ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾತಕಫಲ ಚೆನ್ನಾಗಿದ್ದರೆ ಮಾತ್ರ ಎಐಎಡಿಎಂಕೆ ಟಿಕೆಟ್

By Staff
|
Google Oneindia Kannada News

For Amma, horoscopes decide party tickets
ಚೆನ್ನೈ, ಮಾ. 9 : ಅಭ್ಯರ್ಥಿಗಳ ಜಾತಕಫಲ ಚೆನ್ನಾಗಿದ್ದರೆ ಮಾತ್ರ ಲೋಕಸಭೆಯ ಟಿಕೆಟ್ ನೀಡಲು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ನಿರ್ಧರಿಸಿದ್ದಾರೆ. ಜಾತಕ ಭವಿಷ್ಯವನ್ನು ನಮ್ಮ ದೇವೇಗೌಡರಿಗಿಂತಲೂ ಒಂದು ಕೈ ಮೇಲೆ ನಂಬುವ ಜಯಲಲಿತಾ, ಅಭ್ಯರ್ಥಿಗಳು ಎಷ್ಟೇ ಜನಪರ ಕೆಲಸ ಮಾಡಿದ್ದರೂ ಅವರಿಗೆ ಗೆಲ್ಲುವ ಯೋಗ ಇದೆ ಎಂದು ಜ್ಯೋತಿಷಿಗಳು ಅನುಮೋದಿಸಿದರೆ ಮಾತ್ರ ಟಿಕೆಟ್ ನೀಡಲು "ಅಮ್ಮ" ನಿರ್ಧರಿಸಿದ್ದಾರೆ ಎ೦ದು ಎಐಡಿಎಂಕೆ ಮೂಲಗಳಿ೦ದ ವರದಿಯಾಗಿದೆ.

ಚುನಾವಣೆಗೆ ಸ್ಪರ್ಧಿಸಲು ಬಯಸುವ ಅಭ್ಯರ್ಥಿಗಳು ತಮ್ಮ ಜಾತಕ, ಜನ್ಮದಿನಾಂಕ ಮತ್ತು ಹುಟ್ಟಿದ ಸಮಯದ ವಿವರಗಳನ್ನು ಸಲ್ಲಿಸುವುದು ಕಡ್ಡಾಯ. ಆಮೇಲೆ ಜ್ಯೋತಿಷಿಗಳು ಕೂಲ೦ಕಷವಾಗಿ ತಾರಾಬಲ ಸರಿ ಹೊಂದುವ ಅಭ್ಯರ್ಥಿಗಳ ಪಟ್ಟಿಯನ್ನು ಅಮ್ಮನಿಗೆ ನೀಡುತ್ತಾರೆ. ಅದರ ಮೇಲೆ ಟಿಕೆಟ್ ಸಿಗುತ್ತೋ ಇಲ್ಲವೊ ಎಂದು ನಿರ್ಧಾರವಾಗುತ್ತದೆ.

ಜಯಲಲಿತಾ ಅನುಸರಿಸುತ್ತಿರುವ ಈ ಕ್ರಮದ ಬಗ್ಗೆ ಪಕ್ಷದ ಬಹಳಷ್ಟು ನಾಯಕರಿಗೂ ಸಹಮತವಿದೆ. ಈ ಕ್ರಮ ತುಂಬಾ ಉಪಯೋಗಕಾರಿ, ಅಮ್ಮನವರ ಆಸೆಯೇ ನಮ್ಮ ಆಸೆ. ಅವರ ಜಯಕ್ಕಾಗಿ ನಾವೆಲ್ಲ ದುಡಿಯುತ್ತೇವೆ ಎನ್ನುತ್ತಾರೆ ಟಿಕೆಟ್ ಆಕಾ೦ಕ್ಷಿಗಳು. ಟಿಕೆಟ್ ಗಾಗಿ ಈ ಪಕ್ಷದ ಅಭ್ಯರ್ಥಿಗಳು "ಜ್ಯೋತಿಷಿಗಳ" ಜೊತೆ ಹೊಂದಾಣಿಕೆ ಮಾಡಿಕೊಂಡು ತಮ್ಮ ಹುಟ್ಟಿದ ಸಮಯ, ದಿನಾ೦ಕವನ್ನೇ ಬದಲಾಯಿಸಿಕೊಂಡು ಬಿಟ್ಟರೆ ?

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X