ಲೋಕಾಯುಕ್ತ ದಾಳಿ 8 ಕೋಟಿ ರು ಮೌಲ್ಯ ವಶ
ಬೆಂಗಳೂರು, ಜ. 23 : ಭ್ರಷ್ಟರ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ಪೊಲೀಸರು ಇಂದು ರಾಜ್ಯದ ವಿವಿಧೆಡೆ ಕಾರ್ಯಚರಣೆ ಮುಂದುವರೆಸಿ 7 ಮಂದಿ ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಅಪಾರ ಪ್ರಮಾಣದ ಸ್ಥಿರಾಸ್ತಿ, ಚರಾಸ್ಥಿ ಸೇರಿ ಒಟ್ಟು 8 ಕೋಟಿ ಮೌಲ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಎನ್ ಸಂತೋಷ ಹೆಗಡೆ ತಿಳಿಸಿದ್ದಾರೆ.
ಕಾರ್ಯಾಚರಣೆ ಶೇ. 70 ರಷ್ಟು ಮುಗಿದಿದ್ದು, ಸಿಕ್ಕಿ ಬಿದ್ದಿರುವ ಭ್ರಷ್ಟ ಅಧಿಕಾರಗಳು ವಿವಿಧ ಬ್ಯಾಂಕ್ ಅಪಾರ ಪ್ರಮಾಣದ ಹಣ ಸಂಗ್ರಹಿಸಿರುವ ಮಾಹಿತಿ ದೊರೆತಿದೆ. ಇಂದು ಮತ್ತು ನಾಳೆ ಇವರ ಬ್ಯಾಂಕ್ ಅಕೌಂಟ್ ಗಳ ಪರಿಶೀಲನೆ ನಡೆಸಲಾಗುವುದು ಎಂದು ಅವರು ಹೇಳಿದರು. ಇಂದು ಲೋಕಾಯುಕ್ತರು ನಡೆಸಿದ ಕಾರ್ಯಚರಣೆಯಲ್ಲಿ ಬಿಬಿಎಂಪಿ ಇಂಜಿನಿಯರ್ ಶಿವರಾಂ ದೊಡ್ಡ ಬಲಿಯಾಗಿದ್ದು, ಗದಗ ಜಿಲ್ಲೆಯಲ್ಲಿ ಆಹಾರ ಮತ್ತು ನಾಗರಿಕ ಇಲಾಖೆಯಲ್ಲಿ ವ್ಯವಸ್ಥಾಪಕರಾಗಿ ಕೆಲಸ ನಿರ್ವಹಿಸುತ್ತಿರುವ ಶಿವಪ್ಪ ಗಡ್ಡದವರ್ ಕಡಿಮೆ ಸಂಪತ್ತು ಗಳಿಸಿದ ಅಧಿಕಾರಿ ಎಂದು ಹೆಗ್ಡೆ ತಿಳಿಸಿದ್ದಾರೆ.
ಬೆಂಗಳೂರು, ಮೈಸೂರು, ರಾಯಚೂರು, ಗದಗ, ಹಾವೇರಿ ಜಿಲ್ಲೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಗಳ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ್ದು, ತಪಾಸಣೆ ನಡೆದಿದೆ. ಅಕ್ರಮವಾಗಿ ಸಂಪಾದಿಸಿದ್ದ ಚಿನ್ನ, ನಗದು, ಆದಾಯಕ್ಕಿಂತ ಹೆಚ್ಚಾಗಿ ಗಳಿಸಿದ್ದ ಅಪಾರ ಪ್ರಮಾಣದ ಆಸ್ತಿಪಾಸ್ತಿಗೆ ಸಂಬಂಧಿಸಿದ ದಾಖಲೆ ಪತ್ರಗಳು ಪರಿಶೀಲನೆ ಮುಂದುವರೆದಿದೆ. ಪೊಲೀಸ್, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ಜಿಲ್ಲಾ ಪಂಚಾಯತ್ ಅರಣ್ಯ ಇಲಾಖೆಗಳ ಭ್ರಷ್ಟ ಅಧಿಕಾರಿಗಳ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಲಾಗಿದೆ.
ಬಲೆ ಬಿದ್ದ ಭ್ರಷ್ಟ ಅಧಿಕಾರ ವಿವರ ಇಂತಿದೆ:
ಶಿವಪ್ಪ
ಗಡ್ಡದವರ್
:
ಆಹಾರ
ನಿಗಮ
ವ್ಯನಸ್ಥಾಪಕ
ಗದಗ
(47.50
ಲಕ್ಷ
ರುಪಾಯಿಗಳು
)
ಸಯ್ಯದ್
ನುಸರತ್
ಅಲೀ
-
ಇಂಜಿನಿಯರ್,
ಜಿಲ್ಲಾ
ಪಂಚಾಯತ್
ದೇವದುರ್ಗ,
ರಾಯಚೂರು
(1.21
ಕೋಟಿ
ರುಪಾಯಿಗಳು)
ಎಸ್
ಕೆ
ಡೊಂಬರ್
-
ವಾಣಿಜ್ಯ
ತೆರಿಗೆ
ಇನ್ಸ್
ಪೆಕ್ಟರ್,
ಹೊಸಪೇಟೆ
(
61
ಲಕ್ಷ
ರುಪಾಯಿಗಳು)
ರೇವಣ್ಣ
-
ಸಿಸಿಬಿ
ಇನ್ಸ್
ಪೆಕ್ಟರ್
ಬೆಂಗಳೂರು
(1.42
ಕೋಟಿ
ರುಪಾಯಿಗಳು
)
ರಾಜೀವ
-
ಗಣಿ
ಭೂವಿಜ್ಞಾನ
ಇಲಾಖೆ
ಬೆಂಗಳೂರು
(
1.22
ಕೋಟಿ
ರುಪಾಯಿಗಳು)
ಎಂ
ಸಿ
ನಾರಾಯಣಗೌಡ
-
ಅರಣ್ಯ
ಇಲಾಖೆ
ಡಿಐಜಿ
(1.42
ಕೋಟಿ
ರುಪಾಯಿಗಳು)
ಶಿವರಾಮ್
-
ಕಿರಿಯ
ಇಂಜಿನಿಯರ್
ಬಿಬಿಎಂಪಿ
ಬೆಂಗಳೂರು
(
1.62
ಕೋಟಿ
ರುಪಾಯಿಗಳು)
(ದಟ್ಸ್
ಕನ್ನಡ
ವಾರ್ತೆ)
7
ಮಂದಿ
ಭ್ರಷ್ಟರು
ಲೋಕಾಯುಕ್ತರ
ಬಲೆಗೆ