ಉತ್ತರ ಪ್ರದೇಶ, ದುಷ್ಕರ್ಮಿಗಳಿಂದ ಖೈದಿಗಳ ಹತ್ಯೆ

ಲಖನೌ, ಫೆ. 22 : ಉತ್ತರ ಪ್ರದೇಶದ ಹತ್ರಾಸ್ ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ನಡೆದ ಸಿನೀಮಿಯ ವಿದ್ಯಮಾನದಲ್ಲಿ ಇಬ್ಬರು ವಿಚಾರಣಾಧೀನ ಖೈದಿಗಳನ್ನು ಗುಂಡಿಟ್ಟು ಕೊಂದ ಮೂವರು ಹಂತಕರು ಬಳಿಕ ಪೊಲೀಸ್ ಎನ್ ಕೌಂಟರ್ ಗೆ ಬಲಿಯಾದ ಘಟನೆ ನಡೆದಿದೆ.

ಕೊಲೆಯಾದ ಖೈದಿಗಳನ್ನು ಸತ್ಯವೀರ್ ಸಿಂಗ್ ಹಾಗೂ ಕಮಲೇಶ್ ಸಿಂಗ್ ಎಂದು ಗುರುತಿಸಲಾಗಿದೆ. ಅತ್ಯಾಚಾರ ಹಾಗೂ ಕೊಲೆ ಆರೋಪಗಳ ಮೇಲೆ ಬಂಧಿತರಾಗಿದ್ದ ಅವರನ್ನು ಶನಿವಾರ ಅಲಿಗಢ ಜೈಲಿನಿಂದ ವಿಚಾರಣೆಗಾಗಿ ಹತ್ರಾಸ್ ಗೆ ಕರೆತಂದಿದ್ದಾಗ ಈ ಘಟನೆ ಸಂಭವಿಸಿದೆ. ಹತ್ರಾಸ್ ನ್ಯಾಯಾಲಯಕ್ಕೆ ಕರೆತಂದಾಗ ಮೂವರು ಬಂದೂಕುಧಾರಿಗಳು ಇವರಿಬ್ಬರತ್ತ ಮನಬಂದಂತೆ ಗುಂಡಿನ ಮಳೆಗೆರೆದರು, ತಕ್ಷಣ ಮಿಂಚಿನ ಕಾರ್ಯಚರಣೆ ನಡೆಸಿದ ಪೊಲೀಸರು ದುಷ್ಕರ್ಮಿಗಳಗಳನ್ನು ಬೆನ್ನಟ್ಟಿ ಅವರತ್ತ ಗುಂಡು ಹಾರಿಸಿದರು. ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬ ಆಸ್ಪತ್ರೆಯ ದಾರಿಯಲ್ಲಿ ಮೃತಪಟ್ಟ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಬ್ರಿಜ್ ಲಾಲ್ ತಿಳಿಸಿದ್ದಾರೆ. ಹಳೆಯ ದ್ವೇಷ ಹತ್ಯೆಗೆ ಕಾರಣ ಎನ್ನಲಾಗಿದ್ದು, ಆರೋಪಿಗಳು ಗುರುತು ಪತ್ತೆಯಾಗಿಲ್ಲ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+