ಹಿಂದೂ ಮತ ಬ್ಯಾಂಕ್ ಸ್ಥಾಪಿಸಿ - ಪೇಜಾವರ ಶ್ರೀ

Pejawar seer urges govt to set up hindu vote bank
ಮಂಗಳೂರು, ಮಾ. 3 : 'ಹಿಂದೂ ಮತ ಬ್ಯಾಂಕ್ ಸ್ಥಾಪನೆ' ಹಿಂದೂ ಸಮಾಜೋತ್ಸವದ ಉದ್ದೇಶ. ಎಲ್ಲಾ ರಾಜಕೀಯ ಪಕ್ಷಗಳು ಇನ್ನು ಮುಂದೆ ಹಿಂದೂ ತುಷ್ಟೀಕರಣಕ್ಕೆ ಮುಂದಾಗಬೇಕು ಎಂದು ಉಡುಪಿ ಪೇಜಾವರ ಶ್ರೀಗಳು ಒತ್ತಾಯಿಸಿದ್ದಾರೆ. ನಗರದಲ್ಲಿ ಹಿಂದೂ ಸಮಾಜೋತ್ಸವ ಕಚೇರಿ ಉದ್ಘಾಟಿಸಿ ಮಾತನಾಡುತ್ತಿದ್ದರು.

ಮುಸ್ಲಿಂ ತುಷ್ಟೀಕರಣದ೦ತೆ, ಹಿಂದೂ ತುಷ್ಟೀಕರಣಕ್ಕೂ ರಾಜಕೀಯ ಪಕ್ಷಗಳು ಮುಂದಾಗಬೇಕು. ಲೋಕಸಭಾ ಚುನಾವಣೆಯ ಈ ವೇಳೆಯಲ್ಲಿ ಹಿಂದೂ ಸಮಾಜೋತ್ಸವ ಯತಿಗಳ ನೇತೃತ್ವದಲ್ಲಿ ನಡೆಯುತ್ತದೆ. ಅಲ್ಲದೆ ರಾಜಕೀಯ ರಹಿತವಾಗಿ ಇರುತ್ತದೆ. ಹಿಂದೂ ಪರ ರಾಜಕೀಯ ಪಕ್ಷಗಳಿಗೆ ಒತ್ತಡ ತರಲು ಈ ಸಮಾವೇಶದ ಅವಶ್ಯಕತೆ ಇದೆ. ಮತಾಂತರ, ಭಯೋತ್ಪಾದನೆ ಮತ್ತು ವಿದೇಶಿ ಸಂಸ್ಕೃತಿ ವಿರುದ್ಧ ಜಾಗ್ರತೆ ಮೂಡಿಸಲು ಉಪಯೋಗವಾಗುತ್ತದೆ ಎಂದು ಶ್ರೀಗಳು ಹೇಳಿದರು.

ಶ್ರೀರಾಮ ಸೇನೆ ಮತ್ತು ವಿಶ್ವ ಹಿಂದೂ ಪರಿಷತ್ ಗೂ ಸಂಬಂಧವಿಲ್ಲ. ಆದರೆ, ಭಜರಂಗದಳ, ವಿ ಎಚ್ ಪಿ ಯ ಸಂಘಟನೆಯ ಅಂಗ. ಮಂಗಳೂರು ಪಬ್ ದಾಳಿ ಖಂಡನೀಯ. ಆದರೆ ಯುವ ಜನಾಂಗಕ್ಕೆ ಕುಡಿದು ಕುಣಿಯಿರಿ ಎಂದು ದೇಶದ ರಾಜಕೀಯ ಧುರೀಣರ ಹೇಳಿಕೆ ತಪ್ಪು ಎಂದು ಶ್ರೀಗಳು ಪ್ರತಿಪಾದಿಸಿದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+