15 ಅಭಿವೃದ್ಧಿ ಯೋಜನೆಗಳಿಗೆ ಸರ್ಕಾರದ ಅಸ್ತು
ಬೆಂಗಳೂರು, ಜ. 28 : ಉತ್ತರ ಕರ್ನಾಟಕಕ್ಕೆ 8 ಅಭಿವೃದ್ಧಿ ಯೋಜನೆ ಸೇರಿದಂತೆ 15 ಯೋಜನೆಗಳಿಗೆ ರಾಜ್ಯ ಸರ್ಕಾರದ ಉನ್ನತ ಸಮಿತಿ ಅನುಮೋದನೆ ನೀಡಿದೆ. ಯೋಜನೆಗಳಲ್ಲಿ ಸಿಂಹಪಾಲು ಉತ್ತರ ಕರ್ನಾಟಕ್ಕೆ ಸಂದಿದ್ದರೆ ಉಳಿದ 7 ಯೋಜನೆಗಳು ದಕ್ಷಿಣ ಕರ್ನಾಟಕದ ಪಾಲಾಗಿವೆ.
ಸಮಿತಿ ಅನುಮೋದಿಸಿರುವ ಯೋಜನೆಗಳು, ಈ ಯೋಜನೆಗಳಲ್ಲಿ ಹೂಡಲಾಗುತ್ತಿರುವ ಬಂಡವಾಳ, ಸೃಷ್ಟಿಯಾಗುತ್ತಿರುವ ಉದ್ಯೋಗ ಮತ್ತು ಯೋಜನೆ ಅನುಷ್ಠಾನದ ಕಾಲಾವಧಿಯ ಕುರಿತು ಬುಧವಾರ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ವಿವರ ನೀಡಿದರು.
ಉಕ್ಕು, ಕಬ್ಬಿಣ ಮತ್ತು ಆರ್ಥಿಕ ವಲಯದಲ್ಲಿ ಹೆಚ್ಚಿನ ಬಂಡವಾಳ ಹೂಡಲಾಗುತ್ತಿದ್ದು ಈ ಯೋಜನೆಗಳಿಂದ 69,900 ಉದ್ಯೋಗಗಳು ಸೃಷ್ಟಿಯಾಗಲಿವೆ. ಒಟ್ಟು 25,500 ಕೋಟಿ ರು. ಬಂಡವಾಳ ಹೂಡಲಾಗುತ್ತಿದೆ. ಮುಂಬರುವ 2 ಅಥವಾ 3 ವರ್ಷಗಳಲ್ಲಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.
ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕಕ್ಕೆ ನೀಡಿದ್ದ ವಾಗ್ದಾನವನ್ನು ಯಡಿಯೂರಪ್ಪ ಉಳಿಸಿಕೊಂಡಿದ್ದಾರೆ. ಬಾಲಗಕೋಟೆಯ ಆಲಮಟ್ಟಿಯ ಬಳಿ ಪ್ರಾರಂಭಿಸಲಾಗುತ್ತಿರುವ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆಯಿಂದ 17 ಸಾವಿರ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications