ತಾಂಡಗಳ ಪರಿವರ್ತನೆ, ಉಚಿತ ಸೈಕಲ್ ವಿತರಣೆ
ಗುಲಬರ್ಗಾ,ಫೆ. 22 : ಶಾಲಾ ಬಾಲಕಿಯರು ಸರ್ಕಾರ ನೀಡುತ್ತಿರುವ ವಿವಿಧ ಸೌಲಭ್ಯಗಳ ಪ್ರಯೋಜನ ಪಡೆದು ವಿದ್ಯಾವಂತರಾಗಿ ಉಜ್ವಲ ಭವಿಷ್ಯ ರೂಪಿಸಿಕೊಂಡು ದೇಶದ ಸತ್ಪ್ರಜೆಗಳಾಗಬೇಕೆಂದು ಪಶುಸಂಗೋಪನಾ ಸಚಿವ ರೇವುನಾಯಕ್ ಬೆಳಮಗಿ ಅವರು ಹೇಳಿದರು.
ಗುಲಬರ್ಗಾ ಜಿಲ್ಲೆಯ ಕಮಲಾಪೂರ ಗ್ರಾಮದಲ್ಲಿ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ 39 ಬಾಲಕಿಯರಿಗೆ ಉಚಿತ ಬೈಸಿಕಲ್ ವಿತರಿಸಿ ಮಾತನಾಡಿದರು. ಸಮಾಜದಲ್ಲಿ ಗುರುಗಳ ಸ್ಥಾನ ಅತ್ಯುನ್ನತ ಮಟ್ಟದಲ್ಲಿದ್ದು, ನಡೆದಾಡುವ ಜೀವಂತ ದೇವರೆಂದೇ ಭಾವಿಸಲಾಗುವ ಶಾಲಾ ಗುರುಗಳನ್ನು ಗೌರವಿಸಬೇಕು. ಅತ್ಯಂತ ಪವಿತ್ರವಾದ ಶಿಕ್ಷಕ ವೃತ್ತಿಯಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರು ಬಂಡೆಗಲ್ಲನ್ನು ಕಟೆದು ಸುಂದರ ಮೂರ್ತಿ ನಿರ್ಮಿಸುವಂತೆ ಶಾಲಾ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರಲ್ಲಿ ದಿವ್ಯ ಚೇತನ ಮೂಡಿಸುವ ಕಾರ್ಯಕೈಗೊಳ್ಳಬೇಕೆಂದರು. ರಾಜ್ಯದ ಐನೂರು ಬಂಜಾರ ಸಮುದಾಯದ ತಾಂಡಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಲಾಗುವುದು ಎಂದರು.
ಜಿಲ್ಲಾ ಪಂಚಾಯತ್ ಸದಸ್ಯೆ ಕಾಶೀಬಾಯಿ ತುಕಾರಾಂ ಟಿಳೆ, ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ ರಾಂಪೂರೆ, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಜಿ. ಚಂದ್ರಕಾಂತ ಸಮಾರಂಭದಲ್ಲಿ ಭಾಗವಹಿಸಿದ್ದರು. ಶಾಲಾ ಮುಖ್ಯ ಗುರುಗಳಾದ ರೇವಣಸಿದ್ಧಯ್ಯ ಸ್ವಾಗತಿಸದರು.
(ದಟ್ಸ್ ಕನ್ನಡ ವಾರ್ತೆ)
ಗುಲ್ಬರ್ಗಾ ಪಾಲಿಕೆ, ಕೈಗೆ ಒಲಿದ ಅದೃಷ್ಟ












Click it and Unblock the Notifications