ಶ್ರೀಲಂಕಾ ಆಟಗಾರ ಸಮರವೀರ ಎದೆಯಲ್ಲಿ ಗುಂಡು

ನಗರದ ಗಢಾಫಿ ಮೈದಾನದ ಲಿಬರ್ಟಿ ಮಾರುಕಟ್ಟೆ ಬಳಿ ಆಟಗಾರರ ಕಾರು ಬರುತ್ತಿದ್ದಂತೆಯೇ ಬಂದೂಕುಧಾರಿಗಳಿಂದ ಗುಂಡಿನ ಸುರಿಮಳೆ ಆರಂಭವಾಗಿದೆ. ಕಾರಿನ ಕಿಟಕಿ ಬಳಿ ಕುಳಿತಿದ್ದ ಸಮರವೀರ ಅವರ ಎದೆಗೆ ಗುಂಡು ಸೇರಲು ಕಾರಣವಾಗಿದೆ. ಇತ್ತೀಚಿನ ವರದಿಗಳು ಬಂದಾಗ ಸಮರವೀರ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ತಿಳಿದು ಬಂದಿದೆ.
ಲಂಕಾ ಆಟಗಾರರಿಗೆ ಸಂಪೂರ್ಣ ಭದ್ರತೆ ನೀಡಲಾಗಿದೆ. ಆದರೂ ಇಂತಹ ಘಟನೆ ನಡೆದಿರುವುದು ವಿಷಾದನೀಯ ಹಾಗೂ ಖಂಡನೀಯ ಕೃತ್ಯ ಎಂದು ಪಾಕಿಸ್ತಾನದ ಕ್ರೀಡಾ ಸಚಿವ ಗುಮಾಮಿ ಸ್ಪಷ್ಟಪಡಿಸಿದ್ದಾರೆ. ಲಂಕಾ ಆಟಗಾರರ ಮೇಲೆ ನಡೆದ ಗುಂಡಿನ ದಾಳಿಗೆ ನಮಗೂ ಕೂಡ ತೀವ್ರ ಕಳವಳ ಉಂಟಾಗಿದೆ. ಆಟಗಾರರ ಪೂರ್ಣ ಭದ್ರತೆಗೆ ಸರ್ಕಾರ ಸಿದ್ಧ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ:
ಲಾಹೋರ್ : ಶ್ರೀಲಂಕಾದ ಎಂಟು ಆಟಗಾರರಿಗೆ ಗಾಯ
ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ಗುಂಡಿನ ದಾಳಿ












Click it and Unblock the Notifications