ಸರ್ಕಾರ ಪರವಾಗಿ ಬಿಡ್ ನಲ್ಲಿ ಪಾಲ್ಗೊಳ್ಳಲಿಲ್ಲ:ಮಲ್ಯ

ನಮ್ಮ ದೇಶಕ್ಕೆ ಸಂಬಂಧಪಟ್ಟ ವಸ್ತುಗಳನ್ನು ನಮ್ಮದೇ ರಾಷ್ಟ್ರಕ್ಕೆ ಮರಳಿ ತರುವುದು ನನ್ನ ಉದ್ದೇಶವಾಗಿತ್ತು. ಅದಕ್ಕಾಗಿ ನಾನು ಸ್ವತಂತ್ರವಾಗಿ ಹರಾಜಿನಲ್ಲಿ ಭಾಗವಹಿಸಿ ಬಿಡ್ ಮಾಡಿದೆ. ಇದೊಂದು ಭಾವನಾತ್ಮಕ ವಿಚಾರ. ಬಿಡ್ ಸಮಯದಲ್ಲಿ ಸರಕಾರದಿಂದ ನನಗೆ ಯಾರೂ ಸಲಹೆ ನೀಡಿಲ್ಲ ಎಂದು ಹೇಳುವ ಮೂಲಕ ಸಚಿವೆ ಅಂಬಿಕ ಸೋನಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.
ಕೇಂದ್ರ ಸಚಿವೆ ಅಂಬಿಕ ಸೋನಿ ಮಹಾತ್ಮಾ ಗಾಂಧೀಜಿಯವರ ವಸ್ತುಗಳನ್ನು ಮಲ್ಯ ಖರೀದಿಸಿದ ನಂತರ, ಇಡೀ ಹರಾಜು ಪ್ರಕ್ರಿಯೆಯಲ್ಲಿ ಸರಕಾರ ಮಲ್ಯ ಅವರ ಜೊತೆ ಸಂಪರ್ಕದಲ್ಲಿತ್ತು. ಸರಕಾರದ ಸಹಯೋಗದೊಂದಿಗೆ ಗಾಂಧೀಜಿಯವರ ವಸ್ತು ನಮ್ಮ ದೇಶಕ್ಕೆ ಬರುವಂತಾಯಿತು ಎಂದು ಹೇಳಿಕೆ ನೀಡಿದ್ದರು.
(ಏಜೆನ್ಸೀಸ್)
ನ್ಯೂಯಾರ್ಕಿನಲ್ಲಿ ಗಾಂಧೀಜಿ ವಸ್ತುಗಳು ಹರಾಜಿಗೆ
ಗಾಂಧೀಜಿ ಬಳಸಿದ ಕನ್ನಡಕ ಲಂಡನ್ನಿನಲ್ಲಿ ಹರಾಜು












Click it and Unblock the Notifications