ಸೆಪ್ಟೆಂಬರ್ವರೆಗೆ ಕೆಆರ್ಎಸ್ ದ್ವಾರ ಮುಕ್ತ
ಮೈಸೂರು, ಫೆ. 6 : ಕೃಷ್ಣರಾಜಸಾಗರ ಬೃಂದಾವನಕ್ಕೆ ಪ್ರವಾಸಿಗರಿಗೆ ವಾರದ ಎಲ್ಲಾ ದಿನಗಳಲ್ಲಿ ಪ್ರವೇಶವನ್ನು ಕಲ್ಪಿಸಲು ಕಾವೇರಿ ನಿಗಮ ನಿರ್ಧರಿಸಿದೆ. ದೀಪಾಲಂಕಾರದ ವೇಳೆಯು ಫೆಬ್ರವರಿ 1ರಿಂದ ಸೆಪ್ಟೆಂಬರ್ 30ರವರೆಗೆ, ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 7.00ರಿಂದ ಸಾಯಂಕಾಲ 7.55ವರೆಗೆ ಹಾಗು ಶನಿವಾರ ಮತ್ತು ಭಾನುವಾರಗಳಂದು ಬೆಳಿಗ್ಗೆ 7.00ರಿಂದ ಸಾಯಂಕಾಲ 8.55ರವರೆಗೆ ತೆರೆದಿರುತ್ತದೆ. ದೀಪಾಲಂಕಾರದ ವೇಳೆಯು ಮುಗಿಯುವುದಕ್ಕೆ ಅರ್ಧಗಂಟೆ ಮುಂಚಿತವಾಗಿ ಪ್ರವಾಸಿಗರಿಗೆ ಪ್ರವೇಶವನ್ನು ನಿಷೇಧಿಸಲ್ಪಟ್ಟಿರುತ್ತದೆ ಎಂದು ಕಾವೇರಿ ನಿಗಮದ ಪ್ರಕಟಣೆ ತಿಳಿಸಿದೆ.
***
ವೆಂಕಟಪ್ಪ ಚಿತ್ರಶಾಲೆ ನಿಯಮ ಬದಲಾವಣೆ
ಬೆಂಗಳೂರು, ಫೆ 6 : ಬೆಂಗಳೂರಿನ ವೆಂಕಟಪ್ಪ ಚಿತ್ರಶಾಲೆಯಲ್ಲಿ ಕಲಾಕೃತಿಗಳ ಪ್ರದರ್ಶನ ಏರ್ಪಡಿಸಲು ವಿಧಿಸಲಾಗಿದ್ದ ನಿಯಮಗಳನ್ನು ಬದಲಿಸಲಾಗಿದೆ. 2009ನೇ ಸಾಲಿನಲ್ಲಿ ಕಲಾ ಪ್ರದರ್ಶನ ಏರ್ಪಡಿಸುವ ಕಲಾವಿದರು ನಿಗದಿತ ಅರ್ಜಿಯೊಂದಿಗೆ 5ರಿಂದ 10 ಕಲಾಕೃತಿಗಳ ಛಾಯಾಚಿತ್ರಗಳನ್ನು "ಸಹಾಯಕ ನಿರ್ದೇಶಕರು, ಸರ್ಕಾರಿ ವಸ್ತು ಸಂಗ್ರಹಾಲಯ ಮತ್ತು ವೆಂಕಟಪ್ಪ ಚಿತ್ರಶಾಲೆ, ಕಸ್ತೂರಬಾ ರಸ್ತೆ, ಬೆಂಗಳೂರು - 560 001" ವಿಳಾಸಕ್ಕೆ ಕಳುಹಿಸಲು ಕೋರಿದೆ. ಪ್ರದರ್ಶನಾಲಯವನ್ನು ಕಲಾವಿದರಿಗೆ ನೀಡುವ ಅಂತಿಮ ನಿರ್ಧಾರವನ್ನು ವೆಂಕಟಪ್ಪ ಚಿತ್ರಶಾಲೆಯ ಸಲಹಾ ಸಮಿತಿ ಕೈಗೊಳ್ಳುವುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-22864483 ಕರೆ ಮಾಡಬಹುದು.
***
ಯುವ ವಿಜ್ಞಾನಿ - 2009 ಪ್ರಶಸ್ತಿ
ಬೆಂಗಳೂರು, ಫೆ 6 : ರಾಜ್ಯದ ವಿದ್ಯಾರ್ಥಿ ಸಮುದಾಯದಲ್ಲಿ ವೈಜ್ಞಾನಿಕ ವೃತ್ತಿಪರಿತೆಯನ್ನು ಉತ್ತೇಜಿಸಿ ಪ್ರೋತ್ಸಾಹಿಸುವ ಸಲುವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಯುವ ವಿಜ್ಞಾನಿ - 2009 ಪ್ರಶಸ್ತಿಯನ್ನು ಸ್ಥಾಪಿಸಿದ್ದು, ಈ ಸಂಬಂಧ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಜಿಲ್ಲಾ ಮಟ್ಟದಲ್ಲಿ ಪ್ರಥಮ ರೂ 3000, ದ್ವಿತೀಯ ರೂ 2000, ತೃತೀಯ 1000 ಹಾಗೂ ರಾಜ್ಯಮಟ್ಟದಲ್ಲಿ ಪ್ರಥಮ ರೂ 10000, ದ್ವಿತೀಯ ರೂ 7000 ಹಾಗೂ ತೃತೀಯ ರೂ 5000 ಗಳ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಿ ಪುರಸ್ಕರಿಸಲಾಗುವುದು.
ಹೆಚ್ಚಿನ ಮಾಹಿತಿ ಹಾಗೂ ಅರ್ಜಿಗಾಗಿ "ಕಾರ್ಯದರ್ಶಿ, ಯುವ ವಿಜ್ಞಾನಿ ಪ್ರಶಸ್ತಿ -2009, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಭವನ, ನಂ. 24/2 ಮತ್ತು 24/3, 21ನೇ ಮುಖ್ಯ ರಸ್ತೆ. ಬನಶಂಕರಿ 2ನೇ ಹಂತ, ಬೆಂಗಳೂರು - 70 ವಿಳಾಸಕ್ಕೆ ಬರೆಯಬಹುದು. ಅಥವಾ ದೂರವಾಣಿ 080 - 26718939 ಸಂಖ್ಯೆಗೆ ಕರೆ ಮಾಡಬಹುದು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications