ಲೀಲಾವತಿ ಮತ್ತು ವಿನೋದ್ ರಾಜ್ ಕೊಲೆಗೆ ಯತ್ನ

ನಗರದ ಉಪ್ಪಾರಪೇಟೆ ಪೋಲಿಸ್ ಥಾಣೆಯ ವ್ಯಾಪ್ತಿಯ ಶಾಂತಲಾ ಸಿಲ್ಕ್ ಜಂಕ್ಷನ್ ಬಳಿ ಲೀಲಾವತಿ ಮತ್ತು ವಿನೋದ್ ರಾಜ್ ಅವರಿದ್ದ ಕಾರಿನ ಮೇಲೆ ಬೆಳಿಗ್ಗೆ 9.45ರ ಸುಮಾರಿಗೆ ದಾಳಿ ನಡೆಸಲಾಗಿದೆ. ಅವರು ಬುಲೆಟ್ ಪ್ರೂಫ್ ಇರುವ ಎಪಿ 9 ಎವಿ 8586 ನಂಬರಿನ ಕಾರಿನಲ್ಲಿ ತೆರಳುತ್ತಿದ್ದರು. ಪ್ರತ್ಯಕ್ಷದರ್ಶಿಗಳ ಪ್ರಕಾರ, ಕೆಲ ವ್ಯಕ್ತಿಗಳು ಅವರನ್ನು ಗಾಂಧಿನಗರದಿಂದಲೇ ಹಿಂಬಾಲಿಸುತ್ತಿದ್ದರು.
ಅವರ ಮ್ಯಾನೇಜರ್ ನಾಗರಾಜ್ ಮತ್ತು ಕಾರಿನ ಚಾಲಕ ಬಸವರಾಜ್ ಕೂಡ ಅಪಾಯದಿಂದ ಪಾರಾಗಿದ್ದಾರೆ. ಇವರೆಲ್ಲಾ ಕಾರಿನಲ್ಲಿ ಗಾಂಧಿನಗರದಿಂದ ಅಬ್ಬಯ್ಯ ನಾಯ್ದು ಸ್ಟುಡಿಯೋಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಹಿಂದಿನ ಗಾಜಿನ ಕಿಟಕಿ ಪುಡಿಪುಡಿಯಾಗಿದೆ.
ಈ ಘಟನೆಯಿಂದ ಬೆಚ್ಚಿ ಬೆದ್ದಿರುವ ವಿನೋದ್ ರಾಜ್ ನನಗೆ ಯಾರು ಮೇಲೂ ಸಂದೇಹವಿಲ್ಲ ಎಂದಿದ್ದಾರೆ. ಸ್ಥಳಕ್ಕೆ ಧಾವಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದು , ಕಾರಿನ ಮೇಲೆ ಕಲ್ಲು ತೂರಲಾಗಿದೆಯೇ ಅಥವಾ ಗುಂಡು ಹಾರಿಸಲಾಗಿದೆಯೇ ಎಂದು ಇನ್ನೂ ಖಚಿತಗೊಂಡಿಲ್ಲ ಎ೦ದು ಪೋಲಿಸ್ ಆಯುಕ್ತ ಶಂಕರ್ ಬಿದರಿ ತಿಳಿಸಿದ್ದಾರೆ.
ವಿನೋದ್ ರಾಜ್ ಮೇಲೆ ದಾಳಿ ನಡೆದಿರುವುದು ಇದು ಮೊದಲೇನಲ್ಲ. ಆರೇಳು ತಿಂಗಳ ಹಿಂದೆಯೂ ಅವರ ಹತ್ಯೆಗೆ ಯತ್ನ ನಡೆದಿತ್ತು.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ
ವಿನೋದ್ ಮೇಲೆ ಗುಂಡಿನ ದಾಳಿ ನಡೆದಿಲ್ಲ : ಬಿದರಿ











Click it and Unblock the Notifications