ಶ್ರೀಲಂಕಾ ಆಟಗಾರ ಸಮರವೀರ ಎದೆಯಲ್ಲಿ ಗುಂಡು

Lankan batsman samarveera condition is critical
ಲಾಹೋರ್, ಮಾ. 3 : ಪಾಕ್ ಪ್ರವಾಸ ಕೈಗೊಂಡಿರುವ ಶ್ರೀಲಂಕಾ ತಂಡದ ಆಟಗಾರರ ಮೇಲೆ ನಡೆದ ಗುಂಡಿನ ದಾಳಿ ಅತ್ಯಂತ ಖಂಡನೀಯ. ಲಂಕಾ ತಂಡದ ಪ್ರಮುಖ ಬ್ಯಾಟ್ಸ್ ಮನ್ ತಿಲಾನ್ ಸಮರವೀರ ಅವರ ಎದೆ ಗುಂಡು ಹೊಕ್ಕಿದ್ದು ಅವರ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಆಟಗಾರರಿಗೆ ಭದ್ರತೆ ಕೊರತೆ ಈ ದುರ್ಘಟನೆಗೆ ಕಾರಣ ಎನ್ನಲಾಗಿದೆ.

ನಗರದ ಗಢಾಫಿ ಮೈದಾನದ ಲಿಬರ್ಟಿ ಮಾರುಕಟ್ಟೆ ಬಳಿ ಆಟಗಾರರ ಕಾರು ಬರುತ್ತಿದ್ದಂತೆಯೇ ಬಂದೂಕುಧಾರಿಗಳಿಂದ ಗುಂಡಿನ ಸುರಿಮಳೆ ಆರಂಭವಾಗಿದೆ. ಕಾರಿನ ಕಿಟಕಿ ಬಳಿ ಕುಳಿತಿದ್ದ ಸಮರವೀರ ಅವರ ಎದೆಗೆ ಗುಂಡು ಸೇರಲು ಕಾರಣವಾಗಿದೆ. ಇತ್ತೀಚಿನ ವರದಿಗಳು ಬಂದಾಗ ಸಮರವೀರ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ತಿಳಿದು ಬಂದಿದೆ.

ಲಂಕಾ ಆಟಗಾರರಿಗೆ ಸಂಪೂರ್ಣ ಭದ್ರತೆ ನೀಡಲಾಗಿದೆ. ಆದರೂ ಇಂತಹ ಘಟನೆ ನಡೆದಿರುವುದು ವಿಷಾದನೀಯ ಹಾಗೂ ಖಂಡನೀಯ ಕೃತ್ಯ ಎಂದು ಪಾಕಿಸ್ತಾನದ ಕ್ರೀಡಾ ಸಚಿವ ಗುಮಾಮಿ ಸ್ಪಷ್ಟಪಡಿಸಿದ್ದಾರೆ. ಲಂಕಾ ಆಟಗಾರರ ಮೇಲೆ ನಡೆದ ಗುಂಡಿನ ದಾಳಿಗೆ ನಮಗೂ ಕೂಡ ತೀವ್ರ ಕಳವಳ ಉಂಟಾಗಿದೆ. ಆಟಗಾರರ ಪೂರ್ಣ ಭದ್ರತೆಗೆ ಸರ್ಕಾರ ಸಿದ್ಧ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ:
ಲಾಹೋರ್ : ಶ್ರೀಲಂಕಾದ ಎಂಟು ಆಟಗಾರರಿಗೆ ಗಾಯ
ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ಗುಂಡಿನ ದಾಳಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+