ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಎಸ್ ಪಿ ಸೇರಲು ಅಡ್ವಾಣಿಗೆ ಅಮರಸಿಂಗ್ ಆಹ್ವಾನ
ಲಕ್ನೊ, ಜ.31: ಬಾಬ್ರಿ ಮಸೀದಿ ಧ್ವಂಸ ಮಾಡಿದ್ದರ ಬಗ್ಗೆ ವಿಷಾದ ವ್ಯಕ್ತ ಪಡಿಸಿ ದೇಶದ ಕ್ಷಮೆ ಕೇಳಿದರೆ ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ ಎಲ್.ಕೆ.ಆಡ್ವಾಣಿ ಕೂಡ ಸಮಾಜವಾದಿ ಪಕ್ಷ ಸೇರಬಹುದು. ಅದಕ್ಕೆ ನಮ್ಮ ಅಭ್ಯಂತರವೇನೂ ಇಲ್ಲ ಎಂದು ಅಮರಸಿಂಗ್ ಗೋರಖಪುರದ ಸಾರ್ವಜನಿಕ ಸಭೆಯೊಂರಲ್ಲಿ ಘೋಷಿಸಿದ್ದಾರೆ. ಕಾಕತಾಳೀಯವೆಂಬಂತೆ ಅವರು ಹಾಗೆ ಘೋಷಿಸಿದ ತಕ್ಷಣವೇ ಅವರು ನಿಂತಿದ್ದ ವೇದಿಕೆ ಕುಸಿದುಬಿತ್ತು !! ಅದೃಷ್ಟವಶಾತ್ ಯಾರೂ ಗಾಯಗೊಂಡಿಲ್ಲ.
ಕಲ್ಯಾಣ್ ಸಿಂಗ್ ಮತ್ತು ಅವರ ಪುತ್ರ ರಾಜ್ ಬೀರ್ ಸಿಂಗ್ ಸೇರ್ಪಡೆಯಿಂದ ಪಕ್ಷಕ್ಕೆ ಇನ್ನಷ್ಟು ಬಲಬಂದಿದೆ. ರಾಜ್ ಬೀರ್ ಸಿಂಗ್ ಅವರನ್ನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಲಾಗಿದೆ. ಕಲ್ಯಾಣ್ ಸಿಂಗ್ ಅವರ ರಾಜಕೀಯ ಅನುಭವವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತೇವೆ ಎಂದು ಈ ಸಂದರ್ಭದಲ್ಲಿ ಅಮರ್ ಸಿಂಗ್ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
Comments
Story first published: Saturday, January 31, 2009, 11:04 [IST]