ಲಿಂಗಾಯಿತರಿಗೆ ಅದ್ಯತೆ ಕೊಡಿ, ಎಂಪಿ ಪ್ರಕಾಶ್ ಆಗ್ರಹ

ಈ ಕುರಿತು ಹೆಚ್ಚು ಪ್ರತಿಕ್ರಿಯೆ ನೀಡಿರುವ ಎಂ ಪಿ ಪ್ರಕಾಶ್, ರಾಜ್ಯದಲ್ಲಿ ದೊಡ್ಡ ಜನಾಂಗ ಎನಿಸಿರುವ ಲಿಂಗಾಯಿತ ಸಮಾಜವನ್ನು ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ಕಡೆಗಣಿಸಿದೆ ಎನ್ನುವುದು ಕೆಲವರ ಆರೋಪವಾಗಿದೆ. ಇದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಆಗಿರುವುದು, ಅಂಕಿ ಅಂಶಗಳ ಪ್ರಕಾರ ತಿಳಿದು ಬರುತ್ತದೆ. ಎಂದರು.
ಲಿಂಗಾಯಿತ ಜನಾಂಗದ ಮತಗಳು ಬಿಜೆಪಿ ಪಕ್ಷ ಸ್ವತ್ತು ಎಂಬಂತೆ ಆ ಪಕ್ಷದ ಮುಖಂಡರು ಆಡುತ್ತಿದ್ದಾರೆ. ಕಾರಣ ಕಾಂಗ್ರೆಸ್ ಪಕ್ಷದಲ್ಲಿ ಈ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ದೊರೆತಿಲ್ಲ. ರಾಷ್ಟ್ರೀಯ ಕಾರ್ಯಕಾರಣಿಯಲ್ಲಾಗಲಿ, ರಾಜ್ಯದಲ್ಲಾಗಲಿ ಕಳೆದ ಅನೇಕ ದಿನಗಳಿಂದ ಲಿಂಗಾಯಿತರಿಗೆ ಸ್ಥಾನಮಾನ ನೀಡದಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಇದೇ ಕಾರಣದಿಂದ ಅನೇಕ ಲಿಂಗಾಯಿತ ನಾಯಕರು ಪಕ್ಷ ತೊರೆದಿರುವುದು ಉಂಟು ಎಂದು ಪ್ರಕಾಶ್ ವಿವರಿಸಿದರು.
ಇದಕ್ಕೆ ಜಾತಿ ರಾಜಕಾರಣ ಅನ್ನುವುದಕ್ಕಿಂತ ವಾಸ್ತವ ರಾಜಕಾರಣ ಎಂದರೆ ಸೂಕ್ತ ಎನ್ನುವುದು ನನ್ನ ಭಾವನೆ. ಇದೇ ಆಧಾರದ ಮೇಲೆ ಚುನಾವಣೆಗಳ ನಡೆಯುತ್ತವೆ. ಸಮಾಜದಲ್ಲಿರುವ ಅಷ್ಟೂ ಸಮುದಾಯಗಳಿಗೆ ಸೂಕ್ತ ಸ್ಥಾನಮಾನ ನೀಡಿದರೆ ಅಸಮಾಧಾನ ಉಂಟಾಗುವುದಿಲ್ಲ. ಬಹುಸಂಖ್ಯಾತರರಾಗಿರುವ ಲಿಂಗಾಯಿತ ವರ್ಗಕ್ಕೆ ಸೂಕ್ತ ಸ್ಥಾನಮಾನ ಕಲ್ಪಿಸಬೇಕು ಎಂದು ಸೋನಿಯಾ ಗಾಂಧಿ ಅವರಿಗೆ ಮನವಿ ಮಾಡಿಕೊಳ್ಳಲಾಗಿದೆ. ಅದಕ್ಕೆ ಅವರಿಂದ ಭರವಸೆ ದೊರೆತಿದೆ ಎಂದು ಪ್ರಕಾಶ್ ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಲೋಕಸಭೆ ಕ್ಷೇತ್ರಗಳಾದ ಕೊಪ್ಪಳ, ದಾವಣಗೆರೆ, ಮೈಸೂರು, ಬೀದರ್, ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ ಸೇರಿ ಒಟ್ಟು 10 ಕ್ಷೇತ್ರಗಳಲ್ಲಿ ಲಿಂಗಾಯಿತ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು ಎಂದು ಮನವಿ ಮಾಡಿಕೊಳ್ಳಲಾಗಿದೆ. ಈ ಮೂಲಕ ಮತದಾರರಲ್ಲಿ ಉತ್ತಮ ಸಂದೇಶ ರವಾನೆ ಮಾಡಿದಂತಾಗುವುದು ಎನ್ನುವುದನ್ನು ವಿವರಿಸಲಾಗಿದೆ. ಮುಂದಿನ ನಿರ್ಧಾರ ಹೈಕಮಾಂಡ್ ತೆಗೆದುಕೊಳ್ಳಲಿದೆ ಎಂದು ಅವರು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ಸಿಎಂ ಪುತ್ರ ಸ್ಪರ್ಧೆಗೆ ಎಚ್ಡಿಕೆ ತೀವ್ರ ವಿರೋಧ











Click it and Unblock the Notifications