ತುಮಕೂರು ವಿವಿಗೆ ಸಿದ್ದಗಂಗಾ ಶ್ರೀಗಳ ಹೆಸರು:ಸಿಎಂ
ತುಮಕೂರು, ಫೆ. 4 : ತುಮಕೂರು ವಿಶ್ವವಿದ್ಯಾಲಯಕ್ಕೆ ತ್ರಿವಿಧ ದಾಸೋಹಿ, ಆಧ್ಯಾತ್ಮಿಕ ಕ್ಷೇತ್ರದ ಅನರ್ಘ್ಯ ರತ್ನ ಸಿದ್ದಗಂಗಾ ಮಠಾಧೀಶ ಡಾ ಶಿವಕುಮಾರ ಮಹಾಸ್ವಾಮಿಗಳ ಹೆಸರನ್ನಿಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.
ತುಮಕೂರಿನಲ್ಲಿ ಏರ್ಪಡಿಸಲಾಗಿರುವ ಸಿದ್ದಗಂಗಾ ಮಠಾಧೀಶ ಶಿವಕುಮಾರ್ ಶ್ರೀಗಳ ಶತದಿನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ತಮ್ಮ ಜೀವಿತಾವಧಿಯನ್ನು ಸಮಾಜದ ಸೇವೆಗಾಗಿ ಮುಡುಪಾಗಿಟ್ಟ ಮಹಾನ್ ಚೇತನದ ಸವಿನೆನಪಿಗಾಗಿ ತುಮಕೂರು ವಿಶ್ವವಿದ್ಯಾಲಯಕ್ಕೆ ಅವರ ಹೆಸರನ್ನು ಇಡಲು ನಿರ್ಧರಿಸಲಾಗಿದೆ. ಈ ಬಗ್ಗೆ ಮುಂಬರುವ ಅಧಿವೇಶನ ಹಾಗೂ ಸಚಿವ ಸಂಪುಟದಲ್ಲಿ ಚರ್ಚಿಸಲಾಗುವುದು. ಅಗತ್ಯಬಿದ್ದರೆ ಕಾನೂನು ತೊಡಕುಗಳಿಗೆ ತಿದ್ದುಪಡಿ ಮಾಡಿ ಶಿವಕುಮಾರ ಶ್ರೀಗಳ ಹೆಸರನ್ನು ತುಮಕೂರು ವಿಶ್ವವಿದ್ಯಾಲಯಕ್ಕೆ ನಾಮಕರಣ ಮಾಡಲಾಗುವುದು ಎಂದು ಯಡಿಯೂರಪ್ಪ ಘೋಷಿಸಿದರು.
ಶತದಿನೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಸಿದ್ದಗಂಗಾ ಶ್ರೀಗಳನ್ನು ಮನಸಾರೆ ಹೊಗಳಿದರು. ಅಧ್ಯಾತ್ಮಿಕ ಕ್ಷೇತ್ರದ ಏಕಮೇವ ರತ್ನ ಎಂದು ಬಣ್ಣಿಸಿದ ಅಡ್ವಾಣಿ, ಶ್ರೀಗಳು ಪ್ರಶಸ್ತಿ ಹಾಗೂ ಗೌರವಗಳಿಗೆ ಮೀರಿದವರು ಎಂದು ಕೊಂಡಾಡಿದರು. ಶ್ರೀಗಳ ಸಾಧನೆಯನ್ನು ಚಿಕ್ಕ ಪುಟ್ಟ ಗೌರವದಿಂದ ಅಳೆಯಲು ಸಾಧ್ಯವಿಲ್ಲ. ಇಡೀ ಮಾನವ ಕುಲದ ಪ್ರತಿನಿಧಿಯಾಗಿ ಸಾರ್ಥಕ ಜೀವನ ನಡೆಸಿದ ಶ್ರೀಗಳಿಗೆ ಕೋಟಿ ನಮನ ಸಲ್ಲಿಸಿದರೂ ಸಾಲದು ಎಂದು ಅಡ್ವಾಣಿ ಪ್ರಶಂಸಿದರು.
(ದಟ್ಸ್ ಕನ್ನಡ ವಾರ್ತೆ)
ಸಕಲ ಧರ್ಮಗಳನ್ನು ಪ್ರೀತಿಸಿ, ಶಿವಕುಮಾರ ಶ್ರೀಗಳು












Click it and Unblock the Notifications