ನಾಷ್ಟಾಗಾಗಿ ಶಿಷ್ಟಾಚಾರ ಬದಿಗಿಟ್ಟ ಯಡಿಯೂರಪ್ಪ
ಬೆಂಗಳೂರು, ಜ. 28 : ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮಂಗಳವಾರ ಬೆಳಗ್ಗೆ ಇಡ್ಲಿ-ವಡೆ ಚಟ್ನಿ ಸವಿಯುವ ಮನಸ್ಸಾಯಿತು. ಎಲ್ಲ ರಾಜಕೀಯ ಜಂಜಡಗಳನ್ನು ಬದಿಗಿರಿಸಿ, ನೇರವಾಗಿ ಶಂಕರಪುರದ ಬ್ರಾಹ್ಮಣರ ಕಾಫಿ ಬಾರ್ ಗೆ ಬಂದೇಬಿಟ್ಟರು. ಜನಸಾಮಾನ್ಯರಂತೆ ಬಿಡುಬೀಸಾಗಿ ಹೋಟೆಲ್ ಮುಂದೆ ಬಂದ ಮುಖ್ಯಮಂತ್ರಿ ಉಪಹಾರವನ್ನು ಮೈಮರೆತು ಆಸ್ವಾಧಿಸಿದರು.
ಹೌದು, ಕೇಶವಕೃಪಾಗೆ ಭೇಟಿ ನೀಡುವ ಮುನ್ನ ಬೆಳಗ್ಗೆ 10.30ರ ಸುಮಾರಿಗೆ ಯಾವುದೇ ಮುನ್ಸೂಚನೆ ಇಲ್ಲದೆ ಕಾಫಿ ಬಾರ್ ಗೆ ಆಗಮಿಸಿದ ಮುಖ್ಯಮಂತ್ರಿ ಜತೆಯಲ್ಲಿ ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣೀಕ್ ಕೂಡ ಇದ್ದರು. ನಮ್ಮ ಹೋಟೆಲ್ ಗೆ 44 ವರ್ಷ ತುಂಬಿ 45ನೇ ವರ್ಷಕ್ಕೆ ಕಾಲಿರಿಸುತ್ತಿದೆ. ಈ ಶುಭ ಗಳಿಗೆಯಲ್ಲಿ ಮುಖ್ಯಮಂತ್ರಿ ನಮ್ಮ ಹೋಟೆಲ್ ಗೆ ಬಂದಿದ್ದು ನಮಗೆ ಅತೀವ ಸಂತಸ ತಂದಿದೆ. ಹಾಗೆಯೇ ಮುಖ್ಯಮಂತ್ರಿಗಳ ಈ ಅಚಾನಕ್ ಭೇಟಿ ನಮಗೆ ಭಾರಿ ಖುಷಿ ತಂದಿದೆ ಎಂದು ಬ್ರಾಹ್ಮಣರ ಕಾಫಿ ಬಾರ್ ಮಾಲೀಕ ರಾಧಾಕೃಷ್ಣ ಅಡಿಗ ಸಂತಸ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ, ಎಸ್.ಎಂ.ಕೃಷ್ಣ ಅವರು ತಮ್ಮ ಅಧಿಕಾರವಧಿಯಲ್ಲಿ ನಮ್ಮ ಹೋಟೆಲ್ ಗೆ ಬಂದಿದ್ದರು. ಬಿಜೆಪಿ ನಾಯಕರಾದ ಸದಾನಂದಗೌಡ, ಆರ್.ಅಶೋಕ್, ಡಿ.ಎಚ್.ಶಂಕರಮೂರ್ತಿ, ಕೃಷ್ಣಯ್ಯ ಶೆಟ್ಟಿ, ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಮತ್ತು ತಿಪ್ಪಣ್ಣ ಆಗಾಗ ನಮ್ಮ ಹೋಟೇಲ್ ಗೆ ಭೇಟಿ ನೀಡುತ್ತಾರೆ ಎಂದು ರಾಧಾಕೃಷ್ಣ ಅಡಿಗ ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)
ವೆರೈಟಿ ವೆರೈಟಿ ಇಡ್ಲಿ ವಡಾ
ಮಲ್ಲಿಗೆ ಹೂ ಅಲ್ಲವಿದು ಅಕ್ಕಿ ಇಡ್ಲಿ
ಕ್ಯಾರೆಟ್ ವಡೆ ಇನ್ನೊಂದು ಕೊಡೆ!
ಸ್ವಲ್ಪ ಸಿಹಿ, ಸ್ವಲ್ಪ ಹುಳಿ ದಹಿ ಇಡ್ಲಿ
ಏನಿದು ವಿಟಮಿನ್ ತಟ್ಟೆ ಇಡ್ಲಿ?
ಓ ಇಡ್ಲಿಯೇ ನೀನು ಬಲು ಡೆಡ್ಲಿಯೇ?
ಡೆಡ್ಲಿ ಕಾಂಬಿನೇಶನ್ ಮತ್ತು ಇಡ್ಲಿ ಕಾಂಬಿನೇಶನ್..












Click it and Unblock the Notifications