ಪಾವಗಡ : ಸೇತುವೆ ಕೆಳಗೆ ಸಜೀವ ಬಾಂಬ್ ಪತ್ತೆ
ಪಾವಗಡ, ಜ. 18 : ಇಲ್ಲಿನ ವೆಂಕಟಮ್ಮನಹಳ್ಳಿ ಸೇತುವೆ ಕೆಳಗೆ ನಾಲ್ಕು ಬಾಂಬ್ ಗಳನ್ನು ಹುದುಗಿರಿಸಿ ಸ್ಫೋಟಿಸುವ ಸಂಚನ್ನು ಪಾವಗಡ ಪೊಲೀಸರು ವಿಫಲಗೊಳಿಸಿದ್ದಾರೆ. ಆದರೆ ಸಜೀವ ಬಾಂಬ್ ಗಳ ನಿಷ್ಕ್ರೀಯಗೊಳಿಸಲು ಹರಸಾಹಸ ಮಾಡುತ್ತಿದ್ದಾರೆ. ಬಾಂಬ್ ನಿಷ್ಕ್ರೀಯ ದಳ ಘಟನಾ ಸ್ಥಳಕ್ಕೆ ತೆರೆಳುತ್ತಲಿದೆ ಪೊಲೀಸ್ ಮೂಲಗಳು ತಿಳಿಸಿವೆ. ಪ್ರಕರಣದಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಘಟನೆ ತಿಳಿಯುತ್ತಿದ್ದಂತೆಯೇ ತುಮಕೂರು ಜಿಲ್ಲಾ ವರಿಷ್ಠಾಧಿಕಾರಿ ಡಾ ಹರ್ಷ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಕಳೆದ ಡಿಸೆಂಬರ್ 31 ರಂದು ಅಂಧ್ರಪ್ರದೇಶದ ಅನಂತಪುರದಲ್ಲಿ ಬಂಧಿಸಲಾಗಿದ್ದ ನಕ್ಸಲೀಯ ಪೆದ್ದಣ್ಣನ ವಿಚಾರಣೆ ನಡೆಸಿದ ಪೊಲೀಸರಿಗೆ ವೆಂಕಟಮ್ಮನಹಲ್ಳಿ ಬಳಿಯ ಸೇತುವೆ ಕಳೆಗೆ ಬಾಂಬ್ ಹುದುಗಿಸಲಾದ ಮಹತ್ವದ ಸುಳಿವು ಸಿಕ್ಕಿದೆ. ತಕ್ಷಣ ಕಾರ್ಯಪ್ರವೃತ್ತರಾದ ಆಂಧ್ರಪ್ರದೇಶ ಪೊಲೀಸರು ಪಾವಗಡ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸೇತುವೆಗೆ ತೆರಳಿದ ಪೊಲೀಸರು ಹುದುಗಿಸಿ ಇಡಲಾಗಿದ್ದ ಬಾಂಬ್ ಗಳನ್ನು ನಿಷ್ಕ್ರಿಯಗೊಳಿಸುವ ಕಾರ್ಯ ಮುಂದುವರೆದಿದೆ.
(ದಟ್ಸ್ ಕನ್ನಡ ವಾರ್ತೆ)