ತಾಲಿಬಾನೀಕರಣ ಹೇಳಿಕೆ, ಸಚಿವೆ ರೇಣುಕಾಗೆ ನೋಟೀಸ್
ಮ೦ಗಳೂರು, ಫೆ. 12 : ಮಂಗಳೂರು ತಾಲಿಬಾನ್ ಆಗಿಬಿಟ್ಟಿದೆ ಎಂದು ವಿವಾದಕಾರಿ ಹೇಳಿಕೆ ನೀಡಿದ್ದ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ರೇಣುಕಾ ಚೌಧರಿ ವಿರುದ್ದ ನ್ಯಾಯವಾದಿಯೊಬ್ಬರು ನೋಟೀಸ್ ನೀಡಿದ್ದಾರೆ. ನೋಟೀಸ್ ನೀಡಿದ ದಿನದಿಂದ ಮೂರು ದಿನಗಳ ಒಳಗೆ ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆದು ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು, ಇಲ್ಲವಾದರೆ ಕ್ರಿಮಿನಲ್ ಮೊಕದ್ದಮೆ ಎದುರಿಸಿ ಎಂದು ನ್ಯಾಯವಾದಿ ಪಿಪಿ ಹೆಗ್ಡೆ ನೋಟೀಸ್ ನಲ್ಲಿ ತಿಳಿಸಿದ್ದಾರೆ.
ನೋಟೀಸ್ ನಲ್ಲಿ ತಾಲಿಬಾನ್ ಎ೦ಬ ಪದ ಅಫ್ಘಾನ್ ನೆಲೆಯ ಉಗ್ರಗಾಮಿಗಳಿಗೆ ಸಂಬಂಧಿಸಿದ್ದು , ಇದು ಭಾರತೀಯರ ವಿರುದ್ದ ಮಾಡುವ ಆಪಾದನೆಯಲ್ಲ. ಮಂಗಳೂರಿನಲ್ಲಿ ಹಿಂದೂ ಹುಡುಗಿ, ಮುಸ್ಲಿಂ ಹುಡುಗ ಮಾತನಾಡುವಂತಿಲ್ಲ ಎಂಬ ಹೇಳಿಕೆಯೇ ತಪ್ಪು. ಯಾವುದೇ ಒಂದೆರಡು ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಮಂಗಳೂರಿಗರೇ ಭಯೋತ್ಪಾದಕರು ಎಂಬಂತೆ ಸಚಿವೆ ನೀಡಿದ್ದ ಹೇಳಿಕೆಯಿಂದ ವಿವಿಧ ಧರ್ಮಗಳ ನಡುವೆ ಶತ್ರುತ್ವ, ದ್ವೇಷ ಹೆಚ್ಚುತ್ತದೆ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಚಿವೆ ರೇಣುಕಾ ಅವರು ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ಹೆಗ್ಡೆ ತಮ್ಮ ನೋಟೀಸ್ ನಲ್ಲಿ ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಪಬ್ ಸಂಸ್ಕೃತಿ ತಡೆಯಲು ನೀವ್ಯಾರ್ರಿ?












Click it and Unblock the Notifications