಪ್ರಭಾವಕ್ಕೂ ಬಳಗಾಗದೆ, ಶಿವಮೊಗ್ಗ ಜಿಲ್ಲೆಯ ಮುಖಂಡರು, ಕಾರ್ಯಕರ್ತರ ಒತ್ತಾಯದ ಮೇರೆಗೆ ಸಿಎಂ ಪುತ್ರನನ್ನು ಆಯ್ಕೆಯನ್ನು ಅಂತಿಮಗೊಳಿಸಲಾಗಿದೆ ಎಂದರು. ಲೋಕಸಭೆ ಚುನಾವಣೆ ಬಿಜೆಪಿ ಸಕಲ ಸಿದ್ಧತೆ ಮಾಡಿಕೊಂಡಿದೆ. ರಾಜ್ಯದ 28 ಲೋಕಸಭೆ ಕ್ಷೇತ್ರಗಳಲ್ಲಿ 22 ರಿಂದ 24 ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಅವರು ವಿಶ್ವಾಸದಿಂದ ಹೇಳಿದರು.
ಯುಪಿಎ ಸರ್ಕಾರದ ದುರಾಡಳಿತವನ್ನು ಜನಸಾಮಾನ್ಯರಿಗೆ ತಿಳಿಸುವುದಾಗಿ ಹೇಳಿದ ಅವರು, ಪ್ರತಿ ಹಂತದಲ್ಲಿ ಕಾಂಗ್ರೆಸ್ ನೇತೃತ್ವದ ಯಪಿಎ ಸರ್ಕಾರದ ವೈಫಲ್ಯ ಕಂಡಿರುವುದು ಕಣ್ಣೆದುರಿಗಿದೆ. ಭಯೋತ್ಪಾದನೆ ಬಗ್ಗೆ ಮೃದುಧೋರಣೆಯಿಂದ ಇಂದು ದೇಶದ ವಿವಿಧೆಡೆ ಉಗ್ರರು ಅಟ್ಟಹಾಸ ಮೆರೆದಿರುವುದು ದುರ್ದೈವದ ಸಂಗತಿ. ದೇಶವನ್ನು ಅಧಃಪತನಕ್ಕೆ ಕೊಂಡೊಯ್ಯವಲ್ಲಿ ಯುಪಿಎ ಪಾತ್ರ ಮಹತ್ವಾದ್ದಾಗಿದೆ ಎಂದು ಸುರೇಶ್ ಕುಮಾರ್ ಟೀಕಿಸಿದರು.
(ದಟ್ಸ್ ಕನ್ನಡ ವಾರ್ತೆ)
ರಾಘವೇಂದ್ರನಿಗೆ ಟಿಕೆಟ್ ಸಮರ್ಥಿಸಿಕೊಂಡ ಸಿಎಂ












Click it and Unblock the Notifications