2009-10ರ ಕೇಂದ್ರ ಬಜೆಟ್ ಗೆ ಮಿಶ್ರ ಪ್ರತಿಕ್ರಿಯೆ

ನವದೆಹಲಿ, ಫೆ. 16 : 6ನೇ ಹಾಗೂ ಅಂತಿಮ ಬಜೆಟ್ ಮಂಡಿಸಿದ ಯುಪಿಎ ಸರ್ಕಾರದ ಬಜೆಟ್ ಗ್ರಾಮೀಣಾಭಿವೃದ್ಧಿಗೆ ವಿಶೇಷ ಕಾಳಜಿ ವಹಿಸುವ ಮೂಲಕ ವೋಟ್ ಬ್ಯಾಂಕ್ ಗೆ ಕೈಹಾಕಿದೆ. ಇದರ ಜೊತೆಗೆ ಆದಾಯ ತೆರಿಗೆಗೆ ಸಂಬಂಧಿಸಿದಂತೆ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಿಕೊಂಡು ಹೋಗಲಾಗಿದೆ, ಆರ್ಥಿಕ ಬಿಕ್ಕಟ್ಟು ಭಾರಿ ಪರಿಣಾಮ ಬೀರಿದ್ದರೂ ಸರ್ಕಾರ ಮಾತ್ರ ಜನಸಾಮಾನ್ಯರ ಹಿತ ಕಾಪಾಡಿಕೊಂಡು ಹೋಗಿರುವುದು ಬಜೆಟ್ ವಿಶೇಷವಾಗಿದೆ. ಮಧ್ಯಂತರ ಬಜೆಟ್ ಮಂಡಿಸಿದ ಹಂಗಾಮಿ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಮತ ಗಳಿಕೆಯ ಚಿತ್ತ ಎದ್ದು ಕಾಣುತ್ತಿತ್ತು.

ನಮ್ಮ ಯಶೋಗಾಥೆಗೆ ರೈತರೇ ಕಾರಣ ಎಂದ ಪ್ರಣಬ್ ಮುಖರ್ಜಿ, ಶೈಕ್ಷಣಿಕ, ಬ್ಯಾಂಕಿಂಗ್, ಗ್ರಾಮೀಣಾಭಿವೃದ್ಧಿ, ಮೂಲಭೂತ ಸೌಕರ್ಯಗಳಿಗೆ ಕೋಟ್ಯಂತರ ಹಣ ನೀಡಿದ್ದಾರೆ. ರಕ್ಷಣಾ ಇಲಾಖೆ ಭರ್ಜಿರಿ ಹಣ ಮೀಸಲಾಗಿರಿಸಿದ ಅವರು, ಅಲ್ಪಸಂಖ್ಯಾತರ ಕಲ್ಯಾಣ, ಕುಡಿಯುವ ನೀರಿನ ಯೋಜನೆ, ಭಾರತ್ ನಿರ್ಮಾಣ, ಸರ್ವಾ ಶಿಕ್ಷಾ ಯೋಜನೆ, ಜವಾಹರ್ ಲಾಲ್ ನಗರಾಭಿವೃದ್ಧಿ ಯೋಜನೆಗಳಿಗೆ ಹೆಚ್ಚು ಹಣ ಬಿಡುಗಡೆ ಮಾಡಲಾಗಿದೆ. ಇದೊಂದು ಶೂನ್ಯ ಸಂಪಾದನೆಯ ಬಜೆಟ್ ಎನ್ನುತ್ತಾರೆ ಆರ್ಥಿಕ ತಜ್ಞ ವಿದ್ಯಾಶಂಕರ್, ಮುಂದಾಲೋಚನೆ ಯೋಜನೆಗಳು ಇಲ್ಲದ ಬಜೆಟ್. ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದಾರೆ. ಹಿಂದೆ ಆಗಿರುವ ಯೋಜನೆಗಳ ಬಗ್ಗೆ ಮಾತ್ರ ಅವರು ಮಾತನಾಡಿದರು. ಕಾರಣ ಆರ್ಥಿಕ ಬಿಕ್ಕಟ್ಟು ಸುಧಾರಿಸಬಲ್ಲ ಯಾವ ಮುನ್ಸೂಚನೆಗಳೂ ಇದರಲ್ಲಿ ಇಲ್ಲ ಅವರು ಹೇಳಿದರು.

ಹಣಕಾಸು ಸಚಿವರು ಆಗಿದ್ದ ಪ್ರಧಾನಮಂತ್ರಿ ಡಾ ಮನಮೋಹನ್ ಸಿಂಗ್ ಅವರಿಗೆ ಹೃದಯದ ಚಿಕಿತ್ಸೆ ಆಗಿ ವಿಶ್ರಾಂತಿ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಇಂದು ಸಂಸತ್ತಿನಲ್ಲಿ 2009-10ರ ಮಧ್ಯಂತರ ಬಜೆಟ್ ಮಂಡಿಸಿದರು. ಕೇರಳದ ಸಂಸದ ವೀರೇಂದ್ರಕುಮಾರ್ ತೀವ್ರ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಬಜೆಟ್ ಮಂಡನೆಯನ್ನು 10 ನಿಮಿಷ ಕಾಲ ಲೋಕಸಭಾಧ್ಯಕ್ಷ ಸೋಮನಾಥ್ ಚಟರ್ಜಿ ಮುಂದೂಡಿದ ಘಟನೆ ನಡೆಯಿತು.

2009-10 ರ ಮಧ್ಯಂತರ ಬಜೆಟ್ ಮುಖ್ಯಾಂಶಗಳು

* 25 ರಾಜ್ಯಗಳಿಗೆ 13,500 ಕೋಟಿ ರುಪಾಯಿ ಕೃಷಿ ಅನುದಾನ
* ಆರ್ಥಿಕ ಬಿಕ್ಕಟ್ಟಿನಿಂದ ತೆರಿಗೆ ಆದಾಯದಲ್ಲಿ ಇಳಿಕೆ
* ಗ್ರಾಮೀಣಾಭಿವೃದ್ಧಿಗೆ ಹೆಚ್ಚು ಒತ್ತು, ವಿವಿಧ ಯೋಜನೆಗಳ ಘೋಷಣೆ
* ಕೇಂದ್ರೀಯ ಯೋಜನಾ ವೆಚ್ಚ 2,43,386 ರಿಂದ 2,82,957 ಕೋಟಿ ರುಪಾಯಿಗಳಿಗೆ ಏರಿಕೆ
* ಆದಾಯ ತೆರಿಗೆ ಇಳಿಕೆ
* ಅಭಿವೃದ್ಧಿ ಯೋಜನೆಗಳ ವೆಚ್ಚವನ್ನು ಶೇ.9 ರಷ್ಟು ಜೆಡಿಪಿ ಏರಿಸುವುದು
* ಮಕ್ಕಳ ಅಭಿವೃದ್ಧಿ ಯೋಜನೆಗಳಿಗೆ 6,705 ಕೋಟಿ ರುಪಾಯಿ ವೆಚ್ಚ
* 7,400 ಕೋಟಿ ರುಪಾಯಿ ಕುಡಿಯುವ ನೀರು ಯೋಜನೆಗಾಗಿ ಮೀಸಲು
* 96,203 ಕೋಟಿ ರುಪಾಯಿಗಳಷ್ಟು ಆದಾಯ ತೆರಿಗೆ ರಹಿತ ಗಳಿಕೆ ಗುರಿ
* ಜವಾಹರ್ ಲಾಲ್ ನಗರಾಭಿವೃದ್ಧಿಗೆ ಮಿಷನ್ ಯೋಜನೆ 11,842 ಕೋಟಿ ರುಪಾಯಿಗಳು
* 4,900 ಸಾವಿರ ಕೋಟಿ ರುಪಾಯಿ ಭಾರತ್ ನಿರ್ಮಾಣ ಯೋಜನೆಗೆ ಮೀಸಲು
* ಯೋಜನಾ ವೆಚ್ಚವನ್ನು 3 ಲಕ್ಷ ಕೋಟಿ ರುಪಾಯಿಗಳಿಗೆ ಏರಿಕೆ
* ರಾಷ್ಟ್ರೀಕೃತ ಬ್ಯಾಂಕ್ ಗಳು ಸೇರಿ ಎಲ್ಲ ಸಾರ್ವಜನಿಕ ಬ್ಯಾಂಕ್ ಗಳಿಗೆ ಹೆಚ್ಚು ಅನುಕೂಲ
* 1.41 ಲಕ್ಷ ಕೋಟಿ ರುಪಾಯಿಗಳು ರಕ್ಷಣಾ ಇಲಾಖೆ ಮೀಸಲು
* ಅಲ್ಪಸಂಖ್ಯಾತರ ಅಭಿವೃದ್ಧಿ 15 ಅಂಶಗಳ ಸೂತ್ರ ಜಾರಿಗೆ
* ಕ್ರೀಡಾ ಇಲಾಖೆಗೆ ಉತ್ತೇಜನ
* ಕಳೆದ ಡಿಸೆಂಬರ್ ಶೇ. 2 ರಷ್ಟು ಆದಾಯ ಕುಸಿತ
* 2008 ಕ್ಕೆ ಹೋಲಿಸಿದರೆ 2009ರ ಆರ್ಥಿಕ ಸ್ಥಿತಿ ಅತ್ಯಂತ ಗಂಭೀರ
* 67,700 ಕೋಟಿ ರುಪಾಯಿ ವೆಚ್ಚದಲ್ಲಿ 54 ಬೃಹತ್ ಯೋಜನೆಗಳಿಗೆ ಚಾಲನೆ
* ಮೂಲಭೂತ ಸೌಕರ್ಯಗಳ ಯೋಜನೆಗಳಿಗೆ ಶೇ. 60 ರಷ್ಟು ಸರ್ಕಾರದ ಹಣ ನೀಡಿಕೆ
* ಹಣಕಾಸು ಸ್ಥಿತಿ ಸರಿದೂಗಿಸಲು ವಿಶೇಷ ಕ್ರಮ
* ಪ್ರಿಯದರ್ಶಿನಿ ಯೋಜಮೆ ಜಾರಿಗೆ, ನಿವೃತ್ತಿರಿಗೆ ಪಿಂಚಣಿ ಯೋಜನೆ ಜಾರಿ
* ಬ್ಯಾಂಕ್ ಗಳ ಪ್ರಗತಿಗೆ 600 ಕೋಟಿ ರುಪಾಯಿಗಳ ಜಾರಿ
* ಸಾರ್ವಜನಿಕ ವಲಯಗಳ ಕಂಪನಿಗಳ ಒಟ್ಟು ಮೊತ್ತ 10,87,000 ಕೋಟಿ ರುಪಾಯಿಗಳಿಗೆ ಏರಿಕೆ
* ಕಾರ್ಯನಿರ್ವಹಿಸದ ಸಾರ್ವಜನಿಕ ಕಂಪನಿಗಳಿಂದ ಶೇ. 2.3 ರಷ್ಟು ನಷ್ಟ
* ದೂರವಾಣಿ, ರೈಲ್ವೆ, ಬಂದರು ಹಾಗೂ ವಿದ್ಯುತ್ ವಲಯಗಳಲ್ಲಿ ಖಾಸಗಿ ಕಂಪನಿಗಳ ಬಂಡವಾಳ ಹೂಡಿಕೆ ಅಸ್ತು.
* ಒಟ್ಟು ಬಜೆಟ್ ಒಟ್ಟು ಮೊತ್ತ 909,053 ಲಕ್ಷ ಕೋಟಿ ರುಪಾಯಿಗಳು
* ಫರ್ಟಿಲೈಸರ್ಸ್ ಸಬ್ಸಿಡಿ 44,863 ಕೋಟಿ ರುಪಾಯಿಗಳಿಗೆ ಏರಿಕೆ
* ಗ್ರಾಮೀಣಾಭಿವೃದ್ಧಿ ಯೋಜನೆಗಳಿಗೆ ಹೆಚ್ಚಿನ ಹಣ
* ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 4000 ಕೋಟಿ ರುಪಾಯಿಗಳು ಮೀಸಲು
* ಅಂಚೆ ಇಲಾಖೆಯಲ್ಲಿ ವಿಶೇಷ ಯೋಜನೆ ಜಾರಿ, ಅಂಚೆ ಇಲಾಖೆಗೆ ಗ್ರಾಮೀಣಾಭಿವೃದ್ಧಿ ಜವಾಬ್ದಾರಿ.
* ಗೋಧಿಗೆ ಬೆಂಬಲ ಬೆಲೆ 630 ರಿಂದ 1080 ರುಪಾಯಿ ವರೆಗೆ ಏರಿಕೆ
* ವಿಜಯವಾಡ ಮತ್ತು ಭೂಪಾಲ್ ನಲ್ಲಿ ಪ್ಲಾನಿಂಗ್ ಅಂಡ್ ಅರ್ಕಿಟೆಕ್ಚರ್ ಕಾಲೇಜುಗಳ ಸ್ಥಾಪನೆ
* 500 ಐಟಿಐ ಕಾಲೇಜುಗಳು ಮೇಲ್ದರ್ಜೆಗೆ
* ನ್ಯಾಷನಲ್ ಸ್ಕಿಲ್ ಡೆವಲಪ್ ಮೆಂಟ್ ಸ್ಥಾಪನೆ
* ನಮ್ಮ ಯಶಸ್ವಿಗೆ ರೈತರೇ ಕಾರಣ.
* ಜಿಡಿಪಿ ಶೇ, 6-7 ರಷ್ಟು ನಿರೀಕ್ಷೆ
* ತೆರಿಗೆ ಜಿಡಿಪಿ ಶೇ. 12 ರಷ್ಟು ಏರಿಕೆ
* ಬಂಡವಾಳ ಹೂಡಿಕೆ ಶೇ. 39 ರಷ್ಟು ಹೆಚ್ಚಿದೆ.
* 28.5 ಮಿಲಿಯನ್ ಟನ್ ಅಕ್ಕಿಯನ್ನು ಪಡಿತರ ಸೇವೆಗೆ ವಿನಿಯೋಗ.
* 2008ರ ವಿದೇಶಿ ವಹಿವಾಟಿನಲ್ಲಿ ಜಿಡಿಪಿ ಶೇ. 39 ರಷ್ಟು ಪ್ರಗತಿ ಹೆಚ್ಚಳ
* ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಆರ್ಥಿಕತೆ ಭಾರಿ ಪೆಟ್ಟು ಬಿದ್ದಿದೆ.
* ಕಳೆದ ಒಂಬತ್ತು ತಿಂಗಳಿಂದ ರಫ್ತುನಲ್ಲಿ ಹಿನ್ನೆಡೆ
* ವಿತ್ತೀಯ ಕೊರತೆ ಇಳಿಮುಖ
* ಕೃಷಿ ಅಭಿವೃದ್ಧಿ ಅನುದಾನ ಶೇ. 11 ರಿಂದ 14ರ ವರೆಗೆ ಹೆಚ್ಚಳ
* 22.7 ಮಿಲಿಯನ್ ಗೋಧಿಯನ್ನು ಪಡಿತರ ಸೇವೆಗೆ ವಿತರಣೆ
* ತಲಾ ಆದಾಯ ಶೇ. 7.5 ಹೆಚ್ಚಳ
* ಯುಪಿಎ ನೀಡಿದ್ದ ಎಲ್ಲ ಭರವಸೆಗಳು ಈಡೇರಿವೆ.
* ಮರುಸಾಲಕ್ಕೆ ಐಐಎಫ್ ಸಿಎಲ್ ಒಪ್ಪಿಗೆ
* ಮೂಲ ಸೌಕರ್ಯಗಳಿಗೆ ಮರುಸಾಲ
* ಆದಾಯ ಕುಸಿತ 3.6 ರಿಂದ 14 ಕ್ಕೆ ಇಳಿಕೆ
* 70 ಸಾವಿರ ಕೋಟಿ ರುಪಾಯಿಗಳ ಮೂಲ ಸೌಕರ್ಯ ಯೋಜನೆಗಳಿಗೆ ಹಸಿರು ನಿಶಾನೆ
* ಹಣದುಬ್ಬರ ನಿಯಂತ್ರಣದಲ್ಲಿ ಯಶಸ್ವಿ.
* ಕೃಷಿ ಯೋಜಿತ ನಿಧಿಗೆ ಷೇ 300 ರಷ್ಟು ಏರಿಕೆ
* ಆರ್ಥಿಕ ಬಿಕ್ಕಟ್ಟನ್ನು ಯುಪಿಎ ಸಮರ್ಥವಾಗಿ ನಿಭಾಯಿಸಿದೆ.
* ಶೇ. 3.2 ರಷ್ಟು ವಾರ್ಷಿಕ ಕೃಷಿ ಪ್ರಗತಿ
* ವಾಣಿಜ್ಯ ಬ್ಯಾಂಕ್ ಗಳಿಗೆ ಮರು ಸಾಲ
* ಉದ್ಯೋಗ ಖಾತ್ರಿ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಕ್ರಮ
* ಗ್ರಾಮೀಣಾಭಿವೃದ್ಧಿಗೆ ವಿಶೇಷ ಒತ್ತು.
* ಇಂದಿರಾ ಆವಾಸ ಯೋಜನೆಯಡಿಯಲ್ಲಿ 60.12 ಲಕ್ಷ ವಸತಿಗಳ ನಿರ್ಮಾಣ
* 15 ಕೇಂದ್ರೀಯ ವಿಶ್ವವಿದ್ಯಾಲಯ, 6 ಹೊಸ ಐಐಟಿ ಕಾಲೇಜುಗಳ ಸ್ಥಾಪನೆ
* ಮಧ್ಯಪ್ರದೇಶ ಹಬಾಗೂ ರಾಜಸ್ಥಾನದಲ್ಲಿ ಐಐಟಿ ಸ್ಥಾಪನೆ, 2009-10ರಲ್ಲಿ ಕಾಲೇಜು ಆರಂಭ
* ಕಳೆದ ಸೆಫ್ಟಂಬರ್ ನಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ 24,260 ಕೋಟಿ ಹೆಚ್ಚಳ
* 65,300 ಕೋಟಿ ರುಪಾಯಿಗಳ ಕೃಷಿ ಸಾಲ ಮನ್ನಾ ಮಾಡಿದ್ದೇವೆ
* ಗ್ರಾಮೀಣ ಬ್ಯಾಂಕ್ ಗಳ ಪ್ರಗತಿಗೆ 652 ಕೋಟಿ ರುಪಾಯಿ ನೀಡುವುದು.
* ರಾಷ್ಟ್ರೀಯ ಭದ್ರತಾ ನಿಧಿಯನ್ನು ಸಾರ್ವಜನಿಕ ಸೇವೆಗಳಿಗೆ ಬಳಸುವುದು.
* 6 ಐಐಎಂ ಕಾಲೇಜುಗಳ ಸ್ಥಾಪನೆಗೆ ಚಿಂತನೆ.

(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ:
2009-10ರ ಮಧ್ಯಂತರ ಬಜೆಟ್ ಮುಖ್ಯಾಂಶಗಳು
ಪ್ರಣಬ್ ಮುಖರ್ಜಿ ಅವರಿಂದ ಬಜೆಟ್ ಮಂಡನೆ
ಬಜೆಟ್, ಕರ್ನಾಟಕ ಸೇರಿ ದಕ್ಷಿಣ ಭಾರತಕ್ಕೆ ಸುಣ್ಣ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+