ಬಜೆಟ್, ಕರ್ನಾಟಕ ಸೇರಿ ದಕ್ಷಿಣ ಭಾರತಕ್ಕೆ ಸುಣ್ಣ

ಬೆಂಗಳೂರು, ಫೆ. 13 : ರೈಲ್ವೆ ಸಚಿವ ಲಾಲು ಪ್ರಸಾದ ಯಾದವ್ ಇಂದು ಸಂಸತ್ತಿನಲ್ಲಿ ಮಧ್ಯಂತರ ರೈಲ್ವೆ ಬಜೆಟ್ ಮಂಡಿಸಿದ್ದು, ಲೋಕಸಭೆ ಚುನಾವಣೆಯ ಪೂರಕ ಬಜೆಟ್ ಹಾಗೂ ದೇಶದ ದೃಷ್ಟಿಯಿಂದ ನೋಡುವುದಾದರೆ ಜನಪರ ಬಜೆಟ್ ಎಂದು ಹೆಸರಿಸಲಾಗುತ್ತಿದೆ.

ಕೇಂದ್ರದ ಮಧ್ಯಂತರ ಬಜೆಟ್ ಕರ್ನಾಟಕ್ಕೆ ನಿರಾಶೆ ಬಜೆಟ್ ಎನ್ನಬಹುದು. ದೆಹಲಿ-ಬೆಂಗಳೂರು ನಿಜಾಮುದ್ಧೀನ್ ರಾಜಧಾನಿ ಎಕ್ಸ್ ಪ್ರೆಸ್ ರೈಲನ್ನು ವಾರದಲ್ಲಿ ಮೂರು ಸಲ ಸಂಚರಿಸುವುದು. ಮೈಸೂರು-ಯಶವಂತಪುರ ವಾರದಲ್ಲಿ ಎರಡು ಸಲ ಸಂಚಾರ ಹಾಗೂ ಬೆಂಗಳೂರು-ಚೆನ್ನೈ ನಡುವೆ ಬುಲೆಟ್ ರೈಲಿಗೆ ಪ್ರಸ್ತಾವನೆ, ಕಾರವಾರದಿಂದ ಮುಂಬೈಗೆ ರೈಲು ಸಂಚಾರ ತೋರಿಸಿರುವುದು ಲಾಲು ಬಜೆಟ್ ನ ವಿಶೇಷವಾಗಿದೆ.

ಉಳಿದಂತೆ ಕರ್ನಾಟಕದ ಅನೇಕ ಯೋಜನೆಗಳು ಮತ್ತೆ ನೆನೆಗುದಿಗೆ ಬಿದ್ದಿದೆ. ಮುಖ್ಯವಾಗಿ ಕೊಪ್ಪಳದ ಮುನಿರಾಬಾದ್ ನಿಂದ ಮೆಹಬೂಬನಗರವರಗೆ ರೈಲ್ವೆ ಸಂಚಾರ, ಹರಿಹರದಿಂದ ರೈಲುಗಳ ಸಂಚಾರ, ಚಾಮರಾಜನಗರ ರೈಲ್ವೆ ಹಳಿಗಳ ಕಾಮಗಾರಿ, ಡಬಲ್ ಟ್ರ್ಯಾಕ್ ನಿರ್ಮಾಣ ಕುರಿತು ಯಾವುದೇ ಪ್ರಸ್ತಾವನೆಯನ್ನು ಲಾಲು ಬತ್ತಳಿಕೆಯಿಂದ ಹೊರಬರಲಿಲ್ಲ.

ಇದರ ಜೊತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಗಮಾನಾರ್ಹವಾಗಿ ಇಳಿಕೆ ಕಂಡಿದೆ. ಈ ಹಿನ್ನೆಲೆಯಲ್ಲಿ ಶೇ. 5 ರಿಂದ 10 ರಷ್ಟು ಪ್ರಯಾಣ ದರ ಇಳಿಕೆಯಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಕೇವಲ ಶೇ. 2 ರಷ್ಟು ಇಳಿಕೆ ಮಾಡಿರುವುದು ನಿರಾಶೆಗೆ ಕಾರಣವಾಗಿದೆ. ಲಾಲು ಬಜೆಟ್ ತಮ್ಮ ತವರು ರಾಜ್ಯ ಬಿಹಾರ ಸೇರಿದಂತೆ ಉತ್ತರ ಭಾರತಕ್ಕೆ ಹೆಚ್ಚಿನ ಕೂಡುಗೆ ನೀಡಿದ್ದಾರೆ ಎಂದೇ ಹೇಳಬಹುದು. ನೂತನವಾಗಿ ಘೋಷಣೆಯಾಗಿರುವ ಅನೇಕ ರೈಲುಗಳು ಉತ್ತರ ಭಾರತಕ್ಕೆ ಸಿಮೀತವಾಗಿವೆ. ದಕ್ಷಿಣ ಭಾರತಕ್ಕೆ ಸುಣ್ಣ ಹಚ್ಚಿರುವುದು ಮೆಲ್ನೋಟಕ್ಕೆ ಎದ್ದು ಕಾಣುತ್ತಿದೆ.

ಬಜೆಟ್ ಮುಖ್ಯಾಂಶಗಳು

* 6ನೇ ವೇತನ ಪರಿಷ್ಕರಣೆ, 1.4 ಮಿಲಿಯನ್ ಉದ್ಯೋಗಳಿಗೆ, 1.1 ಮಿಲಿಯನ್ ನಿವೃತ್ತಿರಿಗೆ ವೇತನ ಪರಿಷ್ಕರಣೆ ಲಾಭ.
* ರೈಲುಗಳ ಭದ್ರತೆಗೆ ಅಗತ್ಯ ಕ್ರಮ.
* ದೆಹಲಿ ಪಾಟ್ನಾ ನಡುವೆ ಬುಲೆಟ್ ಸಹಿತ ರೈಲ್ವೆ ಆರಂಭ.
* ಎಸ್ ಪ್ರಯಾಣದರಲ್ಲಿ ಶೇ. 2 ರಷ್ಟು ಕಡಿತ.
* ನವದೆಹಲಿ-ಅಬಮದಾಬಾದ್ ರೈಲು ವಾರದಲ್ಲಿ ಆರು ದಿನ ಸಂಚಾರ.
* 43 ಹೊಸ ರೈಲು ಸಂಚಾರ ಘೋಷಣೆ.
* ವಾರದಲ್ಲಿ ಎರಡು ಸಲ ಮುಂಬೈ ಬಿಕಾನೇರ್ ನಡುವೆ ರೈಲು ಸಂಚಾರ.
* ಸರಕು ಸಾಗಣಿ ದರದಲ್ಲಿ ಯಾವುದೇ ಬದಲಾವಣೆ ಇಲ್ಲ.
* ಮೇಲ್ ರೈಲುಗಳ ಪ್ರಯಾಣದರದಲ್ಲಿ ಕಡಿತ.
* ವಾರದಲ್ಲಿ ಮೂರು ಸಲ ನಿಜಾಮುದ್ಧೀನ್ ಬೆಂಗಳೂರು ರಾಜಧಾನಿ ಎಕ್ಸ್ ಪ್ರೆಸ್ ಸಂಚಾರ.
* ಮುಂಬೈ ಮತ್ತು ದೆಹಲಿಯಲ್ಲಿ ಸರಕು ಸಾಗಣೆ ಕಾರಿಡಾರ್.
* ಸರಕು ಸಾಗಣೆಯಲ್ಲಿ ಶೇ.8 ರಷ್ಟು ವೃದ್ಧಿ.
* ರೈಲ್ವೆ ವಿಚಾರಣೆಗೆ ನಾಲ್ಕು ಕಾಲ್ ಸೆಂಟರ್ ಸ್ಥಾಪನೆ.
* ಸರಕು ಸಾಗಣೆ ಸಾಮರ್ಥ್ಯ ಶೇ.70 ರಷ್ಟು ಏರಿದೆ.
* ಪ್ರಯಾಣಿಕರ ಸಂಚಾರದಲ್ಲಿ ಶೇ.14 ರಷ್ಟು ಏರಿಕೆ.
* 5 ವರ್ಷಗಳಲ್ಲಿ 90 ಸಾವಿರ ಕೋಟಿ ರುಪಾಯಿ ಆದಾಯ.
* ಯುಪಿಎನಿಂದ ಜನಪರ ಬಜೆಟ್.
* ರೈಲ್ವೆ ಅಪಘಾತಗಳಲ್ಲಿ ಗಣನೀಯ ಇಳಿಕೆ.
* ರೈಲ್ವೆ ಉದ್ಯೋಗಿಗಳಿಗೆ 6 ನೇ ವೇತನ ಶೀಘ್ರದಲ್ಲಿ ಜಾರಿ.
* ಮುಂದಿನ ವರ್ಷ 10,576 ಕೋಟಿ ರುಪಾಯಿ ಲಾಭ ನಿರೀಕ್ಷೆ.
* ಮುಂದಿನ 5 ವರ್ಷದಲ್ಲಿ 2.3 ಲಕ್ಷ ಕೋಟಿ ಹೂಡಿಕೆ.
* ದೆಹಲಿ, ಅಮೃತ್ ಸರ ಬುಲೆಟ್ ಸಹಿತ ರೈಲ್ವೆ ಸಂಚಾರ ಆರಂಭ.
* ರೈಲ್ವೆಯಲ್ಲಿ ಡಬಲ್ ಡೆಕ್ಕರ್ ಸರಕು ಸಾಗಣೆ ವ್ಯವಸ್ಥೆ ಆರಂಭ.
* ಲೂಧಿಯಾನದಿಂದ ಕೊಲ್ಕತ್ತಾ ವರೆಗೆ ಪೂರ್ವ ಸರಕು ಸಾಗಣೆ ಕಾರಿಡಾರ್.
* ಆನ್ ಲೈನ್ ನಲ್ಲಿ ಟಿಕೆಟ್ ಖರೀದಿಸಬಹುದು.
* ಅಹಮದಬಾದ್, ಚೆನ್ನೈ ಎರ್ನಾಕುಲಂ ಬುಲೆಟ್ ಸಹಿತ ರೈಲ್ವೆ.
* ಅಜ್ಮೀರ್-ಭಗಲ್ಪುರ್ ನಡುವೆ ಗರೀಭ್ ರಥ ರೇಲ್ವೆ ಆರಂಭ.
* ನೌಕರರ ವೇತನಕ್ಕಾಗಿ 9 ಸಾವಿರ ಕೋಟಿ ರು ವೆಚ್ಚ.

ಹೊಸ ರೈಲುಗಳು ಸಂಚಾರ ಘೋಷಣೆ

* ಬಿಲಾಸ್ ಪುರ್- ತಿರುನೆಲ್ವೇಲಿ ( ವಾರಕ್ಕೆ 1 ಸಲ)
* ಮುಂಬೈ- ಕಾರವಾರ
* ದುರ್ಗಾ- ಜೈಪುರ್ (ವಾರಕ್ಕೆ ಎರಡು ಸಲ)
* ಮುಂಬೈ- ಧನ್ ಬಾದ್ ಎಕ್ಸ್ ಪ್ರೆಸ್
* ಧಿಬ್ರುಗಢ್-ಚಂಡೀಗಢ್ ಎಕ್ಸ್ ಪ್ರೆಸ್
* ನಿಜಾಮುದ್ಧೀನ್ ರಾಜಧಾನಿ ಎಕ್ಸ್ ಪ್ರೆಸ್
* ಬಾರೌನಿ - ದೆಹಲಿ ಎಕ್ಸ್ ಪ್ರೆಸ್
* ಮೈಸೂರು- ಯಶವಂತಪುರ ಎಕ್ಸ್ ಪ್ರೆಸ್
* ಮುಂಬೈ ಬಿಕಾನೇರ್ ಎಕ್ಸ್ ಪ್ರೆಸ್
* ಆಗ್ರಾ ಲಖನೌ ಎಕ್ಸ್ ಪ್ರೆಸ್
* ಗಾದಿ ಧಾಮ- ಗೋರಕ್ ಪುರ್ ಎಕ್ಸ್ ಪ್ರೆಸ್
* ದೆಹಲಿ-ಗೌಹಾತಿ ರಾಜಧಾನಿ ಎಕ್ಸ್ ಪ್ರೆಸ್
* ಜಾನ್ಸಿ ಚಿಂದ್ವಾರಾ ಎಕ್ಸ್ ಪ್ರೆಸ್
* ಮುಂಬೈ ಡೋಧ್ ಪುರ್ ಎಕ್ಸ್ ಪ್ರೆಸ್
* ಹೌರಾ ದೆಹಲಿ ಎಕ್ಸ್ ಪ್ರೆಸ್

(ದಟ್ಸ್ ಕನ್ನಡ ವಾರ್ತೆ)
ಮಧ್ಯಂತರರೈಲ್ವೆ ಬಜೆಟ್ ಮುಖ್ಯಾಂಶಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+