ರಾಜಪಕ್ಸೆ ಐಟಿ ಸಲಹೆಗಾರರಾಗಿ ಮೂರ್ತಿ
ಕೊಲಂಬೊ, ಫೆ.14: ಇನ್ಫೋಸಿಸ್ ಟೆಕ್ನಾಲಜೀಸ್ ಅಧ್ಯಕ್ಷ ಎನ್.ಆರ್.ನಾರಾಯಣ ಮೂರ್ತಿ ಅವರನ್ನು ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರಿಗೆ ಮಾಹಿತಿ ತಂತ್ರಜ್ಞಾನದ ಅಂತರಾಷ್ಟ್ರೀಯ ಸಲಹೆಗಾರರನ್ನಾಗಿ ನೇಮಿಸಲಾಗಿದೆ.
ರಾಷ್ಟ್ರಪತಿ ಕಾರ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ '2009 ಇಂಗ್ಲಿಷ್ ಮತ್ತು ಮಾಹಿತಿ ತಂತ್ರಜ್ಞಾನ' ವರ್ಷದ ಉದ್ಘಾಟನಾ ಸಮಾರಂಭಕ್ಕೆ ನಾರಾಯಣ ಮೂರ್ತಿಯನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಇದೇ ಸಂದರ್ಭದಲ್ಲಿ ಅವರನ್ನು ರಾಜಪಕ್ಸೆ ಐಟಿ ಅಂತಾರಾಷ್ಟ್ರೀಯ ಸಲಹೆಗಾರರನ್ನಾಗಿ ನೇಮಕ ಮಾಡಿದರು.
ಮಾಹಿತಿ ತಂತ್ರಜ್ಞಾನದಲ್ಲಿ ಭಾರತ ಮಾಡಿದ ಸಾಧನೆಯಿಂದ ಶ್ರೀಲಂಕಾ ಸ್ಪೂರ್ತಿ ಪಡೆದಿದೆ. ತಾಂತ್ರಿಕ ಸಹಕಾರಕ್ಕೆ ಇತರ ರಾಷ್ಟ್ರಗಳ ಜತೆ ಭಾರತದ ನೆರವನ್ನೂ ಶ್ರೀಲಂಕಾ ಪಡೆಯುತ್ತಿದೆ. ಭಾರತ ಮಾಹಿತಿ ತಂತ್ರಜ್ಞಾನ ಪಿತಾಮಹ ನಾರಾಯಣ ಮೂರ್ತಿ ಉಪಸ್ಥಿತಿಯಿಂದ ಸಮಾರಂಭ ಕಳೆಗಟ್ಟಿತ್ತು.
(ಏಜೆನ್ಸೀಸ್)












Click it and Unblock the Notifications