ಮಾರ್ಗರೆಟ್ ಆಳ್ವಾಗೆ ಎಐಸಿಸಿಯಲ್ಲಿ ಮತ್ತೆ ಸ್ಥಾನ
ನವದೆಹಲಿ, ಜ.18: ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಟಿಕೇಟು ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಭಾರಿ ಗುಲ್ಲೆಬ್ಬಿಸಿ, ಪಕ್ಷದಿಂದ ಹೊರ ದಬ್ಬಿಸಿಕೊಂಡಿದ್ದ ಮಾರ್ಗರೆಟ್ ಆಳ್ವಾ ಅವರು ಮತ್ತೆ ಕಾಂಗ್ರೆಸ್ ನಲ್ಲಿ ಪ್ರಮುಖ ಹುದ್ದೆ ಪಡೆಯುವ ಸಾಧ್ಯತೆಗಳಿವೆ ಎಂದು ಸುದ್ದಿ ಹರಡಿದೆ.
ಲೋಕಸಭೆ ಚುನಾವಣೆಗೂ ಮುನ್ನ ಎಐಸಿಸಿ ಪುನಾರಚನೆಯಾಗಲಿದೆ ಹಾಗೂ ಸ್ಥಾನ ಕಳೆದುಕೊಂಡ ಹಾಗೂ ಬಂಡಾಯ ಕಾಂಗ್ರೆಸ್ಸಿಗರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ಹೈ ಕಮಾಂಡ್ ಯೋಚಿಸುತ್ತಿದೆ ಎನ್ನಲಾಗಿದೆ. ಮ್ಯಾಗಿ ಮೇಡಂ ಪುನರಾಗಮನ ಸುದ್ದಿಗೆ ರೆಕ್ಕೆ ಪುಕ್ಕೆಗಳು ಹುಟ್ಟಿಕೊಳ್ಳಲು ಕಾರಣವಿದೆ. ಶನಿವಾರ ಮಾರ್ಗರೆಟ್ ಆಳ್ವಾ ಅವರು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಆದರೆ ಮಾತುಕತೆಯ ವಿವರಗಳನ್ನು ನೀಡಲು ಇಬ್ಬರೂ ಮುಖಂಡರು ನಿರಾಕರಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications