371 ನೇ ಕಲಂ ತಿದ್ದುಪಡಿಗೆ ಕರವೇ ಆಗ್ರಹ
ರಾಯಚೂರು/ ದಾವಣಗೆರೆ, ಜ. 18 : ಸಂವಿಧಾನದ 371 ನೇ ಪರಿಚ್ಛೇದಕ್ಕೆ ತಿದ್ದುಪಡಿ ಸೇರಿದಂತೆ ಗಡಿ ಭಾಗದ ಸಮಸ್ಯೆಯನ್ನು ಶೀಘ್ರದಲ್ಲಿ ಬಗೆಹರಿಸುವಂತೆ ಆಗ್ರಹಿಸಿ ರಾಯಚೂರು ಮತ್ತು ದಾವಣಗೆರೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತ(ಪ್ರವೀಣ್ ಶೆಟ್ಟಿ ಬಣ)ರು ಭಾನುವಾರ ರೈಲು ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ನೂರಾರು ಕರವೇ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು ನಂತರ ಬಿಡುಗಡೆ ಮಾಡಿದರು.
ಕೇಂದ್ರ ಸರ್ಕಾರ ಅನೇಕ ದಿನಗಳಿಂದ ರಾಜ್ಯದ ಅಭಿವೃದ್ದಿ ಕುರಿತು ಮಲತಾಯಿ ಧೋರಣೆ ಅನುಸರಿಸುತ್ತಲೇ ಬಂದಿದೆ. ಈ ಮೂಲಕ ಕನ್ನಡಿಗರಿಗೆ ಭಾರಿ ಪ್ರಮಾಣದ ವಂಚನೆ ಮಾಡಿದೆ ಎಂದು ಆರೋಪಿಸಿದರು. ಉತ್ತರ ಕರ್ನಾಟಕ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಂವಿಧಾನದ 371 ಪರಿಚ್ಛೇದಕ್ಕೆ ಶೀಘ್ರದಲ್ಲಿ ವಿದರ್ಭ ಮಾದರಿಯಲ್ಲಿ ತಿದ್ದುಪಡಿ ತರಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೇ ಬೆಳಗಾವಿ, ಕಾಸರಗೋಡು ಗಡಿ ಸಮಸ್ಯೆಗಳನ್ನು ಶೀಘ್ರ ಇತ್ಯರ್ಥಪಡಿಸಬೇಕೆಂದು ಪ್ರತಿಭಟನಾ ನಿರತ ಕರವೇ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಬೆಳಗಾವಿ ಅಧಿವೇಶನಕ್ಕೆ ಪ್ರತಿಯಾಗಿ ಎಂಇಎಸ್ ನಾಯಕರು ಮಹಾಮೇಳಾವ ಕಾರ್ಯಕ್ರಮ ಹಮ್ಮಿಕೊಂಡಿರುವ ಕ್ರಮವನ್ನು ತೀವ್ರವಾಗಿ ಖಂಡಿಸಿದ ಕರವೇ ಕಾರ್ಯಕರ್ತರು, ಕನ್ನಡ ನೆಲ ಬೆಳಗಾವಿಯನ್ನು ಯಾವ ಕಾರಣಕ್ಕೂ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಒಕ್ಕೂರಲಿನ ಕೂಗು ಹಾಕಿದರು. ಗಡಿ ತಂಟೆಗೆ ನೇತೃತ್ವ ವಹಿಸಿರುವ ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆ ಅವರನ್ನು ತರಾಟೆ ತೆಗೆದುಕೊಂಡರಲ್ಲದೇ, ಭಾಷೆ ಹೆಸರಿನಲ್ಲಿ ರಾಜಕೀಯ ಮಾಡುವುದನ್ನು ಶಿವಸೇನೆ ಕೈಬಿಡದಿದ್ದರೆ, ಅವರು ವಿರುದ್ಧ ಚಳವಳಿ ಆರಂಭಿಸಲಾಗುವುದು ಎಂದು ಕರವೇ ಕಾರ್ಯಕರ್ತರು ಎಚ್ಚರಿಕೆ ನೀಡಿದರು.
(ದಟ್ಸ್
ಕನ್ನಡ
ವಾರ್ತೆ)
ಪೂರಕ
ಓದಿಗೆ:
ಭಗವಾಧ್ವಜ
ಮುಟ್ಟಿದರೆ
ಕೈ
ಕಟ್
:
ರಾಮದಾಸ್
ಕರವೇ
ಸಮಾವೇಶ,
ಜ.18
ಮಾರ್ಗ
ಬದಲು
ಬೆಳಗಾವಿ:
ಕರವೇ
ಮೇಲೆ
ಪೊಲೀಸ್
ಪ್ರಹಾರ