ಭಯೋತ್ಪಾದಕರನ್ನು ಗಲ್ಲಿಗೇರಿಸಿ: ಮೌಲಾನ ಮದ್ನಿ

ಬೆಂಗಳೂರು, ಜ. 29: ಭಯೋತ್ಪಾದಕ ಅಥವಾ ಕೋಮುವಾದಿಗಳಾಲಿ ದೇಶಕ್ಕೆ ಮಾರಕವಾದವರಿಗೆ ಗಲ್ಲು ಶಿಕ್ಷೆ ವಿಧಿಸುವುದು ಸರಿಯಾದ ಕ್ರಮ ಎಂದು ಜಾಮಾತೆ ಉಲಾಮ ಇ ಹಿಂದ್(JUH) ನ ಮುಖಂಡ ಹಾಗೂ ರಾಜ್ಯ ಸಭಾ ಸದಸ್ಯ ಮೌಲಾನ ಮಹಮೊದ್ ಮದ್ನಿ ಹೇಳಿದ್ದಾರೆ.

ಕೋಮುವಾದ ಹಾಗೂ ಭಯೋತ್ಪಾದನೆ ಎರಡನ್ನು ಸಮಾನ ದೃಷ್ಟಿಯಿಂದ ಕಾಣಬೇಕಾದ ಸಂದರ್ಭ ಬಂದಿದೆ. ದೇಶಕ್ಕೆ ನಷ್ಟವುಂಟು ಮಾಡುವವರ ವಿರುದ್ಧ ಹೋರಾಟ ಅಗತ್ಯ ಎಂದು ಮದ್ನಿ ಹೇಳಿದರು. ಭಾರತದಲ್ಲಿನ ಮುಸ್ಲಿಮರು ಭಯೋತ್ಪಾದನೆಯ ವಿರುದ್ಧ ಸಮರ ಸಾರಲು ಸಜ್ಜಾಗಿದ್ದಾರೆ. ಇದು ವಿಶ್ವದ ಯಾವುದೆ ಭಯೋತ್ಪಾದನೆ ಪೀಡಿತ ದೇಶದಲ್ಲಿ ನಡೆದಿಲ್ಲ.

ಮದರಸಾಗಳ ಪಠ್ಯಕ್ರಮಗಳ ಪರಿಷ್ಕರಣೆಯ ಅಗತ್ಯವಿಲ್ಲ. ಧಾರ್ಮಿಕ ಬೋಧನೆ ಅವ್ಯಾಹತವಾಗಿ ಸಾಗಲಿದೆ. ಇದರ ಜೊತೆಗೆ ಮದರಸಾಗಳು ಶೈಕ್ಷಣಿಕವಾಗಿ ಇನ್ನೂ ಹೊಸತನ ಕಾಣಬೇಕಿದೆ. ಭಯೋತ್ಪಾದನೆಯ ದುಷ್ಪರಿಣಾಮದ ಬಗ್ಗೆ ಜನ ಸಾಮಾನ್ಯರಿಗೆ ತಿಳಿ ಹೇಳಬೇಕಾಗಿದೆ. ಈ ಬಗ್ಗೆ ಬೃಹತ್ ಜಾಗೃತ ಸಮಾವೇಶವನ್ನು ಹಮ್ಮಿಕೊಳ್ಳಲು ಜಮಾತೆ ಸಂಘಟನೆ ಸಿದ್ಧವಾಗುತ್ತಿದೆ.

ಶನಿವಾರ(ಜ.31) ರಂದು ಬೃಹತ್ ಸಾರ್ವಜನಿಕ ಸಭೆ ಕರೆದು ಭಯೋತ್ಪಾದನೆ ವಿರುದ್ಧ ಸಮರ ಸಾರಲಿದ್ದೇವೆ. ಸುಮಾರು 2, 500 ಜನ ವಿದ್ವಾಂಸರು ಮೆರವಣಿಗೆ ಹಾಗೂ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ. ಆರ್ಟ್ ಆಫ್ ಲೀವಿಂಗ್ ನ ರವಿಶಂಕರ್ ಗುರೂಜಿ, ಸಮಾಜಸೇವಕ ಅಗ್ನಿ ವೇಶ್ ಹಾಗೂ ನಿರ್ದೇಶಕ ಮಹೇಶ್ ಭಟ್ ಅವರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಲಿದ್ದಾರೆ ಎಂದು ಮದ್ನಿ ತಿಳಿಸಿದರು.
(ದಟ್ಸ್ ಕನ್ನಡವಾರ್ತೆ)
ನಗರದ ಐಐಎಸ್ಸಿ ದಾಳಿ ರುವಾರಿ ಹಂಜಾ ಹತ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+