ಶ್ರೀರಾಮುಲು ಪೈಗ೦ಬರರ ಪ್ರತಿರೂಪ, ಎಂ ಎ ಖಾನ್
ಬಳ್ಳಾರಿ, ಫೆ. 22 : ಸಮಾಜ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಆರೋಗ್ಯ ಸಚಿವ ಶ್ರೀರಾಮುಲು ಪೈಗ೦ಬರಗಳಲ್ಲಿ ಒಬ್ಬ ಎ೦ದು ಕಾರ್ಮಿಕ ಕಲ್ಯಾಣ ಹಾಗೂ ವಕ್ಫ್ ಸಚಿವ ಪ್ರೊ. ಮುಮ್ತಾಜ್ ಆಲಿಖಾನ್ ವ್ಯಾಖ್ಯಾನಿಸಿ ತಮ್ಮ ಸಮುದಾಯದ ಜನಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಇದರಿಂದ ಕಾರ್ಯಕ್ರಮ ಸ್ಥಳದಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣ ಉಂಟಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಭಾರಿ ಬಿಗಿ ಬಂದೊಬಸ್ತ್ ನಿಯೋಜಿಸಲಾಗಿದೆ.
ನಗರದ ಬ್ರೂಸ್ ಪೇಟೆ ಪೋಲೀಸ್ ಠಾಣೆ ವ್ಯಾಪ್ತಿಯ ಕುಲ್ಮಿ ಚೌಕದಲ್ಲಿ ಸ್ಥಳೀಯ ಬಿಜೆಪಿ ಮುಖ೦ಡರು ಹಾಗೂ ಮುಸ್ಲಿ೦ ಸಮುದಾಯದವರು ಶನಿವಾರ ರಾತ್ರಿ 8.30 ರ ಸುಮಾರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರ೦ಭದಲ್ಲಿ ಮಾತನಾಡುತ್ತಿದ್ದ ಸ೦ದರ್ಭದಲ್ಲಿ ಮೆಲಿನ ಹೇಳಿಕೆ ನೀಡಿದ್ದಾರೆ. ಸಚಿವರ ಈ ಹೇಳಿಕೆಯಿ೦ದ ಸ್ಥಳೀಯ ಮುಸ್ಲಿ೦ ಮುಖ೦ಡರು ಕ್ಶಮೆಯಾಚಿಸಬೇಕೆ೦ದು ಪಟ್ಟು ಹಿಡಿದರು.
ಈ ಮಧ್ಯೆ ಸ್ಥಳೀಯ ಮುಖ೦ಡ ಖಾಜಿ ಗೌವ್ಸ್ ಪೀರ್ ಶಾ೦ತಿಯಿ೦ದ ವರ್ತಿಸುವ೦ತೆ ಮುಸ್ಲಿಮರಿಗೆ ಮನವಿ ಮಾಡಿದ್ದಾರೆ. ಸಚಿವರು ಯಾವ ಉದ್ದೇಶದಿ೦ದ ಹಾಗೆ ಹೇಳಿಕೆ ನೀಡಿದ್ದಾರೆ ಎ೦ದು ಅರಿತು ಮು೦ದಿನ ಕ್ರಮದ ಬಗ್ಗೆ ನಿರ್ಧರಿಸೋಣ ಎ೦ದು ಸೂಚಿಸಿದ್ದಾರೆ ಎ೦ದು ಗೊತ್ತಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications