ನಾರಾಯಣಮೂರ್ತಿ ಕೈಗೆ ಶಿಸ್ತು ಪಾಲನಾ ಸಮಿತಿ
ನವದೆಹಲಿ, ಫೆ.12 : ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಸತ್ಯಂ ಹಗರಣ ಮಾದರಿಯಲ್ಲಿ ಇನ್ನೊಂದು ಘಟನೆ ನಡೆಯಬಾರದು ಎಂದು ಮುಂಜಾಗ್ರತಾ ಕ್ರಮವಾಗಿ ಐಟಿ ಕಂಪನಿಗಳ ಒಕ್ಕೂಟ ನಾಸ್ಕಾಂ, ಇನ್ಫೋಸಿಸ್ ಮುಖ್ಯಸ್ಥ ಎನ್ ಆರ್ ನಾರಾಯಣಮೂರ್ತಿ ನೇತೃತ್ವದಲ್ಲಿ ಶಾಶ್ವತ ಸಮಿತಿಯೊಂದನ್ನು ರಚಿಸಿದೆ.
ಐಟಿ ವಲಯದ ತಜ್ಞರು, ಸ್ವತಂತ್ರ ನಿರ್ದೇಶಕರು, ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡಂತೆ ಒಟ್ಟು 8 ಸದಸ್ಯರ ಸಮಿತಿ ರಚಿಸಲಾಗಿದ್ದು, ಇದಕ್ಕೆ ಶಾಶ್ವತ ಅಸ್ತಿತ್ವ ನೀಡಲಾಗಿದೆ. ನಾಸ್ಕಾಂ ಕಾರ್ಯನಿರ್ವಹಣಾ ಸಮಿತಿಯೊಂದಿಗೆ ಉಪಸಮಿತಿಯಾಗಿ ಕಾರ್ಯ ನಿರ್ವಹಿಸಲಿದೆ. ವರ್ಷಕ್ಕೆ ಮೂರು ಸಲ ಸಭೆ ಸೇರಿ ನೀತಿ ನಿಯಮಗಳ ಅನುಷ್ಠಾನದ ಕುರಿತು ಪರಾಮರ್ಶೆ ನಡೆಸಲಿದೆ. ಅನುಶಾಸನಗಳನ್ನು ಪಾಲನೆ ಮಾಡಲಾಗುತ್ತದೆಯೋ, ಇಲ್ಲವೋ ಎಂಬುದನ್ನು ಸೂಕ್ಷ್ಮವಾಗಿ ಸಮಿತಿ ಗಮನಿಸಲಿದೆ.
ದೇಶದಲ್ಲಿ ಐಟಿ ಹಾಗೂ ಹೊರಗುತ್ತಿಗೆ ವ್ಯವಹಾರ ನೋಡಿಕೊಳ್ಳುತ್ತಿರುವ ಕಾರ್ಪೋರೇಟ್ ಆಡಳಿತ ಬಲಪಡಿಸಲು ನಾಸ್ಕಾಂ ಕೈಗೊಂಡ ಕ್ರಮಗಳಲ್ಲಿ ಇದು ಅತ್ಯಂತ ಪ್ರಮುಖವಾದದ್ದು ಎಂದು ನಾಸ್ಕಾಂ ಚೇರಮನ್ ಗಣೇಶ್ ನಟರಾಜನ್ ತಿಳಿಸಿದರು.
(ಏಜೆನ್ಸೀಸ್)












Click it and Unblock the Notifications