ಇಂದಿರಾನಗರದಲ್ಲಿ ರಸ್ತೆ ಅಪಘಾತ:ನಾಲ್ಕು ಬಲಿ
ಬೆಂಗಳೂರು, ಜ.24: ವಾಯು ಸಂಚಾರ ಹೊರಟಿದ್ದ ಪಾದಚಾರಿಗಳ ಮೇಲೆ ಕಾರನ್ನು ಹರಿಸಿ ನಾಲ್ಕು ಮಂದಿಯನ್ನು ಬಲಿ ತೆಗೆದುಕೊಂಡು ಚಾಲಕ ಪರಾರಿಯಾದ ಘಟನೆ ಬೆಂಗಳೂರಿನ ಇಂದಿರಾನಗರದಲ್ಲಿ ಶನಿವಾರ(ಜ.24) ಮುಂಜಾನೆ ನಡೆದಿದೆ.
ಹೋಂಡಾ ಅಕಾರ್ಡ್ ವಾಹನದ ಚಾಲಕ ಪಾದಚಾರಿಗಳಿಗೆ ಡಿಕ್ಕಿ ಹೊಡೆದು ನಂತರ ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ. ಚಾಲನಕ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಅವಘಡದಲ್ಲಿ ಒಬ್ಬರಿಗೆ ತೀವ್ರವಾಗಿ ಗಾಯವಾಗಿದೆ.
ಗಾಯಗೊಂಡ ವ್ಯಕ್ತಿಯನ್ನು ಸಮೀಪದ ಮಣಿಪಾಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಮೃತಪಟ್ಟವರನ್ನು ಡಾ.ಪಾಥನೂರು, ಕೆಂಪೇಗೌಡ ಮತ್ತು ಸಿದ್ಧಯ್ಯ ಎಂದು ಗುರುತಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications