ಲೋಕಸಭೆ ಚುನಾವಣೆ, ಮಲ್ಲಿಕಾರ್ಜುನಯ್ಯ ಬೇಸರ
ತುಮಕೂರು,
ಮಾ. 4 : ತಮ್ಮನ್ನು ಕಡೆಗಣಿಸಿ ಮಂಗಳವಾರ ಪಕ್ಷಕ್ಕೆ ಸೇರ್ಪಡೆಯಾಗಿರುವ ಜಿ ಎಸ್ ಬಸವರಾಜು ಅವರಿಗೆ ತುಮಕೂರಿನಿಂದ ಪಕ್ಷದ ಲೋಕಸಭೆ ಟಿಕೆಟ್ ನೀಡಲು ಮುಂದಾಗಿರುವ ವರಿಷ್ಠರ ಕ್ರಮಕ್ಕೆ ಹಾಲಿ ಸಂಸದ ಮಲ್ಲಿಕಾರ್ಜುನಯ್ಯ ತೀವ್ರ ಆಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ಹಾಗೂ ತುಮಕೂರಿನ ಮಾಜಿ ಸಂಸದ ಜಿ ಎಸ್ ಬಸವರಾಜು ಮಂಗಳವಾರ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. id="toptextpromo">ಗೆಲ್ಲುವ
ಕುದುರೆಗೆ ಹುಡುಕಾಟ ನಡೆಸಿರುವ ಬಿಜೆಪಿ ಹೈಕಮಾಂಡ್ ಬಸವರಾಜು ಅವರನ್ನು ತುಮಕೂರಿನಿಂದ ಅಖಾಡಕ್ಕಿಳಿಸಲು ಚಿಂತನೆ ನಡೆಸಿದೆ. ಇದರ ಬೆನ್ನಲ್ಲೇ ಬಿಜೆಪಿ ಪಾಳೆಯದಲ್ಲಿ ಅಸಮಾಧಾನದ ಭುಗಿಲೇಳುವ ಲಕ್ಷಣಗಳು ಗೋಚರಿಸಿವೆ. ನಾನು ಸಂಪೂರ್ಣವಾಗಿ ಆರೋಗ್ಯದಿಂದ ಇರುವೆ. ಅನಾರೋಗ್ಯ ನೆಪವೊಡ್ಡಿ, ಹಾಲಿ ಸಂಸದನಾಗಿರುವ ನನ್ನನ್ನು ಕಡೆಗಣಿಸಿ ನಿನ್ನೆ ಮೊನ್ನೆ ಪಕ್ಷಕ್ಕೆ ಬಂದಿರುವ ಜಿ ಎಸ್ ಬಸವರಾಜು ಅವರಿಗೆ ಲೋಕಸಭೆ ಟಿಕೆಟ್ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಇದರಿಂದ ಮತದಾರರಲ್ಲಿ ಗೊಂದಲ ಉಂಟಾಗಲಿದೆ. ಆದ್ದರಿಂದ ನನಗೆ ಲೋಕಸಭೆ ಟಿಕೆಟ್ ನ್ನು ನೀಡಬೇಕು ಎಂದ ಸಂಸದ ಮಲ್ಲಿಕಾರ್ಜುನಯ್ಯ ಒತ್ತಾಯಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)ಕಮಲ ಮುಡಿಗೇರಿಸಿದ ನಿರ್ಮಲಾ ವೆಂಕಟೇಶ್
ಕರ್ನಾಟಕದಲ್ಲಿ ಏ.23 ಹಾಗೂ 30 ರಂದು ಚುನಾವಣೆ












Click it and Unblock the Notifications