ಮಂಡ್ಯದ ಗೌಡನಾಗಿ ಹುಟ್ಟುವಾಸೆ, ಖೇಣಿ
ಮ೦ಡ್ಯ, ಫೆ. 22 : ಮುಂದಿನ ಜನ್ಮ ಅನ್ನುವುದಿದ್ದರೆ ನಾನು ಮುಸ್ಲಿಂ ಜನಾಂಗದಲ್ಲಿ ಹುಟ್ಟಬೇಕೆಂಬ ಆಸೆಯನ್ನು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ತಮ್ಮ ಮನದಿಂಗಿತವನ್ನು ವ್ಯಕ್ತಪಡಿಸಿದ್ದರು. ಬಿಡಿ ಅವರಂತೂ ಏನು ಮಾಡಿದ್ರು ಲಾಭಕ್ಕಾಗಿ. ಅಪಾರ ದೂರದೃಷ್ಟಿ ಹೊಂದಿದ ನಾಯಕ ಅನ್ನಿಸಿಕೊಂಡಿರುವ ದೇವೇಗೌಡ, ಹಾಗೇ ಹೇಳಲು ಅನೇಕ ಕಾರಣಗಳಿವೆ. ಅಲ್ಪಸಂಖ್ಯಾತರ ಮತ ಗಳಿಕೆ ಏಕೈಕ ಗುರಿ. ಉಳಿದಂತೆ ಅನೇಕ ತಮ್ಮ ಮೂಗಿನ ನೇರಕ್ಕೆ ಹೊಗಳಿದರು, ತೆಗಳಿದರು. ಒಟ್ಟಿನಲ್ಲಿ ಈ ಹೇಳಿಕೆ ಮೂಲಕ ದೇವೇಗೌಡರಿಗಂತೂ ತಕ್ಕ ಮಟ್ಟಿಗೆ ಲಾಭ ಆಗಿರುವುದನ್ನು ತಳ್ಳಿಹಾಕುವಂತಿಲ್ಲ.
ಆದರೆ, ನೇರವಾಗಿ ವಿಷಯಕ್ಕೆ ಬರುವುದಾದರೆ, ದೇವೇಗೌಡರ ಕಡು ವೈರಿ ಎಂದೇ ಬಿಂಬಿಸಲ್ಪಟ್ಟಿರುವ ನೈಸ್ ಮುಖ್ಯಸ್ಥ ಅಶೋಕ್ ಖೇಣಿ ಇದೇ ರೀತಿ ಹೇಳಿಕೆ ನೀಡುವ ಮೂಲಕ ಭರ್ಜರಿ ಪ್ರಚಾರ ಗಿಟ್ಟಿಸುತ್ತಿದ್ದಾರೆ. ಸದ್ಯ ನಾನು ಲಿಂಗಾಯಿತ ಸಮುದಾಯದಲ್ಲಿ ಹುಟ್ಟಿರುವೆ, ಮುಂದಿನ ಜನ್ಮ ಅನ್ನುವುದು ಇದ್ದರೆ, ನಾನು ಗೌಡ ಜನಾಂಗದಲ್ಲಿ ಹುಟ್ಟಿಬೇಕು ಎಂಬ ಮಹತ್ವಾಕಾಂಕ್ಷೆಯನ್ನು ಆದಿಚುಂಚನಗಿರಿ ಬಾಲಗಂಗಾಧರನಾಥ ಸ್ವಾಮೀಜಿ ಸಮ್ಮುಖದಲ್ಲಿ ಸ್ಪಷ್ಟಪಡಿಸಿದ್ದಾರೆ. ಖೇಣಿ ಏಕೆ ಇಂತಹ ಹೇಳಿಕೆ ನೀಡಿದರು ಎಂದು ತೆಲೆ ಕೆಡಿಸಿಕೊಂಡರೆ, ದೇವೇಗೌಡರಿಗೆ ಸಾಷ್ಟಾಂಗ ಹಾಕುವ ಉದ್ದೇಶವೇನಾದರೂ ಇದರಲ್ಲಿ ಅಡಗಿದೆಯಾ ? ಬಾಲಗಂಗಾಧರನಾಥ ಸ್ವಾಮೀಜಿ ಅವರ ಮನವೊಲಿಸುವ ಸಲುವಾಗಿ ಇಂತಹ ಮಾತುಗಳು ಹೊರಬಿದ್ದವಾ? ದೇವೇಗೌಡರೊಂದಿಗೆ ಹೋರಾಟ ಸಾಕಾಯಿತಾ?
ನಾನು ಲಿ೦ಗಾಯಿತನಾಗಿ ಹುಟ್ಟಿದ್ದೇನೆ, ನನ್ನ ಮು೦ದಿನ ಜನ್ಮದಲ್ಲಿ ಗೌಡನಾಗಿ ಹುಟ್ಟುವ ಆಸೆಯಿದೆ. ಇನ್ನು ಮು೦ದೆ ನನ್ನ ಹೆಸರನ್ನು ಅಶೋಕ್ ಗೌಡ ಖೇಣಿ ಎ೦ದು ಬದಲಿಸಿಕೊಳ್ಳುತ್ತೇನೆ ಎಂದು ಖೇಣಿ ಘೋಷಿಸಿದವರು. ಅಲ್ಲದ್ದವರಿಗೆ ಕೆಲ ನಿಮಿಷ ತಬ್ಬಿಬ್ಬು. ಗೌಡರು ಮತ್ತು ಲಿ೦ಗಾಯಿತರು ಎರಡು ಕಣ್ಣುಗಳಿದ್ದ೦ತೆ, ಗೌಡರು ಅ೦ದ್ರೆ ನನಗೆ ತು೦ಬಾ ಇಷ್ಟ, ಈಗ ನಾನು ಲಿ೦ಗಾಯಿತನಾಗಿ ಜನ್ಮ ತಾಳಿದ್ದೇನೆ, ಬಲಗಣ್ಣಿನಲ್ಲಿ ಲಿ೦ಗಾಯಿತನಾಗಿ ಎಲ್ಲವನ್ನು ನೋಡಿ ಅನುಭವಿಸಿದ್ದೇನೆ.
ಮು೦ದಿನ ಜನ್ಮದಲ್ಲಿ ಎಡಗಣ್ಣಿನಿ೦ದ ಗೌಡನಾಗಿ ಜನಿಸುವ ಆಸೆಯಿದೆ ಎ೦ದು ಹೇಳಿದರು. ಮಂಡ್ಯ ಬಾಲಕರ ಸರ್ಕಾರಿ ಕಾಲೇಜು ಆವರಣದಲ್ಲಿ ನಿನ್ನೆ ಬಾಲಗ೦ಗಾಧರನಾಥ ಸ್ವಾಮೀಜಿ ಗುರುವ೦ದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ನಂತರ ಮಾತನಾಡಿದ ಬಾಲಗಂಗಾಧರನಾಥ ಸ್ವಾಮೀಜಿ, ಬಿಎಂಐಸಿಗೆ ಸಂಬಂಧಿಸಿದಂತೆ ಮುಖಂಡರು ಅನಗತ್ಯವಾಗಿ ಅಡ್ಡಿಪಡಿಸುವುದನ್ನು ನಿಲ್ಲಿಸಬೇಕು ಎಂದು ತಮ್ಮ ಆಶೀರ್ವಚನದಲ್ಲಿ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications