ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜಾತಕಫಲ ಚೆನ್ನಾಗಿದ್ದರೆ ಮಾತ್ರ ಎಐಎಡಿಎಂಕೆ ಟಿಕೆಟ್
ಚುನಾವಣೆಗೆ ಸ್ಪರ್ಧಿಸಲು ಬಯಸುವ ಅಭ್ಯರ್ಥಿಗಳು ತಮ್ಮ ಜಾತಕ, ಜನ್ಮದಿನಾಂಕ ಮತ್ತು ಹುಟ್ಟಿದ ಸಮಯದ ವಿವರಗಳನ್ನು ಸಲ್ಲಿಸುವುದು ಕಡ್ಡಾಯ. ಆಮೇಲೆ ಜ್ಯೋತಿಷಿಗಳು ಕೂಲ೦ಕಷವಾಗಿ ತಾರಾಬಲ ಸರಿ ಹೊಂದುವ ಅಭ್ಯರ್ಥಿಗಳ ಪಟ್ಟಿಯನ್ನು ಅಮ್ಮನಿಗೆ ನೀಡುತ್ತಾರೆ. ಅದರ ಮೇಲೆ ಟಿಕೆಟ್ ಸಿಗುತ್ತೋ ಇಲ್ಲವೊ ಎಂದು ನಿರ್ಧಾರವಾಗುತ್ತದೆ.
ಜಯಲಲಿತಾ ಅನುಸರಿಸುತ್ತಿರುವ ಈ ಕ್ರಮದ ಬಗ್ಗೆ ಪಕ್ಷದ ಬಹಳಷ್ಟು ನಾಯಕರಿಗೂ ಸಹಮತವಿದೆ. ಈ ಕ್ರಮ ತುಂಬಾ ಉಪಯೋಗಕಾರಿ, ಅಮ್ಮನವರ ಆಸೆಯೇ ನಮ್ಮ ಆಸೆ. ಅವರ ಜಯಕ್ಕಾಗಿ ನಾವೆಲ್ಲ ದುಡಿಯುತ್ತೇವೆ ಎನ್ನುತ್ತಾರೆ ಟಿಕೆಟ್ ಆಕಾ೦ಕ್ಷಿಗಳು. ಟಿಕೆಟ್ ಗಾಗಿ ಈ ಪಕ್ಷದ ಅಭ್ಯರ್ಥಿಗಳು "ಜ್ಯೋತಿಷಿಗಳ" ಜೊತೆ ಹೊಂದಾಣಿಕೆ ಮಾಡಿಕೊಂಡು ತಮ್ಮ ಹುಟ್ಟಿದ ಸಮಯ, ದಿನಾ೦ಕವನ್ನೇ ಬದಲಾಯಿಸಿಕೊಂಡು ಬಿಟ್ಟರೆ ?
(ದಟ್ಸ್ ಕನ್ನಡ ವಾರ್ತೆ)
Comments
Story first published: Monday, March 9, 2009, 14:14 [IST]