ಲಾಹೋರ್:ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ಗುಂಡಿನ ದಾಳಿ

ಶ್ರೀಲಂಕಾದ ಇಬ್ಬರು ಕ್ರಿಕೆಟಿಗರಾದ ಅಜಂತಾ ಮೆಂಡೀಸ್ ಮತ್ತು ಸಮರವೀರ ಅವರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪಾಕ್ ಕ್ರಿಕೆಟ್ ಮಂಡಳಿ ತಿಳಿಸಿದೆ. ಬಂದೂಕುಧಾರಿಗಳು ಆಟಗಾರರ ಮೇಲೆ ಗುಂಡಿನ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಶ್ರೀಲಂಕಾ ಕ್ರಿಕೆಟ್ ಮಂಡಳಿ ಕೂಡಲೇ ಪ್ರವಾಸ ರದ್ದುಪಡಿಸಿದೆ.
ಲಾಹೋರ್ ದ ಗಢಾಫಿ ಮೈದಾನದೊಳಿಗೆ ಆಟಗಾರರು ತೆರಳುತ್ತಿದ್ದ ಸಮಯದಲ್ಲಿ ಪೋಲೋ ವೃತ್ತದಲ್ಲಿ ಗುಂಡಿನ ದಾಳಿ ನಡೆದಿದೆ. ಇಬ್ಬರು ಆಟಗಾರರು ಮತ್ತು ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ ಎಂದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ. ಹೆಚ್ಚಿನ ವರದಿಗೆ ನಿರೀಕ್ಷಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)
ಲಾಹೋರ್ ಗುಂಡಿನ ದಾಳಿ, ಭಯೋತ್ಪಾದಕರ ಕೃತ್ಯ












Click it and Unblock the Notifications