ಹಿಂದೂ ಮತ ಬ್ಯಾಂಕ್ ಸ್ಥಾಪಿಸಿ - ಪೇಜಾವರ ಶ್ರೀ

ಮುಸ್ಲಿಂ ತುಷ್ಟೀಕರಣದ೦ತೆ, ಹಿಂದೂ ತುಷ್ಟೀಕರಣಕ್ಕೂ ರಾಜಕೀಯ ಪಕ್ಷಗಳು ಮುಂದಾಗಬೇಕು. ಲೋಕಸಭಾ ಚುನಾವಣೆಯ ಈ ವೇಳೆಯಲ್ಲಿ ಹಿಂದೂ ಸಮಾಜೋತ್ಸವ ಯತಿಗಳ ನೇತೃತ್ವದಲ್ಲಿ ನಡೆಯುತ್ತದೆ. ಅಲ್ಲದೆ ರಾಜಕೀಯ ರಹಿತವಾಗಿ ಇರುತ್ತದೆ. ಹಿಂದೂ ಪರ ರಾಜಕೀಯ ಪಕ್ಷಗಳಿಗೆ ಒತ್ತಡ ತರಲು ಈ ಸಮಾವೇಶದ ಅವಶ್ಯಕತೆ ಇದೆ. ಮತಾಂತರ, ಭಯೋತ್ಪಾದನೆ ಮತ್ತು ವಿದೇಶಿ ಸಂಸ್ಕೃತಿ ವಿರುದ್ಧ ಜಾಗ್ರತೆ ಮೂಡಿಸಲು ಉಪಯೋಗವಾಗುತ್ತದೆ ಎಂದು ಶ್ರೀಗಳು ಹೇಳಿದರು.
ಶ್ರೀರಾಮ ಸೇನೆ ಮತ್ತು ವಿಶ್ವ ಹಿಂದೂ ಪರಿಷತ್ ಗೂ ಸಂಬಂಧವಿಲ್ಲ. ಆದರೆ, ಭಜರಂಗದಳ, ವಿ ಎಚ್ ಪಿ ಯ ಸಂಘಟನೆಯ ಅಂಗ. ಮಂಗಳೂರು ಪಬ್ ದಾಳಿ ಖಂಡನೀಯ. ಆದರೆ ಯುವ ಜನಾಂಗಕ್ಕೆ ಕುಡಿದು ಕುಣಿಯಿರಿ ಎಂದು ದೇಶದ ರಾಜಕೀಯ ಧುರೀಣರ ಹೇಳಿಕೆ ತಪ್ಪು ಎಂದು ಶ್ರೀಗಳು ಪ್ರತಿಪಾದಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications