ಗುಂಡಿನ ದಾಳಿ, ವಿಮಾನವೇರಿದ ಶ್ರೀಲಂಕಾ ತಂಡ
ಲಾಹೋರ್,
ಮಾ. 3 : ಭಯೋತ್ಪಾದಕರ ಗುಂಡಿನ ದಾಳಿಯ ಹಿನ್ನೆಲೆಯಲ್ಲಿ ತೀವ್ರ ಆಘಾತಕ್ಕೆ ಒಳಗಾಗಿರುವ ಶ್ರೀಲಂಕಾ ತಂಡದ ಆಟಗಾರರು ತರಾತುರಿಯಲ್ಲಿ ಲಾಹೋರ್ ನಿಂದ ವಿಮಾನವೇರಿದರು. ಇಂದು ಅಬುದಾಬಿ ತಲುಪುವ ಶ್ರೀಲಂಕಾ ತಂಡ, ನಾಳೆ ಸಂಜೆಯ ವೇಳೆಗೆ ಕೊಲಂಬೊ ತಲುಪಲಿದೆ ಎಂದು ಮೂಲಗಳು ತಿಳಿಸಿವೆ. id="toptextpromo">ಕ್ರಿಕೆಟ್
ಆಟಗಾರರ ಮೇಲೆ ಗುಂಡಿನ ದಾಳಿ ನಡೆದಿದೆ ಎಂದು ತಿಳಿಯುತ್ತಿದ್ದಂತೆಯೇ ತೀವ್ರ ಆತಂಕಕ್ಕೆ ಒಳಗಾದ ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಷೆ, ಶೀಘ್ರದಲ್ಲಿ ಸ್ವದೇಶಕ್ಕೆ ಮರಳುವಂತೆ ತಂಡದ ಮುಖ್ಯಸ್ಥರಿಗೆ ಅವರು ಸೂಚನೆ ನೀಡಿದ್ದಾರೆ. ನೇಪಾಳ ಪ್ರವಾಸದಲ್ಲಿರುವ ರಾಜಪಕ್ಷೆ, ದಾಳಿಯನ್ನು ಬಲವಾಗಿ ಖಂಡಿಸಿದ್ದು, ಆಟಗಾರರ ರಕ್ಷಣೆ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಪ್ರಾಣಾಪಾಯದಿಂದ ಪಾರಾಗಿರುವ ಆಟಗಾರರ ಬರಮಾಡಿಕೊಳ್ಳಲು ರಾಜಪಕ್ಷೆ ನೇಪಾಳ ಪ್ರವಾಸವನ್ನು ಮೊಟಕುಗೊಳಿಸಿ ಕೊಲಂಬೊಕ್ಕೆ ಮರಳಿದ್ದಾರೆ. ಈ ಮಧ್ಯೆ ತೀವ್ರವಾಗಿ ಗಾಯಗೊಂಡಿರುವ ತಿಲಾನ್ ಸಮರವೀರ ಹಾಗೂ ತರಂಗಾ ಲಾಹೋರ್ ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. id='are-slot-1' class='oiad oi-axt oiadv'> id='top-searched-articles'>(ಏಜನ್ಸೀಸ್)
ಲಾಹೋರ್ ಉಗ್ರರದಾಳಿ, ಮುಂಬೈ ದಾಳಿ ನಕಲು












Click it and Unblock the Notifications